Saturday, July 27, 2024

Latest Posts

ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ

- Advertisement -

Political News:  ಬಾಗಲಕೋಟೆಯಲ್ಲಿಂದು ಮಾತನಾಡಿದ ಕೆ.ಎಸ್.ಈಶ್ವರಪ್ಪ, ಮತ್ತೆ ರಾಯಣ್ಣ ಬ್ರಿಗೇಡ್ ಆಂರಭಿಸುವ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಚುನಾವಣೆ ಮುಗಿದ ನಂತರ ನೋಡೋಣ, ಅನೇಕರು ರಾಯಣ್ಣ ಬ್ರಿಗೇಡ್ ಮಾಡ್ಬೇಕು ಅಂತಿದ್ದಾರೆ. ಹಿಂದೂಳಿದವರು, ದಲಿತರು ಎಲ್ಲಾ ಸಮಾಜ ಸೇರಿಸಬೇಕು ಅಂತಿದ್ದಾರೆ. ಏನು ಮಾಡಬೇಕು ಅಂತ ನಾನೊಬ್ಬನೇ ತೀರ್ಮಾನ ತಗೊಳ್ಳಲ್ಲ. ಚುನಾವಣೆ ನಿಲ್ಲಬೇಕಾದ್ರೂ ನಾನೊಬ್ಬನೇ ತಗೊಂಡಿಲ್ಲ.‌ ಯಾರೂ ಈ ಪಕ್ಷ, ಹಿಂದೂತ್ವ ಉಳಿಬೇಕು ಅಂತಾರೆ, ಅಪ್ಪ ಮಕ್ಕಳಿಂದ ಮುಕ್ತರಾಗಬೇಕು ಅಂತ‌ ಅನೇಕರಿದ್ದಾರೆ ಎಂದು ಈಶ್ವರಪ್ಪ ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರಿಂದ ಅಭಿಪ್ರಾಯ ತಗೊಂಡು, ಚುನಾವಣೆ ಸ್ಪರ್ಧೆ ಮಾಡಿದ್ದೇನೆ. ಚುನಾವಣೆ ಮುಗಿದ ನಂತರ ಯಾರ್ಯಾರು ಈ ಭಾವನೆಯಲ್ಲಿದ್ದಾರೊ? ರಾಜ್ಯದಲ್ಲಿರೋ ಎಲ್ಲಾ ಹಿತೈಷಿಗಳನ್ನ ಒಂದು ಕಡೆ ಸೇರಿಸುತ್ತೇನೆ. ಎಲೆಕ್ಷನ್‌ ಮುಗಿದು ಮಾರನೇ ದಿನವೇ ಆಗಲ್ಲ, ನಾನು ದಡ್ಡ ಅಂತ ಯಾವುದೇ ತೀರ್ಮಾನ ತಗೊಳ್ಳಲ್ಲ. ರಾಜ್ಯದಲ್ಲಿ ಈ ರೀತಿ ಹಿಂದೂಳಿದವ್ರು, ಕುರುಬರಿಗೆ ಅನ್ಯಾಯ ಆಗಿದೆ ಅಂತ, ಸಾಕಷ್ಟು ಜನ ಹೇಳ್ತಿದ್ದಾರೆ. ಏನೇನು ಪರಿವರ್ತನೆ ಆಗುತ್ತೆ ನೋಡಿ,ಕೇವಲ ರಾಜಕೀಯ ಮಾತ್ರ ಅಲ್ಲ, ಸಮಾಜಿಕವಾಗಿ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು, ಆ ನಿಟ್ಟಿನಲ್ಲಿ ಏನು ಮಾಡಬೇಕು ಅಂತ ಪ್ರಮುಖರ ಜೊತೆ ಮಾತಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆದವರಿದ್ದಾರೆ. ಕಷ್ಟಪಟ್ಟಿರುವ ಡಿಕೆಶಿ ಸಿಎಂ ಆಗಬಾರದಾ..?: MLC ಪುಟ್ಟಣ್ಣ

ಹೆಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್ ಪಿತಾಮಹ: ಕೆ.ಎನ್.ರಾಜಣ್ಣ

ಕರ್ನಾಟಕದ ಸಿಎಂ ಕುರ್ಚಿಯ ಮೇಲೆ ನೀವು ಕೂತಿದ್ದೀರೋ..? ಊಸರವಳ್ಳಿ ಕೂತಿದೆಯೋ..?: ಕುಮಾರಸ್ವಾಮಿ

- Advertisement -

Latest Posts

Don't Miss