Wednesday, February 5, 2025

Latest Posts

ಪಾಕೀಕರಣ ಬಿತ್ತುವ ವಿದ್ರೋಹಿಗಳಿಗೆ ‘ ಕೇಸರಿ’ ದುಃಸ್ವಪ್ನದ ಅಸ್ತ್ರ: ಡಿಕೆ ವಿರುದ್ಧ ವಿಜಯೇಂದ್ರ ಗರಂ..

- Advertisement -

ಬೆಂಗಳೂರು: ನಿನ್ನೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್, ಪೊಲೀಸ್ ಅಧಿಕಾರಿಗಳ ಜೊತೆ, ಸಭೆ ನಡೆಸಿದ್ದು, ಪೊಲೀಸ್ ಇಲಾಖೆ ಕೇಸರಿಕರಣ ಮಾಡಲು ಹೊರಟಿದ್ದೀರಾ..? ಈ ಸರ್ಕಾರದಲ್ಲಿ ಅದೆಲ್ಲಾ ನಡೆಯುವುದಿಲ್ಲ. ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲ್ ಹಾಕುತ್ತಾರೆ ಅಂದರೆ ಹೇಗೆ..? ನಮ್ಮ ಸರ್ಕಾರದಲ್ಲಿ ಹೀಗೆಲ್ಲ ಕೇಸರಿಕರಣ ಮಾಡೋಕ್ಕೆ ನಾವು ಬಿಡಲ್ಲ, ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರು ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.

ಬಿ.ವೈ.ವಿಜಯೇಂದ್ರ ಈ ಬಗ್ಗೆ ಟ್ವೀಟ್ ಮಾಡಿದ್ದು, ಮಾನ್ಯ ಡಿ.ಕೆ.ಶಿವಕುಮಾರ್ ರವರೇ ಕೇಸರೀಕರಣವೆಂದರೆ ಕೆಂಡಕಾರುವಿರೇಕೆ? ದಕ್ಷ ಪೋಲೀಸ್ ಅಧಿಕಾರಿಗಳ ಮೇಲೆ ನಿಮಗ್ಯಾಕಿಷ್ಟು ಅಸಹನೆ ? ‘ಕೇಸರಿ ‘ಸರ್ವತ್ರ ಸಾಧಕ ಕನ್ನಡಿಗ ಹನುಮನ ಸಂಕೇತ. ಸಂತರು, ಸಾತ್ವಿಕರು, ತಪಸ್ವಿಗಳ ಪ್ರತೀಕ, ಭಾರತೀಯ ಸಂಸ್ಕೃತಿಯ ಹೆಮ್ಮೆಯ ದ್ಯೋತಕ. ಪಾಕೀಕರಣ ಬಿತ್ತುವ ವಿದ್ರೋಹಿಗಳಿಗೆ ‘ ಕೇಸರಿ’ ದುಃಸ್ವಪ್ನದ ಅಸ್ತ್ರ ಎಂದು ಬರೆದುಕೊಂಡಿದ್ದಾರೆ.

ಡಾ.ಶಿವರಾಜ್‌ಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟ ರಣ್ದೀಪ್ ಸೂರ್ಜೆವಾಲಾ..

ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಎಸ್.ಆರ್.ಪಾಟೀಲ್..

ಅಂಬರೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ “ಅಂತ” ಮರು ಬಿಡುಗಡೆ

- Advertisement -

Latest Posts

Don't Miss