Saturday, July 27, 2024

Latest Posts

ಗಣೇಶ ಹಬ್ಬಕ್ಕೆ ಗಣ್ಯರ ಶುಭಾಶಯಗಳ ಮಹಾಪೂರ…!

- Advertisement -

National News:

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಗಣೇಶ ಚತುರ್ಥಿಯ ಹಬ್ಬದ ಶುಭಾಶಯಗಳು. ಗಣೇಶ ದೇವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಗಣಪನು ಜ್ಞಾನ, ಸಾಧನೆ ಮತ್ತು ಅದೃಷ್ಟದ ಸಂಕೇತವಾಗಿದೆ. ಗಣೇಶನ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹರಡಲಿ ಎಂದು ನಾನು ಹಾರೈಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಕೋರಿದ್ದಾರೆ. ವಿಘ್ನ ನಿವಾರಕ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನಲ್ಲಿ ಜನತೆ ಸುಖ, ಶಾಂತಿ, ಸಮೃದ್ಧಿಯಿಂದ ನೆಲೆಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭಾಶಯ ಕೋರಿದ್ದಾರೆ.

ಗೌರಿ ಹಬ್ಬಕ್ಕೆ ಬಾಗೀನ ನೀಡುವುದ್ಯಾಕೆ ಗೊತ್ತಾ..? ಬಾಗೀಣದ ಬಗ್ಗೆ ಸಂಪೂರ್ಣ ವಿವರ..

ಶ್ರೀಕೃಷ್ಣನ ಪ್ರಕಾರ ಇಂಥ ಜನರು ಎಂದಿಗೂ ಅದೃಷ್ಟವಂತರಾಗಲು ಸಾಧ್ಯವೇ ಇಲ್ಲ..

ಭಗವಾನ್ ಶ್ರೀಕೃಷ್ಣನ 16 ಸಾವಿರ ಪತ್ನಿಯರ ಅಸಲಿ ಸತ್ಯ ಇದೇ ನೋಡಿ..

- Advertisement -

Latest Posts

Don't Miss