Political News: ಬಿಜೆಪಿ ಸಂಸದ, ಮಾಜಿ ಕ್ರಿಕೇಟಿಗ ಗೌತಮ್ ಗಂಭೀರ್ ರಾಜಕೀಯಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ, ಈ ಬಗ್ಗೆ ಮಾತನಾಡಿದ್ದು, ರಿಸೈನ್ ಲೆಟರ್ ನೀಡಿದ್ದಾರೆ.
2019ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಗೌತಮ್, ಪೂರ್ವ ದೆಹಲಿಯ ಸಂಸದರಾಗಿದ್ದರು. ಇನ್ನು ರಾಜಕೀಯ ವಿದಾಯದ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಗೌತಮ್, ಜನರ ಸೇವೆ ಮಾಡಲು ನನಗೆ ಇಷ್ಟು ವರ್ಷ ಅನುಕೂಲ ಮಾಡಿಕೊಟ್ಟಿದ್ದಕ್ಕೆ, ಪ್ರಧಾನಿ ಮೋದಿ ಮತ್ತು ಜೆ.ಪಿ.ನಡ್ಡಾ, ಅಮಿತ್ ಶಾ ಅಂವರಿಗೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ನಾವು ಕ್ರಿಕೇಟ್ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದುಕೊಂಡಿರುವೆ ಎಂದು ಗೌತಮ್ ಹೇಳಿದ್ದಾರೆ.
ಈ ಮೂಲಕ ತಾವು ರಾಜಕೀಯದಿಂದ ದೂರ ಉಳಿದು, ಕ್ರಿಕೇಟ್ ಬಗ್ಗೆ ಗಮನ ಹರಿಸುವುದಾಗಿ, ಗೌತಮ್ ಗಂಭೀರ್ ಹೇಳಿದ್ದಾರೆ.
ರಾಜ್ಯದ ಸಾಮಾನ್ಯ ಜನರ ಬದಕು ಅಸುರಕ್ಷಿತವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