Sunday, September 8, 2024

Latest Posts

ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ, ಚುನಾವಣೆ ಬಂದ್ರೆ ಸಾಕು ಇವರ ಆಟ ಚಾಲು ಆಗತ್ತೆ: ಸಚಿವ ತಿಮ್ಮಾಪುರ

- Advertisement -

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದ್ದು, ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.

ಗಲಾಟೆ ಗಲಭೆ ಎಬ್ಬಿಸೋದು ಬಿಜೆಪಿ ಕೆಲಸ. ಡಿಕೆ ಸುರೇಶ ನಮ್ಮ ಭಾಗಕ್ಕೆ ಅನ್ಯಾಯ ಆಗ್ತಿದೆ ಅನ್ನೋದನ್ನ ಹೇಳಿದ್ದಾರೆ. ಅದನ್ನ ಇವರೆಲ್ಲ ದೇಶ ವಿಭಜನೆ ಮಾಡ್ತಾರೆ ಎಂದು ತಿರಚಿದ್ದಾರೆ. ಇವರು ಯಾವ ದೇಶ ಕಟ್ಟಿದ್ದಾರೆ..?  ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬಿಸಿದ್ದು ಇವರೆ. ಜಾತಿ ಧರ್ಮಗಳ ನಡುವೆ ನಾವೇನ ಇಭ್ಭಾಗ ಮಾಡಿದ್ದೇವೆ..? ರಾಮನ ದ್ವಜ, ಹನುಮನ ದ್ವಜ,ಶಿವಲಿಂಗದ ಮೇಲೆ ಬರೆದರೋ.. ಚುನಾವಣೆ ಬಂದ್ರೆ ಸಾಕು ಇವರದು ಆಟ ಚಾಲು ಆಗತ್ತೆ ಎಂದು ತಿಮ್ಮಾಪುರ ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಒಂದು ಅಭಿವೃದ್ಧಿ ಬಗ್ಗೆ ಕೇಳಬೇಡಿ. ಇವರ ಉದ್ಯೋಗ ಏನಂದ್ರೆ ಗಲಾಟೆ, ಗಲಭೆ, ಭಾವನಾತ್ಮಕವಾಗಿ ಮತ ಕೇಳೋದು. ಮೋದಿಯವರು ನಮ್ಮ ಹಣ ಕೊಡಬೇಕಲ್ಲ. ನಾವ ಭಿಕ್ಷೆ ಕೇಳತಿಲ್ಲ. ಇದೆಲ್ಲ ಚುನಾವಣೆ ಗಿಮಿಕ್. ನಮ್ಮ ಪಾಲಿನ ಹಣ ಕೊಡ್ತಿಲ್ಲ, ಇದರಲ್ಲಿ ಮೋದಿ ಅವರೇ ಇನ್ವಾಲ್ವ ಇದಾರೆ ಎಂದು ತಿಮ್ಮಾಪುರ್ ಹೇಳಿದ್ದಾರೆ.

ರಾಮ ಮಂದಿರ ಕಟ್ಟಿದರೆ ಸಾಲದು, ರಾಮರಾಜ್ಯ ಆಗಬೇಕು. ಬಡವರ ಬದತೀದಾರೆ ಎಂದ್ರೆ ನಾವ ಕೊಟ್ಟ ಗ್ಯಾರಂಟಿ ಇಂದ. ಮೋದಿ ಅವರದು ಇಗಲೇ ಸರ್ವಾಧಿಕಾರಿ ಧೋರಣೆ ಇದೆ. ಬಿಜೆಪಿಯವರದು ಬರೀ ಸರ್ಕಾರ ಬೀಳಸೋ ದಂಧೆ. ಯಾವತ್ತೂ ಜನ‌ ಅವರಿಗೆ ಬಹುಮತ ಕೊಟ್ಟಿಲ್ಲ. ಅಡ್ಡದಾರಿ ಮೂಲಕವೇ ಅವರ ಅಧಿಕಾರಕ್ಕೆ ಬಂದಿದ್ದು. ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ತಿಮ್ಮಾಪುರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು

ರಾಜ್ಯಕ್ಕೆ ಅನ್ಯಾಯವಾಗಿದರೂ ಒಬ್ಬ ಸಂಸದರೂ ಧ್ವನಿ ಎತ್ತಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್..!

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

- Advertisement -

Latest Posts

Don't Miss