Saturday, May 17, 2025

ರಾಜ್ಯ

ಚೌಕಿದಾರ್ ಚೋರ್ ಹೇಳಿಕೆ- ಬೇಷರತ್ ಕ್ಷಮೆ ಕೋರಿದ ರಾಹುಲ್ ಗಾಂಧಿ

ನವದೆಹಲಿ: 'ಚೌಕಿದಾರ್​ ಚೋರ್​ ಹೈ ಅಂತ ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ' ಅಂತ ಹೇಳಿಕೆ ನೀಡಿ ನೋಟಿಸ್​ ಪಡೆದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಉನ್ನತ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದಾರೆ. ಮೂರು ಪುಟಗಳ ಅಫಿಡವಿಟ್​ ಸಲ್ಲಿಸಿರೋ ರಾಹುಲ್ ಬೇಷರತ್​ ಕ್ಷಮೆ ಯಾಚಿಸಿದ್ದಾರೆ. ಸುಪ್ರೀಂ ಕೋರ್ಟ್​ನ ಆದೇಶವನ್ನು ತಪ್ಪಾಗಿ ವಿವರಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಇದು ನಾನು ಉದ್ದೇಶಪೂರ್ವಕವಾಗಿ...

‘ಚಿನ್ನ’ದ ಮೀನಿಗೆ ಶುಭಕೋರಿದ ಸಿಎಂ

ಬೆಂಗಳೂರು: ಇತ್ತೀಚೆಗೆ ಬ್ರೆಜಿಲ್ ನಲ್ಲಿ ನಡೆದ ವಿಶ್ವ ಮಟ್ಟದ ಈಜು ಚಾಂಪಿಯನ್ಶಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ರಾಜ್ಯದ ಈಜುಪಟು ನಿರಂಜನ್ ಮುಕುಂದನ್ ಗೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಸಾವೋಪೋಲೋದಲ್ಲಿ ನಡೆದ ವಿಶ್ವ ಈಜು ಸರಣಿಯ 200 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ...

ನೀವು ಮತ್ತೆ ಸಿಎಂ ಆಗ್ಬೇಕು- ಸಿದ್ದು ‘ಪರ’ ಬ್ಯಾಟಿಂಗ್

ಬಳ್ಳಾರಿ: ಮೈತ್ರಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿ ಒಂದು ವರ್ಷವಾದ್ರೂ ಸಿದ್ದರಾಮಯ್ಯ ಮೇಲಿನ ಕ್ರೇಜ್ ಮಾತ್ರ ಅವರ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ಇದಕ್ಕೆ ಕಾಂಗ್ರೆಸ್ ನ ಮುಖಂಡರೂ ಹೊರತಾಗಿಲ್ಲ. ಇಂದು ಬಳ್ಳಾರಿಯ ಶ್ರೀ ಕ್ಷೇತ್ರ ಮೈಲಾರದ ಏಳುಕೋಟಿ ಭಕ್ತ ಕುಟೀರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮತ್ತೆ ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನ್ನೋ ಕೂಗು ಕೇಳಿಬಂತು. ಕಾರ್ಯಕ್ರಮದಲ್ಲಿ ಮಾತನಾಡ್ತಿದ್ದ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್, ಸಿದ್ದರಾಮಯ್ಯ ಮತ್ತೆ...

ಮೋದಿ ಹೇಳಿಕೆಗೆ ಬಿಜೆಪಿ ಹಿರಿಯ ಮುಖಂಡರಿಂದಲೇ ವಿರೋಧ.. !

