ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ ಮಾಡಲಾಗತ್ತೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿನ್ನೆಯ ಸಭೆಯಲ್ಲಿ ದೇವೇಗೌಡರು ಕೆಲವು ಮಾರ್ಗದರ್ಶನ ನೀಡಿದ್ದಾರೆ.ದೇವೇಗೌಡರು ದೆಹಲಿಗೆ ಹೋಗಿದ್ದಾರೆ. ದೆಹಲಿಯಿಂದ ಬಂದ ನಂತರ ಸಭೆ ಕರೆಯಲು ಹೇಳಿದ್ದೇನೆ.
ಪ್ರಮುಖರನ್ನು ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ ಮಾಡುತ್ತೇನೆ . ಇವತ್ತು ಎರಡನೇ ಹಂತದ ಟಿಕೆಟ್ನ್ನು ಘೋಷಣೆ ಮಾಡಬೇಕು. ಬೆಂಗಳೂರಿಗೆ ಹೋಗಿ ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿ ಎರಡನೇ ಹಂತದ ಟಿಕೆಟ್ ಫೈನಲ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಸಚಿವ ನಾರಾಯಣ ಗೌಡ ನೀಡಿದ ಹೇಳಿಕೆ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದು, ಆ ವ್ಯಕ್ತಿಯ ಹೇಳಿಕೆಗೆ ಏನು ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ. ಯಾವ ನೈತಿಕತೆ ಇಟ್ಟುಕೊಂಡು ಆ ವ್ಯಕ್ತಿ ಬಗ್ಗೆ ಚರ್ಚೆ ಮಾಡಲಿ..? ಈ ವ್ಯಕ್ತಿ ಮೊದಲು ಎಲ್ಲಿದ್ದ..? ಈ ವ್ಯಕ್ತಿಯನ್ನು ಜನರು ಎಲ್ಲಿಂದ ಗುರುತಿಸುತ್ತಾರೆ..? ಇವತ್ತು ಅವರು ಬೆಳೆಯಬೇಕಾದರೆ ಹೇಗೆ ಬೆಳೆದರು..? ಈಗ ಅವರಿಗೆ ಜ್ಞಾನೋದಯ ಆಯ್ತಾ..? ಅವರಿಗೆ ಈಗ ಅವರು ಪಕ್ಷ ಯಾಕೆ ಬಿಟ್ಟು ಹೋದರು..?
ಪಕ್ಷ ಬಿಡುವ ವಾರದ ಮುಂಚೆ ನನಗೆ ಏನ್ ಟೋಪಿ ಹಾಕಿ ಹೋದ್ರು..? ಅಂತಹ ವ್ಯಕ್ತಿಗಳ ಬಗ್ಗೆ ಚರ್ಚೆ ಮಾಡೋಕೆ ಆಗಲ್ಲ. ಜನರೇ ಆತನ ಬಗ್ಗೆ ತೀರ್ಮಾನ ಮಾಡ್ತಾರೆ. 13ನೇ ತಾರೀಖು ಎಲ್ಲವೂ ಗೊತ್ತಾಗುತ್ತದೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸುವ ಮೂಲಕ, ಹೆಚ್ಡಿಕೆ ನಾರಾಯಣ ಗೌಡರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇನ್ನು ಸಿ.ಟಿ.ರವಿ, ಚಲುವರಾಯಸ್ವಾಮಿ ಕಾರ್ಡ್ ಆಡುವ ಫೋಟೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ.ಕುಮಾರಸ್ವಾಮಿ, ಅವರು ಸ್ನೇಹಿತರು ಒಟ್ಟಿಗೆ ಸೇರುತ್ತಾ ಇರುತ್ತಾರೆ. ಮಂಡ್ಯ ಜಿಲ್ಲೆಯ ರಾಜಕೀಯದಲ್ಲಿ, ಕಾಂಗ್ರೆಸ್ ಬಿಜೆಪಿ ಕಳೆದ ಚುನಾವಣೆಯಿಂದ ಒಟ್ಟಿಗೆ ಇದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅದೇ ರೀತಿ ಈಗಲೂ ಅವರ ಸಂಬಂಧ ಮುಂದುವರೆದಿದೆ. ಮುಂದೆ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಹೇಗೆ ಹೋಗಬೇಕು ಎಂದು ಮಾತಾಡಲು ಅವರು ಸೇರಿದ್ದಾರೆ ಎಂದು ಹೇಳಿದ್ದಾರೆ.
‘ಭೂ ಹಗರಣದಲ್ಲಿ ಭಾಗಿ ಆಗಿರುವುದು ಸಾಬೀತಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವೆ’