Thursday, June 19, 2025

Latest Posts

ಡಲ್ ಆಯ್ತು ಕನ್ನಡ ಚಿತ್ರರಂಗ: ಚುರುಕಿಗೆ ಸ್ಟಾರ್ ಸಿನಿಮಾಗಳ ರೀ ರಿಲೀಸ್

- Advertisement -

Movie News: ಕನ್ನಡ ಚಿತ್ರರಂಗದಲ್ಲೀಗ ಸ್ಟಾರ್ ಸಿನಿಮಾಗಳು ಮರುಬಿಡುಗಡೆ ಕಾಣುತ್ತಿವೆ. ಹೌದು, ಚಿತ್ರಮಂದಿರಗಳಿಗೆ ಜನರು ಹೋಗುತ್ತಿಲ್ಲ. ಯಾವುದೇ ಸಿನಿಮಾ ತೆರೆಕಂಡರೂ ಚಿತ್ರಮಂದಿರ ಬಣಗುಡುತ್ತಿದೆ.
ಅದರಲ್ಲೂ ಹೊಸಬರ ಸಿನಿಮಾಗಳು ರಿಲೀಸ್ ಆಗಿಬಿಟ್ಟರಂತೂ ಕಷ್ಟ ಹೇಳತೀರದು.ಮಾರ್ನಿಂಗ್ ಶೋಗೆ ಬೆರಳೆಣಿಕೆಯಷ್ಟು ಜನ ಕಾಣುವುದು ಬಿಟ್ಟರೆ, ಉಳಿದಂತೆ ಪ್ರದರ್ಶನಗಳಂತೂ ಖಾಲಿ ಖಾಲಿ. ಹೀಗಾಗಿ ಜನರನ್ನು ಥಿಯೇಟರ್ ನತ್ತ ಕರತರುವ ಸಲುವಾಗಿ ಸ್ಟಾರ್ ಸಿನಿಮಾಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಹಾಗೆ ನೋಡಿದರೆ, ಹಿಂದಿನಿಂದಲೂ ಮನಗೆದ್ದ ಮತ್ತು ಜನಪ್ರಿಯಗೊಂಡ ಸಿನಿಮಾಗಳು ಮರುಬಿಡುಗಡೆಯಾಗಿವೆ. ಆಗುತ್ತಲೂ ಇವೆ. ಆದರೆ, ಈಗಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ,ಕನ್ನಡ ಸಿನಿಮಾರಂಗ ಸಂಪೂರ್ಣ ನಲುಗಿ ಹೋಗುವ ಸ್ಥಿತಿಯಲ್ಲಿದೆ. ಇದರಿಂದಾಗಿ ಥಿಯೇಟರ್ ಗಳಲ್ಲಿ ರಿಲೀಸ್ ಆಗುವ ಸಿನಿಮಾಗಳು ಗಟ್ಟಿಯಾಗಿ ನಿಲ್ಲುತ್ತಿಲ್ಲ. ಅಷ್ಟೇ ಅಲ್ಲ, ಪ್​ರೇಕ್ಷಕರೂ ಸಹ ಅತ್ತ ಸುಳಿಯುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರರಂಗ ಅಕ್ಷರಶಃ ಡಲ್ ಆಗುತ್ತಿದೆ.

ಕಳೆದ ಒಂದಷ್ಟು ತಿಂಗಳನ್ನು ಗಮನಿಸುತ್ತ ಬಂದರೆ, ಯಾವ ಚಿತ್ರಗಳೂ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಈ ಆರು ತಿಂಗಳಲ್ಲಿ ಸರಿ ಸುಮಾರು 120ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಅಪ್ಪಳಿಸಿದರೂ ಹೇಳಿಕೊಳ್ಳಲು ಯಾವೊಂದು ಸಿನಿಮಾಗಳು ಸುದ್ದಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಟಾರ್ ಸಿನಿಮಾಗಳನ್ನು ಮರುಬಿಡುಗಡೆ ಮಾಡಲಾಯಿತು. ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಮತ್ತು ಪವರ್ ಚಿತ್ರಗಳು ರೀ ರಿಲೀಸ್ ಆದವು. ಆ ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಅಭಿಮಾನಿಗಳು ನೂಕು ನುಗ್ಗಲಾಗುವಂತೆ ಬಂದು ಸಿನಿಮಾ ನೋಡಿ ಖುಷಿಪಟ್ಟರು. ಅದರೊಂದಿಗೆ ಹೊಸಬರ ಸಿನಿಮಾಗಳು ಅಲ್ಲೊಂದು ಇಲ್ಲೊಂದರಂತೆ ಬಿಡುಗಡೆಯಾದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಎರಡು ಮೂರು ವಾರಗಳ ಹಿಂದೆ ಉಪೇಂದ್ರ ಅಭಿನಯದ ಸೂಪರ್ ಹಿಟ್ ಸಿನಿಮಾ ಎ ಚಿತ್ರ ಕೂಡ ರೀ ರಿಲೀಸ್ ಆಗಿತ್ತು. ಅದಕ್ಕೆ ಭರ್ಜರಿ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಪ್ರತಿ ವಾರವೂ ಕೂಡ ಲೆಕ್ಕವಿಲ್ಲದಷ್ಟು ಹೊಸಬರ ಸಿನಿಮಾಗಳು ತೆರೆಕಾಣುತ್ತಿದ್ದವು. ಆಗ ಯಾವ ಸಿನಿಮಾಗಳು ನೋಡಬೇಕು ಬಿಡಬೇಕು ಎಂಬ ಗೊಂದಲ ಎದುರಾಗುತ್ತಿತ್ತು.ಇದನ್ನು ಮನಗಂಡ ನಿರ್ಮಾಪಕರು ತಮ್ಮ ಹಳೆಯ ಹಿಟ್ ಸಿನಿಮಾಗಳನ್ನು ಮರುಬಿಡುಗಡೆ ಮಾಡಲು ನಿರ್ಧರಿಸಿದರು.

ಅದರ ಪ್ರಕಾರ ಇದೀಗ ಸ್ಟಾರ್ ಗಳ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಜಾಕಿ, ಪವರ್, ಎ ಸಿನಿಮಾಗಳು ರೀ ರಿಲೀಸ್ ಆದ ಬೆನ್ನಲ್ಲೆ ಈಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕೂಡ ಜೂನ್ 7 ರಂದು ಮರುಬಿಡುಗಡೆ ಕಾಣುತ್ತಿದೆ. ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದರೆ, ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ. ಈ ಹಿಂದೆ ರಾಬರ್ಟ್ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಈಗ ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಮರುಬಿಡುಗಡೆ ಸುದ್ದಿ ಸಖತ್ ಖುಷಿಕೊಟ್ಟಿದೆ. ಅದೆಷ್ಟೇ ಬಾರಿ ಟಿವಿಯಲ್ಲಿ ಈ ಸಿನಿಮಾ ವೀಕ್ಷಿಸಿದರೂ, ಕೂಡ ಚಿತ್ರಮಂದಿರದಲ್ಲಿ ನೋಡುವ ಮಜವೇ ಬೇರೆ.

ಉತ್ತರಾಖಂಡನಲ್ಲಿ ಚಾರಣಿಗರ ದುರ್ಮರಣ: ಸಂತಾಪ ಸೂಚಿಸಿದ ಸಿಎಂ

ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ

- Advertisement -

Latest Posts

Don't Miss