Friday, June 20, 2025

Latest Posts

ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆಗೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ: ಇಂಡುವಾಳು ಸಚ್ಚಿದಾನಂದ

- Advertisement -
Shrirangapattana Political News: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಕಾಲತ್ತನ್ನು, ಕಾಂಗ್ರೆಸ್ ಕಾನೂನು ವಿಭಾಗ ಅಧ್ಯಕ್ಷರಾದ ಚಂದ್ರೇಗೌಡ ಅವರು ವಹಿಸಿದ್ದರು. ಈ ಕಾರಣಕ್ಕಾಗಿ ಕಾಂಗ್ರೆಸ್ ಚಂದ್ರೇಗೌಡರನ್ನು ವಜಾ ಮಾಡಿದೆ. ಕಾಂಗ್ರೆಸ್‌ನ ಈ ನಿರ್ಧಾರವನ್ನು ಖಂಡಿಸಿರುವ ಬಿಜೆಪಿಯ ಇಂಡುವಾಳು ಸಚ್ಚಿದಾನಂದ ಅವರು, ಚಂದ್ರೇಗೌಡ ಅವರನ್ನು ಸನ್ಮಾನಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸಚ್ಚಿದಾನಂದ್, ಶ್ರೀರಂಗಪಟ್ಟಣದಲ್ಲಿ ಹಿಂದೂ ಹುಲಿ ಶ್ರೀ ಕಲಡ್ಕ ಪ್ರಭಾಕರ್ ಭಟ್ಟರವರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಕಾಲತ್ತನ್ನು ವಹಿಸಿಕೊಂಡು, ಜಾಮೀನು ಮಂಜೂರು ಮಾಡಲು ವಾದ ಮಂಡಿಸಿದ ಶ್ರೀರಂಗಪಟ್ಟಣ ಕಾಂಗ್ರೆಸ್ ನ ಕಾನೂನು ವಿಭಾಗ ಅಧ್ಯಕ್ಷರಾದ ಶ್ರೀ ಚಂದ್ರೇಗೌಡ ರವರನ್ನು ವಜಾಮಾಡಿರುವ, ಕಾಂಗ್ರೆಸ್ ನ ಹಿಂದೂವಿರೋಧಿ ಧೋರಣೆಯನ್ನು ಖಂಡಿಸಿ, ಇಂದು ವಕೀಲರಾದ ಶ್ರೀ ಚಂದ್ರೇಗೌಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
https://karnatakatv.net/honorary-doctorate-from-hyderabad-to-mp-sumalatha-ambarish/
https://karnatakatv.net/background-of-ayodhya-programme-notice-for-strict-action-in-the-state-cm-siddaramaiah/
https://karnatakatv.net/actress-nayanthara-gave-a-statement-about-ramas-dialogue-in-the-movie-annapurni/
- Advertisement -

Latest Posts

Don't Miss