Tuesday, May 12, 2026

ರಾಜ್ಯ

ಬಿಜೆಪಿ- ಜೆಡಿಎಸ್‌ನ 18 ರಿಂದ 20 ಶಾಸಕರು ಕಾಂಗ್ರೆಸ್‌ ಬಾಗಿಲು ತಟ್ತಿದ್ದಾರೆ : ಹೊಸ ಬಾಂಬ್‌ ಸಿಡಿಸಿದ ಎಂ.ಬಿ. ಪಾಟೀಲ್

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಕುರಿತು ನಡೆಯುತ್ತಿರುವ ಕದನಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಪೂರ್ಣ ವಿರಾಮ ಇಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಇದನೆಲ್ಲ ಗಮನಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್‌ ಮೌನಕ್ಕೆ ಶರಣಾಗಿದ್ದಾರೆ. ಆದರೆ ದಿಡೀರ್‌ ನಡೆದ ರಾಜಕೀಯ ಬೆಳವಣಿಗೆ ಹಿನ್ನೆಲೆ ಅವರು ದಿಲ್ಲಿಗೆ ಹಾರಿದ್ದಾರೆ. ಈ ನಡುವೆಯೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌...

ಬೀದಿನಾಯಿಗಳಿಗೆ ಬಿರಿಯಾನಿ ಮತ್ತು ಚಿಕನ್ ರೈಸ್ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟನೆ

ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ. ಇದು ಮಾನವ ದರ್ಜೆಯ ಆಹಾರವಲ್ಲ, ಇದು ನಾಯಿ ದರ್ಜೆಯ ಆಹಾರ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯದ ಕುರಿತು ಅನಿಮಲ್ ಹಸ್ಬೆಂಡ್ರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ. ಈ ಊಟಕ್ಕೆ ಹೆಸರಿಲ್ಲ. ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ....

ಸಿದ್ದರಾಮಯ್ಯ ರಾಜ್ಯದ ಸಿಎಂ, ನನ್ನ ರಾಜಕೀಯ ನಿವೃತ್ತಿಯಲ್ಲ, ಸ್ಪರ್ಧೆ ಖಚಿತ : ಮೈತ್ರಿಗೆ ಮಾಧುಸ್ವಾಮಿ ಸೆಡ್ಡು!

ತುಮಕೂರು : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಕಾನೂನು ಸಚಿವರಾಗಿದ್ದ ಚಿಕ್ಕನಾಯಕನ ಹಳ್ಳಿಯ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ಪಕ್ಷ ತೊರೆಯುವ ಚರ್ಚೆಗಳ ನಡುವೆಯೇ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು, ನಾನು ಸಂತೆಯಲ್ಲಿ ತಪ್ಪಿಸಿಕೊಂಡ ಮಗ, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೋ ಅವರ ಕಡೆಗೆ...

ಫಿಲ್ಮಿ ಸ್ಟೈಲ್ ದರೋಡೆಗೆ ಸಾಕ್ಷಿ : ಮಾಸ್ಟರ್‌ ಮೈಂಡ್‌ನ ಬಲೆಗೆ ಬೀಳಿಸಿದ್ದೇಗೆ ಪೋಲಿಸರು?

ಇಡೀ ಕಲಬುರಗಿ ಬೆಚ್ಚಿ ಬಿದ್ದಿದ್ದ ದರೋಡೆ ಕೇಸ್‌ ಗೆ ಟ್ವಿಸ್ಟ್‌ ಸಿಕ್ಕಿದೆ. ಶನಿವಾರ ಅಂದರೆ ನೆನ್ನೆ ಮಧ್ಯಾಹ್ನ 12.30ಕ್ಕೆ ಚಿನ್ನದಂಗಡಿಗೆ ನುಗ್ಗಿದ ನಾಲ್ವರು ಖದೀಮರು, ಗನ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದೀಗ ದರೋಡೆಕೋರರ ಬಗ್ಗೆ ಪೋಲೀಸರು ಮಹತ್ವದ ಸುಳಿವು ಪತ್ತೆ ಹಚ್ಚಿದ್ದಾರೆ. ದರೋಡೆ ಹಿಂದೆ ಇದ್ದಿದ್ದು ನಾಲ್ವರ ಕೈವಾಡವಲ್ಲ ಬದಲಿಗೆ...

