ದಾನಗಳಲ್ಲೇ ಮಹಾ ದಾನ ಅಂದ್ರೆ ಅನ್ನದಾನ. ಹಸಿದವನಿಗೆ ತುತ್ತು ಅನ್ನ ನೀಡಿದ್ರೆ ಆತ ಒಳ್ಳೆಯದಾಗಲಿ ಎಂದು ಹರಸಿ ಹೋಗ್ತಾನೆ. ಅನ್ನದಾತೋ ಸುಖಿನೋ ಭವಂತು ಎಂಬ ಮಾತಿದೆ. ಆದ್ರೆ ಊಟ ಮಾಡುವ ಸಂದರ್ಭದಲ್ಲಿ, ಊಟವಾದ ಮೇಲೆ ಕೆಲ ತಪ್ಪುಗಳನ್ನ ಮಾಡಬಾರದು ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ.

ಊಟ ಮಾಡುವಾಗ ಮಾತನಾಡಬಾರದು. ಹರಟೆ ಹೊಡಿಯುತ್ತ ಊಟ ಮಾಡಬಾರದು. ಅಲ್ಲದೇ ಊಟ ಮಾಡುವ ಸಂದರ್ಭದಲ್ಲಿ ಕೋಪ ಮಾಡಿಕೊಳ್ಳಬಾರದು. ಇದು ಅನ್ನಪೂರ್ಣೆಗೆ ಅವಮಾನಿಸಿದಂತೆ. ಅರ್ಧಕ್ಕೆ ಸಿಟ್ಟಿನಿಂದ ಊಟ ಬಿಟ್ಟೇಳುವುದು, ಅನ್ನವನ್ನ ಚೆಲ್ಲಿ ಕೋಪ ತೋರಿಸುವುದರಿಂದ ನಿಮ್ಮ ಮೇಲೆ ಅನ್ನಪೂರ್ಣೆಶ್ವರಿ ಕೋಪ ಮಾಡಿಕೊಳ್ಳುತ್ತಾಳೆ. ಮಾತು ಶುರುವಾದಾಗಲೇ ಜಗಳ ಶುರುವಾಗುತ್ತದೆ. ಆದ್ದರಿಂದ ಊಟ ಮಾಡುವಾಗ ಮಾತನಾಡಬಾರದು.
ಊಟವಾದ ಬಳಿಕ ಊಟದ ತಟ್ಟೇಯಲ್ಲೇ ಕೈ ತೊಳೆಯುವುದು, ಅಲ್ಲೇ ಉಗಿಯುವ ಚಾಳಿ ಕೆಲವರಿಗಿರುತ್ತದೆ. ಇದು ತುಂಬಾ ಕೆಟ್ಟ ಚಾಳಿ. ಹೀಗೆ ಮಾಡುವುದು ಕೂಡ ಅನ್ನಪೂರ್ಣೆಗೆ ಅವಮಾನ ಮಾಡಿದಂತೆ.
ಇನ್ನು ಉಂಡ ತಟ್ಟೆಯನ್ನ ಒಣಗಲು ಬಿಡಬೇಡಿ. ತಟ್ಟೆ ತೊಳೆದಿಡಿ ಅಥವಾ ಅದರಲ್ಲಿ ಸ್ವಲ್ಪ ನೀರು ಹಾಕಿಡಿ. ಅಲ್ಲದೇ ಊಟ ಮಾಡುವಾಗ ಯಾವುದೋ ಕೆಲಸ ನೆನಪಿಗೆ ಬಂದು ಅರ್ಧಕ್ಕೆ ಎದ್ದು ಹೋಗಿ ನಂತರ ಬಂದು ಊಟ ಮಾಡುವುದು ಕೂಡಾ ತಪ್ಪು. ಒಮ್ಮೆ ಊಟಕ್ಕೆ ಕುಳಿತರೆ ಊಟ ಮಾಡಿಯೇ ಎದ್ದೇಳಬೇಕು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.