ಮೈಸೂರು: ರಾಜೀವ್ ಗಾಂಧಿ ಭ್ರಷ್ಟಾಚಾರಿ ಅನ್ನೋ ಹೇಳಿಕೆ ವಿಚಾರವಾಗಿ ದೆಹಲಿ ಹೈಕೋರ್ಟ್ ಪ್ರಧಾನಿ ಮೋದಿಯನ್ನು ಆರೋಪ ಮುಕ್ತ ಮಾಡಿದ್ದಾಯ್ತು. ಆದ್ರೆ ಇದೀಗ ಸ್ವಪಕ್ಷದ ಹಿರಿಯ ಮುಖಂಡರೊಬ್ಬರಿಂದ ಮೋದಿ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಹೌದು ಇತ್ತೀಚೆಗೆ ಲಕ್ನೌ ನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿಯನ್ನು ಟೀಕಿಸೋ ಭರಾಟೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟರಾಗಿಯೇ...

ಬೆಳಗಾವಿಗೆ ತೆರಳಿದ ರಮೇಶ್ ಜಾರಕಿಹೊಳಿ- ಸಾಹುಕಾರ್ ಮುಂದಿನ ಪ್ಲಾನ್ ಏನು?

ಬೆಂಗಳೂರು: ರಾಜ್ಯ ಸಂಪುಟದಿಂದ ವಜಾಗೊಂಡು ತೀವ್ರ ಅಸಮಾಧಾನಗೊಂಡಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೀಗ ತಮ್ಮ ನಿಲುವು ಬದಲಿಸಿದಂತಿದೆ. ಹೌದು, ಕಳೆದ 4 ದಿನಗಳಿಂದಲೂ ಬೆಂಗಳೂರಿನಲ್ಲಿ ಆಪ್ತರೊಂದಿಗೆ ತಂಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಳಗ್ಗೆ ಗೋಕಾಕ್ ಗೆ ತೆರಳಿದ್ದಾರೆ. ತಾವೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಪ್ತ ಶಾಸಕರಿಂದಲೂ ರಾಜೀನಾಮೆ ಕೊಡಿಸ್ತೇನೆ ಅಂತ ಪಟಾಲಂ ಕಟ್ಟಲು...

‘ನಿಖಿಲ್ ಗೆದ್ದೇ ಗೆಲ್ತಾರೆ- ಅನುಕಂಪದಿಂದ ಮಂಡ್ಯ ಅಭಿವೃದ್ಧಿಯಾಗಲ್ಲ’

ಮಂಡ್ಯ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ, ಅವರಿಗೆ ಜನರ ಆಶೀರ್ವಾದ ಇದೆ ಅಂತ  ಮಳವಳ್ಳಿಯಲ್ಲಿ ಜೆಡಿಎಸ್ ಶಾಸಕ ಡಾ.ಅನ್ನದಾನಿ ಹೇಳಿದ್ದಾರೆ. ಇನ್ನು ಸುಮಲತಾ ಪತಿ ಅಂಬರೀಶ್ ಮೃತಪಟ್ಟಿದ್ದಾರೆ, ಅವರ ಮೇಲೆ ಅನುಕಂಪ ಇದೆ ಎಂದ ಶಾಸಕ, ನಮಗೆ ಅನುಕಂಪಕ್ಕಿಂತ ಅಭಿವೃದ್ಧಿ ಮುಖ್ಯ. ಪಕ್ಷೇತರ ಅಭ್ಯರ್ಥಿ ಗೆದ್ದರೆ ಅಭಿವೃದ್ಧಿ ಸಾಧ್ಯವಾಗೋದಿಲ್ಲ. ಅನುಕಂಪದಿಂದ ಹೆಚ್ಚುವರಿ ಅನುದಾನ...

ಕಾರು ಡಿಕ್ಕಿ- ನ್ಯಾಷನಲ್ ಲೆವಲ್ ಹಾಕಿಪಟು ದುರ್ಮರಣ

ಧಾರವಾಡ: ರಸ್ತೆ ದಾಟುತ್ತಿದ್ದ ವೇಳೆ ಕಾರ್ ಡಿಕ್ಕಿ ಹೊಡೆದು ರಾಷ್ಟ್ರಮಟ್ಟದ ಹಾಕಿ ಪ್ಲೇಯರ್ ಸುಜಾತಾ ಕೆರಳ್ಳಿ (೧೭) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಲೂಕಿನ ಮಾದನಬಾವಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಈ ಅಪಘಾತ ನಡೆದಿದ್ದು ಸುಜಾತಾ ತಮ್ಮತಂದೆಯೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ  ಎಮ್ ಎಚ್ 44 ಎ ಎಲ್  6977 ನಂಬರ್ ನ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ...

