Friday, July 31, 2026

ಜಿಲ್ಲಾ ಸುದ್ದಿಗಳು

ತ್ರಿಮೂರ್ತಿಗಳ ಪವಾಡ ಕ್ಷೇತ್ರದಲ್ಲಿ ಏಪ್ರಿಲ್ 1ಕ್ಕೆ ಅದ್ಧೂರಿ ರಥೋತ್ಸವ ಸಂಭ್ರಮ!

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಹಳೆ ಪಾಳ್ಯ ಗ್ರಾಮದಲ್ಲಿರುವ ಐತಿಹಾಸಿಕ ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ಶತಮಾನಗಳ ಸಂಪ್ರದಾಯದ ಜಾತ್ರೆ ಸಂಭ್ರಮ ಮನೆಮಾಡಿದೆ. ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ಮಾರ್ಚ್ 31ರಂದು ಸಂಜೆ ಕಲ್ಯಾಣ ಮಹೋತ್ಸವ ಮತ್ತು ಏಪ್ರಿಲ್ 1ರಂದು ಬ್ರಹ್ಮ ರಥೋತ್ಸವ ಜರುಗಲಿವೆ. ದೇವಾಲಯದ ಸ್ಥಳ ಪುರಾಣಕ್ಕೂ ವಿಶೇಷ...

ಕರಗ ಸಂಭ್ರಮಕ್ಕೆ ಬೆಂಗಳೂರು ರೆಡಿ; ದೀಪಾಲಂಕಾರದಿಂದ ರಸ್ತೆ ಝಗಮಗ!

ಬೆಂಗಳೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಕರಗ ಉತ್ಸವಕ್ಕೆ ನಗರ ಸಜ್ಜಾಗಿದೆ. ಏಪ್ರಿಲ್ 1ರಂದು ನಡೆಯಲಿರುವ ಬೆಂಗಳೂರು ಕರಗ ಹಿನ್ನೆಲೆ, ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ಹೃದಯಭಾಗದಲ್ಲಿರುವ ಧರ್ಮರಾಯ ದೇವಸ್ಥಾನ ಸುತ್ತಮುತ್ತಲಿನ ಬೀದಿಗಳು ಈ ಬಾರಿ ಮೊದಲ ಬಾರಿಗೆ ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಸನ್ನತಿ ಬೀದಿ, ಜೆಸಿ ರಸ್ತೆ, ಕಾರ್ಪೋರೇಷನ್ ರಸ್ತೆ, SP ರಸ್ತೆ,...

ಕೆರೆಯಲ್ಲಿ ಈಜಲು ಹೋಗಿ SSLC ವಿದ್ಯಾರ್ಥಿ ದಾರುಣ ಸಾವು!

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ಕೆರೆಯಲ್ಲಿ ಸ್ನೇಹಿತನೊಂದಿಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ SSLC ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಗ್ರಾಮದ ಚಂದ್ರಶೇಖರ್ ಎಂಬುವರ ಮಗ ಕುಶಾಲ್ (16) ಮೃತಪಟ್ಟ ವಿದ್ಯಾರ್ಥಿ ಗ್ರಾಮದ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ SSLC ವ್ಯಾಸಂಗ ಮಾಡುತ್ತಿದ್ದ ಕುಶಾಲ್ ಪರೀಕ್ಷೆ ಇದ್ದ ಕಾರಣ ಭಾನುವಾರ...

ಆನ್‌ಲೈನ್ ಗೇಮ್‌ಗೆ ₹80,000 ಕಳೆದುಕೊಂಡು ವಿದ್ಯಾರ್ಥಿ ಸುಸೈಡ್!

ಬೀದರ್‌ನಲ್ಲಿ ದಾರುಣ ಘಟನೆ ಸಂಭವಿಸಿದ್ದು, ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ MBBS ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಅನಿಷ್ಕಾರ್ ಚವ್ಹಾಣ್ (21) ಎಂದು ಗುರುತಿಸಲಾಗಿದೆ. ಇವರು ಬೀದರ್‌ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ MBBS ವ್ಯಾಸಂಗ ಮಾಡುತ್ತಿದ್ದರು. ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾ ನಿವಾಸಿಯಾಗಿದ್ದ ಅನಿಷ್ಕಾರ್, ವಸತಿ...

ಇರಾನ್-ಇಸ್ರೇಲ್ ಯುದ್ಧ ಎಫೆಕ್ಟ್; ನಂದಿನಿ ಹಾಲಿನ ಬೇಡಿಕೆ ಕುಸಿತ!

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಇದೀಗ ಜಾಗತಿಕ ವ್ಯಾಪಾರ ಮಾರ್ಗಗಳಿಂದ ಹಿಡಿದು ಭಾರತೀಯ ಅಡುಗೆ ಮನೆಗಳವರೆಗೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಹೋಟೆಲ್ ಹಾಗೂ ಆಹಾರ ಉದ್ಯಮಗಳಿಗೆ ಇಂತಹ ಅನಿಶ್ಚಿತತೆಗಳು ಹೊಸದಲ್ಲವಾದರೂ, ಈ ಬಾರಿ ಅದರ ಪರಿಣಾಮ ಹೆಚ್ಚು ತೀಕ್ಷ್ಣವಾಗಿದೆ. ಗ್ಯಾಸ್‌ ಕೊರತೆ ಮನೆ, ಹೋಟೆಲ್‌ ಮಾತ್ರವಲ್ಲದೇ ರಾಜ್ಯದ ಅತಿದೊಡ್ಡ ಡೈರಿ ಜಾಲವಾದ ನಂದಿನಿ ಬ್ರ್ಯಾಂಡ್‌ಗೂ...

