Wednesday, June 18, 2025

Latest Posts

ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ.! ಡಿಸಿ ಶಿಲ್ಪಾ ನಾಗ್ ಮಾಹಿತಿ…

- Advertisement -

Chamarajanagara: ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ಇಂದು ಮಧ್ಯಾಹ್ನ 3:10 ಗಂಟೆಗೆ ಬಾಂಬ್ ಸ್ಪೋಟಿ ಸುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಖಾಸಗಿ ಏಜೆನ್ಸಿ ಮೂಲಕ ಇ-ಮೇಲ್ ಬಂದಿದ್ದು, ಇದರಿಂದ ಆತಂಕಗೊಂಡ ಜಿಲ್ಲಾಡಳಿತ ಎಲ್ಲಾ ಕಚೇರಿಯ ಅಧಿಕಾರಿ ಹಾಗೂ ನೌಕರ ಸಿಬ್ಬಂದಿಗಳನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಜಿಲ್ಲಾಡಳಿತ ಭವನ ಬಂದ್ ಮಾಡಲಾಗಿದೆ.

ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪನಾಗ್ ಅವರು ಈ ಕುರಿತು ಮಾತನಾಡಿ, ಇಂದು ಬೆಳಿಗ್ಗೆ 7:10ಕ್ಕೆ ಖಾಸಗಿ ಏಜೆನ್ಸಿ ಇ-ಮೇಲ್ ಮೂಲಕ ಜಿಲ್ಲಾ ಆಡಳಿತಭವನಕ್ಕೆ ಬಾಂಬ್ ಇಟ್ಟಿರುವದಾಗಿ ಮೇಲ್ ಬಂದಿದ್ದು, ಅದು 3:10 ಗಂಟೆಗೆ ಸ್ಪೋಟಗೊಳ್ಳುವುದೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಂಡು ಈಗಾಗಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಬಾಂಬ್ ನಿಷ್ಕ್ರಿಯ ದಳಗಳನ್ನು ಕರೆಸಿ ತನಿಖೆ ಮಾಡಲಾಗುತ್ತಿದೆ. ಈ ಮಾಹಿತಿ ಹುಸಿ ಅಥವಾ ನಿಜವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ, ಇತ್ತೀಚಿಗೆ ಕಾಶ್ಮೀರದ ಪೆಹಲ್ ಗಾಮ್ ನಲ್ಲಿ ಪ್ರವಾಸಿಗರಿಗೆ ಗುಂಡಿನ ಮಳೆ ಎರೆದಿದ್ದಾರೆ, ಹೀಗಾಗಿ ಇಲ್ಲೂ ಕೂಡ ಆತಂಕ ಉಂಟಾಗಿದೆ, ಕಚೇರಿಯ ಸುತ್ತಮುತ್ತಲು ಬಾಂಬ್ ಇಟ್ಟಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಸಿ.ಇ.ಒ. ಮೊನಾ ರೋಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

- Advertisement -

Latest Posts

Don't Miss