Thursday, November 30, 2023

Latest Posts

ರೈತರಿಗೆ ಬಾಕಿ ಹಣ ಕೊಡಿಸಿ- ಇಲ್ಲದಿದ್ರೆ ನೀವೇ ಹೊಣೆ- ಡಿಸಿಗಳಿಗೆ ಸಿಎಂ ಖಡಕ್ ವಾರ್ನಿಂಗ್..!

- Advertisement -

ಬೆಂಗಳೂರು: ಜೂನ್ 30ರೊಳಗೆ ಬಾಕಿ ಹಣ ಪಾವತಿಯಾಗುವಂತೆ ಕಬ್ಬು ಬೆಳೆಗಾರರಿಗೆ ಕೊಟ್ಟಿದ್ದ ಮಾತು ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಗೆ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ. ಬಾಕಿ ಹಣ ಪಾವತಿಸೋ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ಹೆಗಲಿಗೆ ಸಿಎಂ ಹೊರಿಸಿದ್ದಾರೆ.

ಕಬ್ಬು ಬೆಳೆಗಾರರ ಮನವಿ ಸ್ಪಂದಿಸಿದ್ದ ಸಿಎಂ ಕುಮಾರಸ್ವಾಮಿ, ನಿಮ್ಮ ಬಾಕಿ ಹಣವನ್ನು ಜೂನ್ 30ರೊಳಗೆ ಹೇಗಾದ್ರೂ ಮಾಡಿ ಪಾವತಿ ಮಾಡಿಸುತ್ತೇನೆ ಅಂತ ಮಾತು ಕೊಟ್ಟಿದ್ರು. ಅದರಂತೆ ಇಂದು ಸಿಎಂ ಕುಮಾರಸ್ವಾಮಿ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ಕರೆದು ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಜೂನ್ 30ರೊಳಗೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರೋ ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿಮಾಡಿಸಿ. ಇದಕ್ಕಾಗಿ ಬೇಕಾದ್ರೆ ಕಾರ್ಖಾನೆಗಳಲ್ಲಿನ ಸಕ್ಕರೆಯನ್ನೂ ಮುಟ್ಟುಗೋಲು ಹಾಕಿಕೊಂಡು ಅದನ್ನು ಮಾರಾಟ ಮಾಡಿ ಬಂದ ಹಣವನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳಿ ಅಂತ ಡಿಸಿಗಳಿಗೆ ಸಿಎಂ ಡೆಡ್ ಲೈನ್ ನೀಡಿದ್ದಾರೆ. ಅಲ್ಲದೆ ಒಂದು ವೇಳೆ ಹಣ ಕೊಡಿಸಲು ವಿಫಲರಾದ್ರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಅಂತಲೂ ಸಿಎಂ ಖಡಕ್ ವಾರ್ನಿಂಗ್ ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ನಾಳೆ ಏನಾಗುತ್ತೆ!!?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=m7uMgGvtuOk

- Advertisement -

Latest Posts

Don't Miss