Political news: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಕ್ ಮತ್ತು ಭಾರತ ಗಡಿಯಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ Tweet ಮಾಡಿದ್ದು, ನಮ್ಮ ಸೈನ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸದ್ಯ ಭಾರತ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡ್ರೋನ್ಗಳು ತಯಾರಾಗಿದ್ದು ನಮ್ಮ ಬೆಂಗಳೂರಿನಲ್ಲಿ ಎಂಬ ಮಾಹಿತಿ ಹಂಚಿಕ“ಂಡಿದ್ದಾರೆ.
ಭಾರತೀಯ ಸೇನೆಯು ನಡೆಸುತ್ತಿರುವ “ಆಪರೇಷನ್ ಸಿಂಧೂರ್” ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗೂಡುಗಳ ಆಳಕ್ಕೆ ನುಗ್ಗಿ ರಕ್ಕಸರ ಹುಟ್ಟಡಗಿಸುತ್ತಿರುವ ಆತ್ಮಾಹುತಿ ಡ್ರೋನ್ ಗಳು (SkyStriker suicide drones) ಬೆಂಗಳೂರಿನಲ್ಲಿ ನಿರ್ಮಾಣಗೊಂಡಿವೆ. ಇದು ನಿಜಕ್ಕೂ ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ.
ಹೆಮ್ಮೆಯ ಪ್ರಧಾನಿ ಶ್ರೀ @narendramodiಜೀ ಅವರ ಸರ್ಕಾರದ ದೂರದೃಷ್ಟಿ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಮೇಕ್ ಇನ್ ಇಂಡಿಯಾ ಭಾಗವಾಗಿ ಈ ಅತ್ಯಾಧುನಿಕ ತಂತ್ರಜ್ಞಾನದ, ಸ್ವಯಂ ಚಾಲಿತ ಡ್ರೋನ್ ಗಳು ರೂಪುಗೊಂಡಿದ್ದು, ಈ ಹೊತ್ತು ಪರಿಣಾಮಕಾರಿಯಾಗಿ ಬಳಕೆಗೆ ಬಂದಿವೆ. ಭಾರತದ ಮಿಲಿಟರಿ ಶಕ್ತಿಯ ಜಂಘಾಬಲ ಹೆಚ್ಚಿಸಿ ಭಯೋತ್ಪಾದಕ ರಕ್ಕಸರು ಶತ್ರು ರಾಷ್ಟ್ರದ ಯಾವುದೇ ಮೂಲೆ, ಎಷ್ಟೇ ಆಳದಲ್ಲಿ ಅವಿತು ಕುಳಿತಿದ್ದರೂ, ಹುಡುಕಿಕೊಂಡು ಹೋಗಿ ನುಗ್ಗಿ ಸದೆಬಡಿಯುತ್ತಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಹುತಾತ್ಮ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ನಿಧನಕ್ಕೆ ಸಂತಾಪ
ಅಪ್ರತಿಮ ಧೈರ್ಯದಿಂದ ರಾಷ್ಟ್ರವನ್ನು ರಕ್ಷಿಸುತ್ತಾ ಹುತಾತ್ಮರಾದ ಭಾರತದ ನಿಜವಾದ ಪುತ್ರ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರ ಪರಮ ತ್ಯಾಗಕ್ಕೆ ನಮನಗಳು. ಅವರಂತಹ ವೀರರು ಸಾಯುವುದಿಲ್ಲ; ಅವರು ದೇಶಭಕ್ತಿಯ ಶಾಶ್ವತ ಜ್ವಾಲೆಗಳಾಗುತ್ತಾರೆ. ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ ಎಂದು Tweet ಮಾಡುವ ಮೂಲಕ ದಿನೇಶ್ ನಿಧನಕ್ಕೆ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
"ಪಾಕ್ ಭಯೋತ್ಪಾದಕರ ಹುಟ್ಟಡಗಿಸುತ್ತಿವೆ ಬೆಂಗಳೂರು ಡ್ರೋನ್ ಗಳು"
ಭಾರತೀಯ ಸೇನೆಯು ನಡೆಸುತ್ತಿರುವ “ಆಪರೇಷನ್ ಸಿಂಧೂರ್" ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗೂಡುಗಳ ಆಳಕ್ಕೆ ನುಗ್ಗಿ ರಕ್ಕಸರ ಹುಟ್ಟಡಗಿಸುತ್ತಿರುವ ಆತ್ಮಾಹುತಿ ಡ್ರೋನ್ ಗಳು (SkyStriker suicide drones) ಬೆಂಗಳೂರಿನಲ್ಲಿ ನಿರ್ಮಾಣಗೊಂಡಿವೆ. ಇದು ನಿಜಕ್ಕೂ… pic.twitter.com/5iWHJ7yCU2
— Vijayendra Yediyurappa (@BYVijayendra) May 8, 2025