ಧೋನಿಗೆ ಪುತ್ರಿಯ ಕಿಡ್ನಾಪ್ ಬೆದರಿಕೆ…!

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ನು ಮಗಳು ಜೀವಾ ಕೂಡ ಅಪ್ಪನನ್ನೇ ಮೀರಿಸುವಂತೆ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದಾಳೆ. ಸದ್ಯ ಹನ್ನೆರಡನೇ ಐಪಿಎಲ್ ಟೂರ್ನಿ ನಡೆಯುತ್ತಿದ್ದು, ಟೂರ್ನಿಯುದ್ದಕ್ಕೂ  ಗ್ಯಾಲರಿಯಲ್ಲಿ ಕುಳಿತು ಅಪ್ಪನಿಗೆ ಜೀವಾ ಚಿಯರ್ ಮಾಡೋದ್ರ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾಳೆ....

“ಡಿಕೆಶಿಗೆ ಕಾಮನ್ ಸೆನ್ಸ್ ಇಲ್ವಾ..?”

ಹುಬ್ಬಳ್ಳಿ: ಕಾಂಗ್ರೆಸ್ ನ ದಿ ಮೋಸ್ಟ್ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ಇಂಥಾ ನೂರು ಡಿಕೆಶಿ ಬಂದ್ರೂ ಕುಂದಗೋಳದಲ್ಲಿ ಏನೂ ನಡೆಯೋಲ್ಲವೆಂದ ಶೆಟ್ಟರ್, ಡಿಕೆಶಿಗೆ ಕಾಮನ್ ಸೆನ್ಸ್ ಇಲ್ವಾ ಅಂತ ಟಾಂಗ್ ನೀಡಿದ್ದಾರೆ. ಕುಂದಗೋಳ ಉಪಚುನಾವಣಾ ಕಣದಲ್ಲಿರೋ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ...

‘ಪ್ರಧಾನಿ ಮೋದಿ ದುರ್ಯೋಧನನಂತೆ’- ಪ್ರಿಯಾಂಕಾ ಗಾಂಧಿ ಟೀಕೆ

ಹರಿಯಾಣ:ಲೋಕಸಭೆ ಚುನಾವಣೆಗೆ ಇನ್ನೇನು ತೆರೆ ಬೀಳಲಿದೆ. ಆದ್ರೆ ಈ ಮಧ್ಯೆ ರಾಜಕೀಯ ನಾಯಕರು ತಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ತಿದ್ದಾರೆ. ಹರಿಯಾಣದ ಅಂಬಾಲಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನ ದುರ್ಯೋಧನನಿಗೆ ಹೋಲಿಸಿದ್ದಾರೆ. ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳೋ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ಅಹಂಕಾರದಿಂದ ನಡೆದುಕೊಂಡ ದುರ್ಯೋಧನ. ಆತ ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ,...
- Advertisement -spot_img

Latest News

ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ನಾನೇ ಹೆಚ್ಚು ವಿರೋಧಿಸಿದ್ದೇನೆ : ಆದ್ರೆ ಆ ನಾಯಕನಿಗೆ ಸಹಾಯ ಮಾಡಿಲ್ಲ ; ಸಿದ್ದರಾಮಯ್ಯ ಹೀಗ್ಯಾಕಂದ್ರು..?

ವಿಜಯನಗರ : ನಾನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ತನಗೆ ಸಹಾಯ ಮಾಡಿದ್ದೆ ಎಂದು ಜನಾರ್ಧನ ರೆಡ್ಡಿ ಹೇಳಿಕೆ ಅಪ್ಪಟ ಸುಳ್ಳು. ಅವರು ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ...
- Advertisement -spot_img