Sunday, September 8, 2024

Latest Posts

ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಸಿ ಎಂ ಬೊಮ್ಮಯಿಯಿಂದ ಆಶ್ವಾಸನೆ.

- Advertisement -


ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಂ ಬೋಮ್ಮಾಯಿ ಅವರು ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಇಡೀ ಚಿತ್ರರಂಗದಲ್ಲಿ ಶೂನ್ಯ ಉಂಟುಮಾಡಿದೆ. ಅವರು ನನ್ನ ಬಹಳ ಆತ್ಮೀಯ. ಅಪ್ಪು ಅವರನ್ನು ನಾನು ಬಾಲ್ಯದಿಂದಲೆ ಬಲ್ಲೆ ಅವರು ಬಾಲ್ಯದಲ್ಲಿಯೇ ತಮ್ಮ ನಟನೆಯಿಂದರಾಷ್ಟ್ರೀಯ ಪ್ರಶಸ್ತಿ’ ಪಡೆದವರು.
ಪುನೀತ ರಾಜ್ ಕುಮಾರ್ ಅಪ್ರತಿÀಮ ಪ್ರತಿಭಾವಂತ ಹಾಗೂ ರಾಜ್ ಕುಮಾರ್ ಅವರಿಗೆ ಇದ್ದಂತಹ ನಯ-ವಿನಯಗಳು ನೂರಕ್ಕೆ ನೂರು ಯಾರಲ್ಲಾದರು ಇದ್ದರೆ ಅದು ಪುನೀತ್ ಅವರಲ್ಲಿ ಮಾತ್ರ ಕಾಣಬಹುದಿತ್ತು.
ಅವರು ನಿರ್ಗತಿಕರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಲು ಬಹಳ ಉತ್ಸುಕರಾಗಿದ್ದರು. ಅವರ ಅಪಾರ ಸಾಮಾಜ ಸೇವೆಗಳನ್ನು ಪರಿಗಣಿಸಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ತಿಳಿಸಿದ್ದಾರೆ .

- Advertisement -

Latest Posts

Don't Miss