Kolar News: ಕೋಲಾರ: ಕೋಲಾರದಲ್ಲಿ ಮಾತನಾಡಿದ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ರಾಜ್ಯ ಸರ್ಕಾರ 8 ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಬೇಸಿಗೆ ಹೆಚ್ಚಿದ್ದು, ಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ಏರುತ್ತಿದೆ. ನೀರಿನ ಸಮಸ್ಯೆ, ಬರ ಪರಿಸ್ಥಿತಿ ಎದುರಾಗಿದ್ದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ರೈತರಿಗೆ ಪರಿಹಾರ ಕೊಡುವ ಜೆಲಸಕ್ಕೆ ಸರ್ಕಾರ ಕೈಹಾಕಿಲ್ಲ. ಮಾತೆತ್ತಿದರೆ ಕೇಂದ್ರದ ಮೇಲೆ ಬೆರಳು ತೋರಿಸಿ ತಪ್ಪಿಸಿಕೊಳ್ಳುತ್ತಿದ್ದಾರೆ. 692 ರೈತರು ಆತ್ಮಹತ್ಯೆ ಮಾಡಿಕೊಡಿದ್ದರೂ ಚಕಾರ ಎತ್ತುತ್ತಿಲ್ಲ. ಅನೇಕ ಕಡೆ ಅತ್ಯಾಚಾರಗಳು ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ನಿನ್ನೆ ಕಲಬುರಗಿಯಲ್ಲಿ ಎರಡು ಕೊಲೆಗಳಾಗಿವೆ. ಆನೆ ನಡೆದಿದ್ದೇ ದಾರಿ ಅಂತ ಸರ್ಕಾರ ನಡೆಯುತ್ತಿದೆ. ನಾವು ಮಾತಾಡಿದ್ರೆ ಬಿಜೆಪಿಯವರ ಮಾತುಗಳಿಗೆ ಸೊಪ್ಪು ಹಾಕಲ್ಲ ಎಂದು ಹೇಳುತ್ತಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದ ಬಗ್ಗೆ ಕ್ಷುಲ್ಲಕ ಕಾರಣ ಅಂತಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರು ಕೂಗಿಲ್ಲ ಅಂತಾರೆ. ನಾಸೀರ್ ಹುಸೇನ್ ಪತ್ರಕರ್ತರ ವಿರುದ್ಧವೇ ಕೆಟ್ಟದಾಗಿ ಮಾತಾಡ್ತಾರೆ. ಎಫ್ ಎಸ್ ಎಲ್ ವರದಿ ಬಂದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಟೋಟಲಿ ಫೇಲ್ಯೂರ್ ಆಗಿದೆ. ಜನರ ಪ್ರಾಣ, ಮಾನ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಮಟ್ಟಿಗೆ ದರಿದ್ರ ಸರ್ಕಾರ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಕಾಂಗ್ರೆಸ್ ನವರ ಮಾತು ಮಾತಿಗೆ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ದೇಶದ ರಾಷ್ಟ್ರಪತಿ ಮುರ್ಮು ಅವರನ್ನು ಅವಳು ಇವಳು ಅಂತ ಮಾತಾಡ್ತಾರೆ. ನಾವು ದಲಿತರ ರಕ್ಷಣೆ ಮಾಡುತ್ತೇವೆ ಅಂತ ಹೇಳ್ತಾರೆ. ದಲಿತರ ಹಣ 25 ಸಾವಿರ ಕೋಟಿ ರೂ ದುರುಪಯೋಗವಾಗಿದೆ. ಕಾಂಗ್ರೆಸ್ ನವರು ದಲಿತರ ಉದ್ದಾರಕರಾ..? ದಲಿತರನ್ನು ಮಂತ್ರಿ ಮಾಡಿ ದಲಿತರ ಕೈಯಿಂದಲೇ ದಲಿತರಿಗೆ ಅನ್ಯಾಯ ಮಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾಾರಿದ್ದಾರೆ.
ಕರ್ನಾಟಕದ ಮೋಸ್ಟ್ ಅವಿವೇಕಿ ಮಂತ್ರಿ ಅಂದ್ರೆ ಪ್ರಿಯಾಂಕ ಖರ್ಗೆ. ತಂದೆ ಖರ್ಗೆ ಹೆಸರಿಂದ ಅವನು ಚಲಾವಣೆ ಯಾಗುತ್ತಿದ್ದಾನೆ. ಪ್ರಿಯಾಂಕ ಖರ್ಗೆ ಸೂಪರ್ ಸಿಎಂ ಆಗಿದ್ದಾರೆ. ಅವರಿಗೆ ಯಾವ ವಿಷಯದ ಮೇಲೆ ಮಾತನಾಡಬೇಕು ಎಂದು ಗೊತ್ತಿಲ್ಲ. ಅವಿವೇಕಿ ಪ್ರಿಯಾಂಕ ಖರ್ಗೆ ಅವರು ಎಲ್ಲಾ ಬಗ್ಗೆನೂ ಮಾತಾಡ್ತಾರೆ. ಖರ್ಗೆ ಅವರ ಹೆಸರು ಇಲ್ಲಾಂದ್ರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲೋಕೆ ಆಗಲ್ಲ. ಖಾಸಗಿ ಸಂಸ್ಥೆಯ FSIL ವರದಿ ಕೊಟ್ಟವರ ಮೇಲೆ ಹೇಗೆ ಕ್ರಮ ತೆಗದುಕೊಳ್ಳುತ್ತೀರ? ಗೃಹ ಸಚಿವರು ಇದರ ಬಗ್ಗೆ ಮಾತಾಡಬೇಕು, ಆದ್ರೆ ಪ್ರಿಯಾಂಕ ಖರ್ಗೆ ಯಾರು? ಸಣ್ಣ ಸಣ್ಣ ಮಂತ್ರಿಗಳು ಸಣ್ಣ ಸಣ್ಣ ವ್ಯಕ್ತಿಗಳಾಗಿ ಮಾತಾಡ್ತಿದ್ದಾರೆ ಎಂದು ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.