Dharwad News: ಧಾರವಾಡದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಾವನ್ನು ರಕ್ಷಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಹಾವು ಸಾವನ್ನಪ್ಪಿದ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ಸಿಕ್ಕಿದ್ದ ಹಾವನ್ನು ಅದೇ ಗ್ರಾಮದ ಮನೋಜ್ ಎಂಬಾತ ರಕ್ಷಣೆ ಮಾಡಿದ್ದರು. ರಕ್ಷಣೆ ವೇಳೆ ಕುತ್ತಿಗೆಯಲ್ಲಿ ಕಂಡು ಬಂದಿದ್ದ ಕ್ಯಾನ್ಸರ್ ಗಡ್ಡೆಯನ್ನು ಕಂಡು ಹಾವನ್ನು ಧಾರವಾಡದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರಿಸಲಾಗಿತ್ತು. ಚಿಕಿತ್ಸೆ ಬಳಿಕ ಆತನದೇ ಆರೈಕೆಯಲ್ಲಿ ಹಾವು ಇತ್ತು ಆದರೆ ಒಂದು ದಿನದ ಬಳಿಕ ಚಿಕಿತ್ಸೆ ಫಲಿಸದೆ ನಾಗರ ಹಾವು ಸಾವನ್ನಪ್ಪಿದ್ದು, ಬಳಿಕ ಯುವಕನಿಂದಲೆ ಅಂತ್ಯಸಂಸ್ಕಾರ ಮಾಡಲಾಗಿದೆ.

