ಎಕ್ಸಿಟ್ ಪೋಲ್ ಪರ ಕೈ ಶಾಸಕ ಬ್ಯಾಟಿಂಗ್

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತವಲಯದ ಶಾಸಕ ಡಾ.ಸುಧಾಕರ್ ಎಕ್ಸಿಟ್ ಪೋಲ್ ಗಳ ಪರ ಬ್ಯಾಟ್ ಬೀಸಿದ್ದಾರೆ.  ಎಕ್ಸಿಟ್ ಪೋಲ್ ಜನರ ಮನಸ್ಥಿತಿಯನ್ನ ಹೇಳಿದೆ, ಈ ವಿಚಾರದಲ್ಲಿ ಇವಿಎಂ ಅನ್ನ ಎಳೆತಂದಿದ್ದು ಸರಿಯಲ್ಲ ಅಂತ ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರೋ ಶಾಸಕ ಸುಧಾಕರ್,ಎಕ್ಸಿಟ್ ಪೋಲ್ ವಿಚಾರವಾಗಿ ಮಾತನಾಡುವಾಗ ಇವಿಎಂ ತಿರುಚುವಿಕೆ ವಿಷಯ ಪ್ರಸ್ತಾಪವಾಗೋವುದು ಯಾಕೆ ಅಂತ ವಯುಕ್ತಿಕವಾಗಿ ನನಗೆ ಗೊಂದಲವಾಗಿದೆ. ಎಕ್ಸಿಟ್ ಪೋಲ್ ಜನರ ಭಾವನೆ ಮತ್ತು ನಿರ್ಧಾರವನ್ನ ಬಿಂಬಿಸುತ್ತದೆ ಅನ್ನೋದು ವಾಸ್ತವ ಸಂಗತಿ ಅಲ್ಲವೆ ಅಂತ ಟ್ವೀಟ್ ಮಾಡಿದ್ದಾರೆ.

ಮಂಡ್ಯದಲ್ಲಿ ಅವರು ಗೆದ್ರೆ ಇವರಿಗೆ ಲಾಸು…? ಲಾಭ ಯಾರಿಗೆ ನಷ್ಟ ಯಾರಿಗೆ ? ತಿಳಿದುಕೊಳ್ಳೋಕೆ ಈ ವಿಡಿಯೋ ನೋಡಿ.

About The Author