Tuesday, May 14, 2024

Latest Posts

ರಂಜಾನ್ ಉಪವಾಸವೆಂದು ದಿನಕ್ಕೆ ಒಂದೇ ಖರ್ಜೂರ ಸೇವನೆ: ಅಣ್ಣ-ತಮ್ಮನ ಸಾವು

- Advertisement -

National News: ಗೋವಾದಲ್ಲಿ ಇಬ್ಬರು ಸಹೋದರರು ರಂಜಾನ್ ಉಪವಾಸವಿರುವ ಕಾರಣಕ್ಕೆ, ಸಾವನ್ನಪ್ಪಿದ್ದಾರೆ. ಉಪವಾಸ ಮಾಡುವ ರೀತಿಯೇ ತಪ್ಪಾಗಿದ್ದ ಕಾರಣ, ಇಬ್ಬರ ಸಾವಾಗಿದೆ.

ಉಪವಾಸವಿದ್ದ ಕಾರಣ, ಸಹೋದರರು ದಿನಕ್ಕೆ ಒಂದೇ ಒಂದು ಖರ್ಜೂರ ತಿನ್ನುತ್ತಿದ್ದರು ಎಂದು ಹೇಳಲಾಗಿದೆ. ಇವರ ಮನೆಯಲ್ಲಿ ಇಬ್ಬರು ಸಹೋದರರು ಮತ್ತು ಇವರ ತಂದೆ ತಾಯಿ ವಾಸವಿದ್ದರು. ಆದರೆ ಉಪವಾಸದ ಕಾರಣಕ್ಕೆ ಮನೆಯಲ್ಲಿ ಜಗಳವಾಗಿ ತಂದೆ ಮನೆ ಬಿಟ್ಟು ಹೋಗಿದ್ದರು. ತಿಂಗಳಿಗೆ ಅಥವಾ ವಾರಕ್ಕೊಮ್ಮೆ ಬಂದು, ಮನೆಯಲ್ಲಿರುವ ಒಂದು ಕಿಟಕಿಯಲ್ಲಿ ಖರ್ಚಿಗೆ ದುಡ್ಡು ಇಟ್ಟು ಹೋಗುತ್ತಿದ್ದರು.

ಆದರೆ ತಂದೆ ಕೆಲ ದಿನಗಳ ಹಿಂದೆ ಮನೆಗೆ ದುಡ್ಡು ಇಡಲು ಬಂದಾಗ, ಕಿಟಕಿ ಮುಚ್ಚಿತ್ತು. ಅಲ್ಲದೇ, ಯಾರೂ ಮನೆಗೆ ಬರಬಾರದು ಎಂದು ಆ ಸಹೋದರರು ಫರ್ನಿಚರ್‌ಗಳನನ್ನು ಅಡ್ಡಲಾಗಿ ಇಡುತ್ತಿದ್ದರು ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಈ ವೇಳೆ ತಂದೆ ಬಾಗಿಲು ಬಡಿದರೂ ಯಾರೂ ಒಳಗಿನಿಂದ ಬಂದು ಬಾಗಿಲು ತೆಗೆದಿಲ್ಲ.

ಒಂದೆರಡು ದಿನ ಕಾದು ಕಾಲ್ ಎಲ್ಲ ಮಾಡಿದ ಮೇಲೂ ಪತ್ನಿ ಮಕ್ಕಳ ಸುದ್ದಿ ಇಲ್ಲವಾದಾಗ, ಆ ತಂದೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಮನೆ ಬಾಗಿಲು ಒಡೆದು ಒಳಗೆ ಹೋದಾಗ, ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಇಬ್ಬರು ಗಂಡು ಮಕ್ಕಳು ಶವವಾಗಿ ಬಿದ್ದಿದ್ದಾರೆ. ತಾಯಿಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳ ಶವಪರೀಕ್ಷೆ ಮಾಡಿಸಿದಾಗ, ಅಪೌಷ್ಠಿಕತೆ ಕಾರಣದಿಂದ ಸಾವನ್ನಪ್ಪಿದ್ದಾರೆಂದು ವರದಿ ಬಂದಿದೆ. ಹೀಗಾಗಿ ಮಕ್ಕಳು ಉಪವಾಸ ಮಾಡಿದ್ದ ಬಗ್ಗೆ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಆಗ ಅವರು ದಿನಕ್ಕೆ ಒಂದು ಖರ್ಜೂರ ತಿಂದಿದ್ದೇ ಅವರ ಸಾವಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್

ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದ ಬಾಣಂತಿ, ಮಿಮಿಕ್ರಿ ಆರ್ಟಿಸ್ಟ್ ಇಂದುಶ್ರೀ..

ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಕಾಂಗ್ರೆಸ್‌ನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ: ಜೋಶಿ

- Advertisement -

Latest Posts

Don't Miss