ಮತ್ತೆ 6 ಹೃದಯ ಸ್ತಬ್ಧ : ರಾಜ್ಯದಲ್ಲಿ ನಿಲ್ಲದ ಹೃದಯಾಘಾತ ಪ್ರಕರಣಗಳು ಏನಾಗ್ತಿದೆ?

ಕರ್ನಾಟಕದಲ್ಲಿ ಅದರಲ್ಲೂ ಹಾಸನದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹೃದಯಾಘಾತ ಸಾವಿನ ಸರಣಿ ಮುಂದುವರಿದೆ. ನಿಂತಲ್ಲೇ ಕುಳಿತಲ್ಲೇ, ಕೆಲಸ ಕಾರ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಅದರಂತೆ ಇಂದು ಒಂದೇ ದಿನ ರಾಜ್ಯದಲ್ಲಿ ಆರು ಮಂದಿ ಹಾರ್ಟ್​ ಅಟ್ಯಾಕ್​ಗೆ ಬಲಿಯಾಗಿದ್ದಾರೆ. ಆರು ಮಂದಿ ಪೈಕಿ ಬಹುತೇಕರು 45 ವರ್ಷದೊಳಗಿನವರು ಎನ್ನುವುದು ಮತ್ತೆ ಆತಂಕ ಹೆಚ್ಚುವಂತೆ ಮಾಡಿದೆ. ಬೆಂಗಳೂರಿನ...

ಪರಿಷತ್‌ ಪಟ್ಟಿಗೆ ಬ್ರೇಕ್ : ಕೈ ನಾಯಕರು ಶಾಕ್‌! ; ನಿಜವಾಗಿ ಆಗಿದ್ದೇನು?

ಬೆಂಗಳೂರು : ರಾಜ್ಯದಲ್ಲಿ ಸಿಎಂ ಖರ್ಚಿ ಕದನ ಇನ್ನೊಂದು ಹಂತಕ್ಕೆ ಹೋಗಿ ತಲುಪುವ ಲಕ್ಷಣಗಳು ಗೋಚರವಾಗುತ್ತಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಳಗೊಳಗೆ ಕೆಂಡಕಾರುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್‌ ಇದೀಗ ಹೊಸ ದಾರಿಯನ್ನು ಹುಡುಕಿಕೊಂಡಿದ್ದಾರೆ. ಆ ಹಾದಿ ಹಿಡಿದು ಸಿದ್ದು ಕಟ್ಟಿ ಹಾಕಲು ಡಿಕೆಶಿ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಘೋಷಿಸಿರುವಂತೆ ರಾಜ್ಯ ವಿಧಾನ ಪರಿಷತ್‌ನ...

ನಮ್ಮ ತಂದೆಯ ಕಾಲದಿಂದಲೂ ಶಾಂತವಾಗಿದ್ದೇನೆ ಈ ಸಲ ಮಂತ್ರಿ ಆಗೇ ಆಗ್ತೀನಿ : ಶಾಸಕ ಡಾ. ಅಜಯ್‌ ಸಿಂಗ್‌ ವಿಶ್ವಾಸ

ಕಲಬುರಗಿ : ರಾಜ್ಯದಲ್ಲಿ ಕುರ್ಚಿ ಕದನ ನಡೆಯುತ್ತಿರುವಾಗಲೇ ಶಾಸಕರಲ್ಲಿ ಈಗಿನಿಂದಲೇ ಮಂತ್ರಿಗಿರಿಯ ಕನಸು ಚಿಗುರೊಡೆಯುತ್ತಿದೆ. ಸಚಿವ ಸಂಪುಟ ಪುನಾರಚನೆ ಮಾಡುವುದಿಲ್ಲ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದರೂ ಕೂಡ ಶಾಸಕರ ಅಧಿಕಾರ ದಾಹ ತೀರುತ್ತಿಲ್ಲ. ಇನ್ನೂ ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಆರು ಸಚಿವ ಸ್ಥಾನ ನೀಡಿದ್ದರೂ ಸಹ ಕಾಂಗ್ರೆಸ್ ಶಾಸಕ ಹಾಗೂ ಕೆಕೆಆರ್​ಡಿಬಿ ಅಧ್ಯಕ್ಷ...