ಕಾರಿನಲ್ಲೇ ಸುಟ್ಟ ಸ್ಥಿತಿಯಲ್ಲಿ ಮಾಜಿ ಶಾಸಕರ ಪುತ್ರನ ಶವ ಪತ್ತೆ!

ಧಾರವಾಡ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಸಂಭವಿಸಿದ್ದು, ಮಾಜಿ ಶಾಸಕನ ಪುತ್ರನ ಶವ ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಎಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟ ಅರಣ್ಯ ಪ್ರದೇಶದಲ್ಲಿ...

ನಿಲ್ದಾಣದಲ್ಲಿ ವಾಹನಗಳ ಹಾವಳಿ; ನಿಷೇಧ ಇದ್ದರೂ ಓಡಾಟ!

ಕೆ.ಆರ್.ಪೇಟೆ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಅತಿಕ್ರಮಣ ಹೆಚ್ಚುತ್ತಿದ್ದು, ಪ್ರಯಾಣಿಕರು ಹಾಗೂ ಬಸ್ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧವಿದ್ದರೂ, ನಿಯಮಗಳನ್ನು ಲೆಕ್ಕಿಸದೆ ವಾಹನಗಳು ಓಡಾಟ ನಡೆಸುತ್ತಿರುವುದು ಕಂಡುಬಂದಿದೆ. ಈ ಕುರಿತು ನಿಲ್ದಾಣದಲ್ಲಿರುವ ಅಧಿಕಾರಿಗಳು ಗಮನ ಹರಿಸದಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಖಾಸಗಿ ವಾಹನಗಳ ಅಕ್ರಮ ಓಡಾಟದಿಂದ KSRTC...

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರು; ಪಾರ್ಕಿಂಗ್ ಮಾಡಿದ್ರೆ ಸಿಕ್ಕಾಪಟ್ಟೆ ಫೈನ್!

ಬೆಂಗಳೂರು ನಗರದ ವಾಹನ ಸವಾರರು ಇನ್ನು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. 2022ರಲ್ಲಿ ಸ್ಥಗಿತಗೊಳಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಮಾರ್ಚ್ 25ರಿಂದಲೇ ನಗರದಲ್ಲಿ ಟೋಯಿಂಗ್ ಪ್ರಕ್ರಿಯೆ ಪುನರಾರಂಭವಾಗುವ ಸಾಧ್ಯತೆ ಇದೆ. ಅಸಮರ್ಪಕ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು...

ಕಸದ ರಾಶಿಯಲ್ಲಿ ಶವ ಪತ್ತೆ; ತನಿಖೆಯಲ್ಲಿ ಚಾಲಕನ ಕ್ರೂರ ಕೃತ್ಯ ಬಹಿರಂಗ!

ಬೆಂಗಳೂರಿನ ಕೆಂಗೇರಿಯ ಕಸದ ರಾಶಿಯಲ್ಲಿ ಮಹಿಳೆಯ ಶವ ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಯಾರೋ ಅಪರಿಚಿತರು ಕೊಲೆಗೈದಿದ್ದಾರೆ ಎನ್ನುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ರು. ಆದ್ರೆ ಇದು ಕೊಲೆಯಲ್ಲ, ಮಹಿಳೆಯನ್ನ ಆಟೋ ಚಾಲಕ ಆಸ್ಪತ್ರೆ ಕರೆದೊಯ್ಯುವ ಬದಲು ಕಸದ ರಾಶಿಗೆ ಬಿಸಾಡಿ ಹೋಗಿದ್ದ ಎನ್ನುವ ವಿಚಾರ ತನಿಖೆಯಿಂದ ಬಯಲಾಗಿದೆ. ಮೊದಲಿಗೆ ಈ ಘಟನೆ ಕೊಲೆ...

TOXIC ಗೆ ‘ಧುರಂಧರ್ 3’ ಸೆಡ್ಡು? ಫ್ಯಾನ್ಸ್‌ಗೆ ಶಾಕ್ ಕೊಟ್ಟ ಪೋಸ್ಟ್!

‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಅಬ್ಬರ ಮಾಡುತ್ತಿದೆ. ಕೇವಲ ನಾಲ್ಕು ದಿನಗಳಲ್ಲಿ ಸುಮಾರು 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಚಿತ್ರ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಈ ನಡುವೆ, ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಜೊತೆಗೆ ‘ಧುರಂಧರ್ 2’ ಕ್ಲ್ಯಾಶ್ ಆಗುತ್ತಿತ್ತು ಎಂಬ ಚರ್ಚೆಗಳು ಮೊದಲು ನಡೆದಿದ್ದವು. ಆದರೆ ‘ಟಾಕ್ಸಿಕ್’...
- Advertisement -spot_img

Latest News

ನರಕಯಾತನೆಯ ತಾಣವಾದ ಕಿಮ್ಸ್ ಆಸ್ಪತ್ರೆ, ನಿರ್ದೇಶಕರು ರಾಜೀನಾಮೆ ನೀಡುವಂತೆ ಸಾರ್ವಜನಿಕರ ಒತ್ತಾಯ

Koppala News: ಕೊಪ್ಪಳ ಜಿಲ್ಲೆಯ ಬಡ ರೋಗಿಗಳ ಜೀವನಾಡಿಯಾಗಬೇಕಿದ್ದ ಕಿಮ್ಸ್ ಆಸ್ಪತ್ರೆ, ಇಂದು ನಿರ್ದೇಶಕರ ಬೇಜವಾಬ್ದಾರಿ ಮತ್ತು ಅತಿಯಾದ ಭ್ರಷ್ಟಾಚಾರದಿಂದಾಗಿ ಬಡವರ ನರಕಯಾತನೆಯ ತಾಣವಾಗಿದೆ. ದೂರದ ಊರುಗಳಿಂದ...
- Advertisement -spot_img