Political News : ಲೋಕಸಮರದ ಗುಂಗಿನಲ್ಲಿರುವ ವೇಳೆ ಇದೀಗ ಡಿಸಿಎಂ ಡಿಕೆಶಿವಕುಮಾರ್ ನಾನು ಎಷ್ಷು ದಿನ ರಾಜಕಾರಣದಲ್ಲಿ ಇರುತ್ತೇನೋ ಎಂಬ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ್ದಾರೆ. ಹೌದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನೂತನ ಕಾರ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ , ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಕೆಲಸ ಮಾಡಬೇಕು.
ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ಓಡಾಡಿದರೆ ಆಗಲ್ಲ. ಕೆಲಸ ಮಾಡಿಲ್ಲ ಎಂದರೆ ಚುನಾವಣೆ ಬಳಿಕ ಮಾಜಿಗಳು ಆಗುತ್ತೀರಿ. ನಾನು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನೀವೆಲ್ಲಾ ಕೆಲಸ ಮಾಡಬೇಕು, ನಿಮಗೆ ಕಾರು, ರೂಂ ಕೊಡಲ್ಲ. ನಿಮ್ಮದೇ ಕಾರು ಬಳಸಿಕೊಂಡು ಸುತ್ತಬೇಕು ಎಂದು ಹೇಳಿದರು. ಇದರಲ್ಲಿ ಡಿಕೆ ಶಿವಕುಮಾರ್ ಅವರು, ತಾವು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ ಎನ್ನುವ ಆಡಿದ ಮಾತುಗಳು ಸಂಚಲನ ಮೂಡಿಸಿದೆ.
Kota Srinivas Poojary : ಲೋಕ ಸಮರ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ ಕೋರ್ಟ್ ಸಂಕಷ್ಟ
ವಿನಾಶ ಕಾಲೇ ವಿಪರೀತ ಬುದ್ಧಿ, ಇದು ಅವರ ಜೀವನದ ತಪ್ಪು ಹೆಜ್ಜೆ: ವಿಜಯೇಂದ್ರ ಹೀಗ್ಯಾಕಂದ್ರು ಗೊತ್ತಾ..?