Thursday, June 19, 2025

Latest Posts

‘ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ’

- Advertisement -

Hubballi political News: ಹುಬ್ಬಳ್ಳಿ: ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರ, ಟಿಆರ್ಪಿಗಾಗಿ ಬಿಜೆಪಿಯವರು ಅಪರೇಷನ್ ಕಮಲದ ಬಗ್ಗೆ ಹೇಳ್ತಿದಾರೆ. ಸರ್ಕಾರ ಬೀಳಸ್ತೀವಿ ಅಂದ ತಕ್ಷಣ ಅವರ TRP ಜಾಸ್ತಿ ಆಗತ್ತೆ. ಆರು ತಿಂಗಳವರೆಗೂ ಸುಮ್ಮನಿರಬೇಕು ತಾನೇ ಎಂದ ಲಾಡ್,100 ದಿನ ಆಗಿಲ್ಲ ಆಗಲೇ ಸರ್ಕಾರ ಬೀಳಸ್ತೀವಿ ಅಂತಿದ್ದಾರೆ. ಸರ್ಕಾರ ಬೀಳಿಸೋದು ಬಿಜೆಪಿಗೆ ಹೊಸದಲ್ಲ. ಸರ್ಕಾರ ಬೀಳಸ್ತೀವಿ ಅನ್ನೋದು ಬಿಜೆಪಿ (BJP) ಮೈಂಡ್ ಸೆಟ್. ನಮಗೆ ಅದನ್ನು ಕೇಳಿ ಕೇಳಿ ಸಾಕಾಗಿದೆ. ಇದು ಬಿಜೆಪಿ ಕರ್ಮಕಾಂಡ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದಲ್ಲಿ ಯಾವ ಬಣಗಳು ಇಲ್ಲ. ಅವರ ಅವರ ಅಭಿಪ್ರಾಯ ಹೇಳಿರುತ್ತಾರೆ. ಏನೇ ಅಭಿಪ್ರಾಯ ಇದ್ರೂ ಹೈಕಮಾಂಡ್ ನಿರ್ಧಾರ ಅಂತಿಮ. ಸರ್ಕಾರ ದಿವಾಳಿತನ ಆಗಿದೆ ಎಂದು ಆರೋಪ ಮಾಡೋ ಮುಂಚೆ ಅವರು ಎಷ್ಟು ಹಣ ಕೊಟ್ರು. ಅವರನ್ನ ಕೇಳಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಶಿಸ್ತಿನಿಂದ ಇರಬೇಕು

ಸರ್ಕಾರದಲ್ಲಿ ಹಣ ಇಲ್ಲ ಅಂತ ಮಾತಾಡೋದನ್ನ ನಿಲ್ಲಿಸಲಿ. ಹಣ ಇರದೇ ಹೋದ್ರೆ ಸರ್ಕಾರ ಹೇಗೆ ನಡೆಯತ್ತೆ. ನಾವು ಗ್ಯಾರಂಟಿ ಹಣಕ್ಕೆ ದುಡ್ಡು ಕೊಟ್ಟಿದ್ದೇವೆ. ರಾಜಕಾರಣದಲ್ಲಿ ಸ್ವಲ್ಪ ಶಿಸ್ತಿನಿಂದ ಇರಬೇಕು. ಆದ್ರೆ ಬಹಳ ಡೀಸೆಂಟ್ ಇರಬಾರದು ಎಂದರು.

ಸಿದ್ದರಾಮಯ್ಯ ಅವರೇ ಬ್ರಾಂಡ್ ಅಂಬಾಸಿಡರ್

ಸಿದ್ದರಾಮಯ್ಯ ಸಾಹೇಬರು ಕರ್ನಾಟಕದ ಬ್ರಾಂಡ್ ಅಂಬಾಸಿಡರ್. ಅವರಿಗೆ ಆಳವಾದ ಜ್ಞಾನ ಇದೆ. ಅವರ ನೇತೃತ್ವದಲ್ಲಿ ಕನ್ನಡ ಉಳಿಸಲು, ಬೆಳಸಲು ನಾವು ಬದ್ದರಾಗಿದ್ದೇವೆ. ಕನ್ನಡ ಬೆಳಸಬೇಕಾಗಿದೆ ಎಂದು ಲಾಡ್ ತಿಳಿಸಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು

ಎರಡುವರೆ ವರ್ಷ ಆದ್ಮೇಲೆ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆಗೆ ಸಚಿವ ರಾಜಣ್ಣ ಹೇಳಿದ್ದೇನು..?

ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ

- Advertisement -

Latest Posts

Don't Miss