“ಸಿದ್ದರಾಮಯ್ಯ ಅವರನ್ನು ಯಾರೂ ಏನು ಮಾಡೋಕಾಗಲ್ಲ, ಸಿದ್ದು ಕಂಡ್ರೆ ಕೆಲವರಿಗೆ ಹೊಟ್ಟೆ ಉರಿ”

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 42 ವರ್ಷ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕರಾಗಿದ್ದಾರೆ. ಅವರ ವಿರುದ್ಧ ಏನೇ ಆಪಾದನೆ ಮಾಡಿರೂ ಕೂಡ ಅದಕ್ಕೆ ಪೂರಕ ದಾಖಲೆಗಳು ಇರುವುದಿಲ್ಲ. ಈ ಮುನ್ನ ರಾಜಕಾರಣದಲ್ಲಿ ಕುರುಬ ಅಂತ ಹೇಳಲು ಆಗುತ್ತಿರಲಿಲ್ಲ. ಆದರೆ ಈಗ ನಾನು ಕುರುಬ ಎಂದು ಹೇಳಲು ಹೆಮ್ಮಯಿದೆ ಎಂದು ನಗರಾಭಿವೃದ್ದಿ...

ಇವ್ರು ಜನರಿಗೆ ಸುಳ್ಳು ಹೇಳಿ ಪಿಕ್ಚರ್‌ ನಡೆಸಿಕೊಂಡು ಹೋಗ್ತಿದ್ದಾರೆ : ಸುಡುಗಾಡಲ್ಲೂ ತೆಂಗಿನಕಾಯಿ ಒಡೆಯೋಕೂ ಜಿಎಸ್‌ಟಿ ಕಟ್ಟಬೇಕಂತೆ ; ಕೇಂದ್ರದ ವಿರುದ್ದ ಸಚಿವ ಲಾಡ್‌ ವಾಗ್ದಾಳಿ

ಚಿತ್ರದುರ್ಗ : ದೇಶದಲ್ಲಿ ಶೇಕಡಾ 70 ರಷ್ಟು ಜನರು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಇದರಿಂದ ಶ್ರೀಮಂತ ವರ್ಗದವರಿಗೆ ಅನುಕೂಲವಾಗುತ್ತಿದೆ. ಹಾಲು, ಮೊಸರು ಅರಿಶಿಣ -ಕುಂಕುಮಕ್ಕೂ ಶೇಕಡಾ 60 ರಿಂದ 70ರಷ್ಟು ಜಿಎಸ್‌ಟಿ ಕಟ್ಟಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಿಎಸ್‌ಟಿಯಿಂದ ದೇಶದಲ್ಲಿ...

ಆರು ದಶಕದ ಕನಸು ನನಸಾಗ್ತಿದೆ : BSY, ಬದಲಿಗೆ ಈ ಹೆಸರುಗಳನ್ನು ಇಡಬಹುದು ಎಂದ ರಾಘವೇಂದ್ರ

ಬೆಂಗಳೂರು : ಸಿಗಂದೂರು ಸೇತುವೆಗೆ ರಾಣಿ ಚೆನ್ನಬೈರಾದೇವಿ, ಕೆಳದಿ ರಾಣಿ ಚೆನ್ನಮ್ಮಾಜಿ, ಶರಾವತಿ ಸೇತುವೆ, ಅಂಬಾರಗೋಡ್ಲು-ಕಳಸವಳ್ಳಿ ಸೇರಿದಂತೆ ಇನ್ನಿತರ ಹೆಸರನ್ನು ಇಡುವ ಚರ್ಚೆಗಳು ನಡೆಯುತ್ತಿವೆ. ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಹೆಸರನ್ನಿಡುವಂತೆ ನ್ಯಾಯಾಲಯದ ಮೆಟ್ಟಿಲೂ ಏರಿದ್ದಾರೆ. ಹೀಗಿರುವಾಗ ಸೇತುವೆಗೆ ನಾಮಕರಣ ಮಾಡುವಾಗ ಅದ್ದರದ್ದೆ ಕೆಲವು ನಿಯಮಗಳಿರುತ್ತವೆ. ಅವುಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ ಎಂದು...
- Advertisement -spot_img

Latest News

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...
- Advertisement -spot_img