Friday, June 20, 2025

Latest Posts

ಪಾದಾಭ್ಯಂಗ ಮಾಡುವುದರಿಂದ ಆಗುವ ಉಪಯೋಗಗಳೇನು..? ಯಾರು ಪಾದಾಭ್ಯಂಗ ಮಾಡಬಾರದು..?

- Advertisement -

ಬಾಡಿ ಮಸಾಜ್ ಮಾಡುವುದರಿಂದ ನಮಗೆ ಚೈತನ್ಯ ಬರುತ್ತದೆ. ಕೈ ಕಾಲು ನೋವಿದ್ದರೆ, ಅದಕ್ಕೂ ರಿಲೀಫ್ ಸಿಗತ್ತೆ. ಆದ್ರೆ ಬಾಡಿ ಮಸಾಜನ್ನ ತಿಂಗಳಿಗೆ ಎರಡು ಬಾರಿ ಮಾಡಿದ್ರೆ ಸಾಕು. ಪಾದಾಭ್ಯಂಗ ಮಾತ್ರ ವಾರದಲ್ಲಿ ಎರಡರಿಂದ ಮೂರು ದಿನವಾದ್ರೂ ಮಾಡಬೇಕು. ಪಾದಾಭ್ಯಂಗ ಅಂದ್ರೆ ಪಾದಕ್ಕೆ ಎಣ್ಣೆ ಹಚ್ಚಿ ಮಾಲೀಶ್ ಮಾಡುವುದು. ಹಾಗಾದ್ರೆ ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಲಾಭವೇನು..? ಯಾರು ಪಾದಕ್ಕೆ ಎಣ್ಣೆ ಮಸಾಜ್ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನಿಂತುಕೊಂಡೇ ಕೆಲಸ ಮಾಡುವವರು, ಹೆಚ್ಚು ನಡೆದಾಡುವವರು ಪಾದಕ್ಕೆ ಎಣ್ಣೆ ಮಸಾಜ್ ಮಾಡಬೇಕು. ವಾರದಲ್ಲಿ ಮೂರರಿಂದ ನಾಲ್ಕು ದಿನವಾದ್ರೂ ನಾವು ತಲೆಗೆ ಮತ್ತು ಪಾದಕ್ಕೆ ಮಾಲೀಶ್ ಮಾಡಬೇಕು. ನೀವು ಪಾದಕ್ಕೆ ಮಾಲೀಶ್ ಮಾಡಿದರೆ, ಬರೀ ನಿಮ್ಮ ಪಾದಕ್ಕಷ್ಟೇ ಅಲ್ಲದೇ, ನಿಮ್ಮ ಇಡೀ ದೇಹದ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೇ, ನಿಮ್ಮ ಹಿಮ್ಮಡಿ ಒಡೆದಿದ್ದರೆ, ಅದಕ್ಕೂ ಒಳ್ಳೆಯದು.

ನಿಮಗೆ ನಿದ್ರಾಹೀನತೆ ಸಮಸ್ಯೆ ಇದ್ದಲ್ಲಿ ಕಾಲಿಗೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ, ಮಲಗಿದರೆ ಒಳ್ಳೆಯ ನಿದ್ದೆ ಬರುತ್ತದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪಾದದ ಮಸಾಜ್ ಮಾಡುವುದು ತುಂಬಾ ಅವಶ್ಯಕವಾಗಿದೆ. ಕಣ್ಣು ಒಣಗಿದಂತಾಗಿದ್ದರೆ, ಕಣ್ಣಿನ ಹೊಳಪು ಕಳೆದುಕೊಂಡಿದ್ದರೆ, ನೀವು ವೀಕ್ ಆಗಿ ಕಾಣುತ್ತಿದ್ದರೆ, ಸತತವಾಗಿ ಪಾದದ ಮಸಾಜ್ ಮಾಡಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.

ಕಾಲು ನೋವು, ಕೀಲು ನೋವು, ಮೈ ಕೈ ನೋವು, ಸುಸ್ತು ಏನೇ ಇದ್ದರೂ ನೀವು ಸತತವಾಗಿ ಪಾದಕ್ಕೆ ತೆಂಗಿನ ಎಣ್ಣೆಯ ಮಸಾಜ್ ಮಾಡಿದ್ದಲ್ಲಿ ಆರೋಗ್ಯದಲ್ಲಿ ಅಭಿವೃದ್ಧಿ ಕಾಣಬಹುದು. ನಿಮಗೆ ಸಾಧ್ಯವಾಗಿದ್ದಲ್ಲಿ ವಾರದಲ್ಲಿ ಒಮ್ಮೆ ಪಾದಕ್ಕೆ ತುಪ್ಪದ ಮಸಾಜ್ ಮಾಡಿ. ಇಲ್ಲವಾದಲ್ಲಿ ತೆಂಗಿನ ಎಣ್ಣೆಯ ಮಸಾಜ್ ಮಾಡಿದರೆ ಸಾಕು.

ಇನ್ನು ಯಾರು ಈ ಪಾದಾಭ್ಯಂಗ ಮಾಡಿಕೊಳ್ಳಬಾರದು ಅಂತಾ ಹೇಳೋದಾದ್ರೆ, ಯಾರು ಪಂಚಕರ್ಮ ಚಿಕಿತ್ಸೆ ಪಡೆದುಕೊಂಡಿರುತ್ತಾರೋ, ಅಂಥವರು ಪಾದಾಭ್ಯಂಗ ಮಾಡಬಾರದು. ಯಾರಿಗೆ ಜೀರ್ಣಕ್ರಿಯೆ ಸಮಸ್ಯೆ ಇರುತ್ತದೆಯೋ, ಅಂಥವರು ಪಾದಾಭ್ಯಂಗ ಮಾಡಬಾರದು. ಇಂಥವರು ಪಾದಕ್ಕೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿದರೆ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಾಗಾಗಿ ಇಂಥವರು ಪಾದಕ್ಕೆ ಎಣ್ಣೆ ಮಸಾಜ್ ಮಾಡಬೇಡಿ.

- Advertisement -

Latest Posts

Don't Miss