Sports News: ಪಂಜಾಬ್ ಚುನಾವಣಾ ಆಯೋಗ ಮುಂಬರುವ ಲೋಕಸಭಾ ಚುನಾವಣೆಗೆ, ಚುನಾವಣಾ ಐಕಾನ್ ಆಗಿ ಕ್ರಿಕೇಟಿಗ ಶುಭಮನ್ ಗಿಲ್ ಆಯ್ಕೆಯಾಗಿದ್ದಾರೆ.
ಹೀಗಾಗಿ ಶುಭಮನ್ ಗಿಲ್ ಚುನಾವಣೆಗೂ ಮುನ್ನ ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಮುಂದಾಗಿದ್ದಾರೆ. ಹೀಗಾಗಿ ಪಂಜಾಬ್ನಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ ಶುಭಮನ್ ಗಿಲ್ ಭಾಗಿಯಾಗಲಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಾವು ಯುವ ಕ್ರಿಕೇಟಿಗ ಶುಭಮನ್ರನ್ನು ಆಯ್ಕೆ ಮಾಡಿದ್ದೇವೆ. ಕಳೆದ ಬಾರಿ ಶೇ.65% ಮಾತ್ರ ಮತದಾನವಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಮತದಾನದ ಪ್ರಮಾಣ, ಶೇ.70% ದಾಟಬೇಕು. ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ರಾಜ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪಂಜಾಬ್ನ ಕೆಲ ಕ್ಷೇತ್ರಗಳಿಗೆ ಹೋಗಿ ಗಿಲ್ ಪ್ರಚಾರ ಮಾಡಬೇಕು. ಅಲ್ಲದೇ ಈ ಬಾರಿ ರಾಜ್ಯದಲ್ಲಿ ಮತದಾನ ಪ್ರಮಾಣ 70ರ ಗಡಿ ದಾಟಬೇಕು ಎಂದು ಹೇಳಿ, ಮತದಾನದ ಮಹತ್ವವನ್ನು ಗಿಲ್ ಹೇಳಬೇಕಿದೆ. ಗಿಲ್ ಯುವ ಕ್ರಿಕೇಟಿಗನಾದ ಕಾರಣ, ಇವರಿಗೆ ಫ್ಯಾನ್ಸ್ ಕೂಡ ಹೆಚ್ಚಾಗಿದ್ದಾರೆ. ಅಲ್ಲದೇ, ಯುಕರು ಕೂಡ ಮತದಾನ ಮಾಡಲು, ಗಿಲ್ ಮೂಲಕ ಮತತದಾನ ಜಾಗೃತಿ ಮೂಡಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ.
ಈ ಷರತ್ತು ಒಪ್ಪಿದರೆ ಮಾತ್ರ, ಇಂಡಿಯಾ ಕೂಟದೊಟ್ಟಿಗೆ ಹೊಂದಾಣಿಕೆ: ಸಮಾಜವಾದಿ ಪಾರ್ಟಿ
ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಯಾದ ರಾಜಸ್ಥಾನ ಬುಡಕಟ್ಟು ಮುಖಂಡ ಮಹೇಂದ್ರ ಜೀತ್