ಹಿಜಾಬ್ ಪರ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡಾಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.
ಉಚ್ಚ ನ್ಯಾಯಾಲಯ ಹಿಜಾಬ್ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಬಗ್ಗೆ ಅನೇಕರು ವಿಷಾದ ವ್ಯಕ್ತಪಡಿಸಿದ್ದಾರೆ. ಅಮೀರ್-ಇ-ಶರಿಯತ್ ನಾಳೆ 17 ನೇ ಮಾರ್ಚ್ ಗುರುವಾರ ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲಾರೂ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ. ತ್ರಿ ಸದಸ್ಯ ನ್ಯಾಯಪೀಠ, ಫೆಬ್ರವರಿ 5 ರಂದು ಸರ್ಕಾರದ ಏಕರೂಪ ಸಮವಸ್ತ್ರ ಕಡ್ಡಾಯ ಎಂಬ ಆಧೇಶವನ್ನು ನ್ಯಾಯಲಾಯ ಕಾನೂನು ಬದ್ಧವಾಗಿ ಹೇಳಿದೆ. ನ್ಯಾಯಾಲಯ ಒಟ್ಟು 129 ಪುಟಗಳ ತೀರ್ಪನ್ನು ಪ್ರಕಟಿಸಿದೆ.
ಸಮವಸ್ತ್ರದ ಜೊತೆ ಹಿಜಾಬ್ಗೂ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರು ಈ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಉಡುಪಿಯಲ್ಲಿ ಮಾತನಾಡಿದ 6 ವಿದ್ಯಾರ್ಥಿನಿಯರು,ನಮಗೆ ನ್ಯಾಯಸಿಗುತ್ತೆ ಅನ್ನೋಕೊಂಡಿದ್ವಿ, ಆದರೆ ನ್ಯಾಯಾಲಯ ನಮಗೆ ನ್ಯಾಯ ಕೊಡಲಿಲ್ಲ ಎಂದು ಹೇಳಿದ್ದರು.
ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆದು ಕ್ಲಾಸ್ಗೆ ಹೋಕಲ್ಲ ಎಂದು ವಿದ್ಯಾರ್ಥಿನಿಯರು ಹೇಳ್ತಿದ್ದಾರೆ. ನಾವು ನ್ಯಾಯ ಸಿಗುವವರೆಗೂ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಕುರಾನ್ನಲ್ಲಿ ದೇಹವನ್ನು ಮುಚ್ಚಬೇಕೆಂಬ ಉಲ್ಲೇಖ ಇದೆ. ನಮಗೆ ಶಿಕ್ಷಣವೂ ಬೇಕು ಹಿಜಾಬ್ಬೂ ಬೇಕು ಅಂತ ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.