Monday, May 13, 2024

Latest Posts

ಆರ್‌ಸಿಬಿ ಸೋಲಿಗೆ ಅಶ್ವಿನಿ ಕಾರಣವೆಂದ ದರ್ಶನ್ ಫ್ಯಾನ್ಸ್: ನೆಟ್ಟಿಗರು ಗರಂ

- Advertisement -

Movie News: ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲನ್ನಪ್ಪಲು ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಕಾರಣವೆಂದು ಧರ್ಶನ್ ಫ್ಯಾನ್ಸ್ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ದರ್ಶನ್ ಫ್ಯಾನ್ಸ್ ವಿರುದ್ಧ ಅಪ್ಪು ಫ್ಯಾನ್ಸ್ ಗರಂ ಆಗಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ ಆಡಿದ 4 ಮ್ಯಾಚ್‌ನಲ್ಲಿ ಮೂರು ಮ್ಯಾಚ್‌ನಲ್ಲಿ ಆರ್ಸಿಬಿ ಸೋಲನ್ನಪ್ಪಿದೆ. ಹೀಗೆ ಈ ಸಲಾನೂ ಕಪ್ ನಮ್ಮದಲ್ಲ ಅಂತಾ ಕನ್ನಡಿಗರು ಈಗಾಗಲೇ ಅಂದಾಜಿಸಿದ್ದಾರೆ. ಆದರೆ ವಿಷಯ ಅದಲ್ಲ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಆರ್‌ಸಿಬಿ ಅನ್‌ಬಾಕ್ಸಿಂಗ್ ಇವೆಂಟ್‌ಗೆ ತೆರಳಿದ್ದರು. ಪತಿ ಇಲ್ಲದ ಮಹಿಳೆಯನ್ನು ಶುಭಕಾರ್ಯಕ್ಕೆ ಕರೆದಿದ್ದಕ್ಕೆ, ಆರ್‌ಸಿಬಿ ಸೋಲುತ್ತಿದೆ ಎಂದು ಗಜಪಡೆ ಎಂಬ ದರ್ಶನ್ ಫ್ಯಾನ್ಸ್ ಟ್ವೀಟ್ ಪೇಜ್ ಟ್ವೀಟ್ ಮಾಡಿದೆ. ಇಂಥ ಕೀಳು ಮಟ್ಟದ ಟ್ವೀಟ್‌ಗೆ ನೆಟ್ಟಿಗರು ಆಕ್ರೋಶ ಮತ್ತು ಬೇಸರ ಹೊರಹಾಕಿದ್ದಾರೆ.

ಆದರೆ ಈ ರೀತಿ ಟ್ವೀಟ್ ಮಾಡಿದ್ದು, ನಿಜವಾಗ್ಲೂ ದರ್ಶನ್ ಅಭಿಮಾನಿಗಳೇ ಅಥವಾ ಗಜಪಡೆ ಎಂಬ ಫೇಕ್ ಅಕೌಂಟ್ ಮಾಡಿ, ದರ್ಶನ್ ಫ್ಯಾನ್ಸ್ ಅಂತಾ ಹೇಳಿಕೊಂಡು ಯಾರಾದ್ರೂ ಈ ರೀತಿ ಮಾಡಿದ್ದಾರೋ ಅಂತಾ ತನಿಖೆ ಬಳಿಕ ಗೊತ್ತಾಗಬೇಕಿದೆ. ಅಪ್ಪು ಅಭಿಮಾನಿಗಳು ಕೂಡ, ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.

ವಿನಾಶ ಕಾಲೇ ವಿಪರೀತ ಬುದ್ಧಿ, ಇದು ಅವರ ಜೀವನದ ತಪ್ಪು ಹೆಜ್ಜೆ: ವಿಜಯೇಂದ್ರ ಹೀಗ್ಯಾಕಂದ್ರು ಗೊತ್ತಾ..?

ಸುಮಲತಾ ಜೊತೆ ಬಿಜೆಪಿ ಸೇರ್ಪಡೆಯಾದ ಮಾಜಿ ಬಿಗ್‌ಬಾಸ್ ಸ್ಪರ್ಧಿ..

ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು..

- Advertisement -

Latest Posts

Don't Miss