Sunday, September 8, 2024

Latest Posts

ನಿರ್ದೇಶಕ, ನಟ, ನಿರ್ಮಾಪಕ, ರಂಗಕರ್ಮಿ ಕಟ್ಟೆ ರಾಮಚಂದ್ರ(74) ವಿಧಿವಶ

- Advertisement -

ವಯೋಸಹಜ ಕಾಯಿಲೆಯಿಂದ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕಟ್ಟೆ ರಾಮಚಂದ್ರ ಕೊನೆಯುಸಿರು ಬಿಟ್ಟರು. ಅವರು ರಾಷ್ಟ್ರಪ್ರಶಸ್ತಿ, ವಿಜೇತ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ

ಇವರ ನಿರ್ದೇಶನದಲ್ಲಿ ಬಂದ ‘ಅರಿವು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸಿಕ್ಕಿತ್ತು.

ಸಾಕಷ್ಟು ಕಿರುಚಿತ್ರ, ಸಾಕ್ಷ್ಯ ಚಿತ್ರ, ಕಿರುತೆರೆ ಧಾರಾವಾಹಿಗಳನ್ನು ಕಟ್ಟಿಕೊಟ್ಟಿದ್ದ ಕಟ್ಟೆ ರಾಮಚಂದ್ರ

‘ಮಹಾಲಕ್ಷ್ಮಿ’ ಅನ್ನೋ ಸಿನಿಮಾ ನಿರ್ಮಿಸಿದ್ದರು. ಸಾಕಷ್ಟು ಸಿನಿಮಾಗಳಲ್ಲಿ ಕಟ್ಟೆ ರಾಮಚಂದ್ರ ಅಭಿನಯಿಸಿದ್ದರು.

ವಿಷ್ಣುವರ್ಧನ್ ನಟನೆಯ ‘ವೈಶಾಖದ ದಿನಗಳು’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದರು.

ಭಾನುವಾರವಷ್ಟೆ ಕಟ್ಟೆ ರಾಮಚಂದ್ರ ಅವರ ಮಡದಿ ಕೊನೆಯುಸಿರೆಳೆದಿದ್ದರು.

- Advertisement -

Latest Posts

Don't Miss