Political News: ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆದ ಜೆಡಿಎಸ್- ಬಿಜೆಪಿ ಸಮನ್ವಯ ಸಭೆಯಲ್ಲಿ ಭಾಗವಹಿಸಿದ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಚುನಾವಣೆಗೆ ರಾಜ್ಯಮಟ್ಟದಲ್ಲಿ ಬಿಜೆಪಿ,ಜೆಡಿಎಸ್ ನಾಯಕರು ಸಮನ್ವಯತೆಗಾಗಿ ಸಭೆ ನಡೆಸಲಾಗಿದೆ.
ಮೇಲ್ಮಟ್ಟದಲ್ಲಿ ಒಪ್ಪಂದ ಆಗಿದೆ. ಆದ್ರೆ ಕಳಹಂತದ ಮೈತ್ರಿ ಬಗ್ಗೆ ಪ್ರಶ್ನೆ ಕೇಳಿದ್ದಿರಿ. ಕೆಲ ಹಂತದಲ್ಲೂ ಸಭೆ ಆಗುತ್ತಿದೆ. ದೇಶದ ಅಭಿವೃದ್ಧಿಗಾಗಿ ಮೋದಿ ಪ್ರಾಮಾಣಿಕ ಸೇವೆ ಮಾಡ್ತಿದ್ದಾರೆ. ಬಿಜೆಪಿ, ಜೆಡಿಎಸ್ ಗೆ ಒಂದೇ ಗುರಿ. ನರೇಂದ್ರ ಮೋದಿಯವರನ್ನು ಗೆಲ್ಲಿಸಿ ಕೊಡುಗೆ ನೀಡಬೇಕು ಎಂದು ನಿಖಿಲ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ನಿಖಿಲ್, 2019 ರ ಚುನಾವಣೆಯಲ್ಲಿ ಪಕ್ಷೇತರವಾಗಿ ಸುಮಲತಾ ಗೆದ್ದಿದ್ದಾರೆ. ಇದಾದ ಮೇಲೆ ಬಿಜೆಪಿ, ಮೋದಿಗೆ ಬೆಂಬಲವನ್ನು ಕೊಟ್ಟಿದ್ದಾರೆ. ಸುಮಲತಾ ಹಾಗೇ ಕಾರ್ಯಕರ್ತರ ಜೊತೆಯಲ್ಲೂ ನಮ್ಮ ಪಕ್ಷ ಕೆಲಸ ಮಾಡಲಿದೆ. ಕೋಲಾರ ನಿರ್ಧಾರ ಟಿಕೆಟ್ ನಿರ್ಧಾರ ಆಗಿದೆ. ಕುಮಾರಸ್ವಾಮಿ ಅವರು ಘೋಷಣೆ ಮಾಡುತ್ತಾರೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.
ಅಣ್ಣ-ಅತ್ತಿಗೆ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಸಂಸದ ಡಿ.ಕೆ.ಸುರೇಶ್