Saturday, July 27, 2024

Latest Posts

ಕಿರುತೆರೆ ನಟಿಗೆ ಕಿರುಕುಳ: ರೂಮಿನಲ್ಲಿ ಕೂಡಿ ಹಾಕಿದವನ ಹೆಸರು ಹೇಳಿದ ನಟಿ

- Advertisement -

Bollywood News: ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ನಿರ್ದೇಶಕರು, ನಿರ್ಮಾಪಕರು. ಸಹ ನಟರು, ಸೇರಿ ಪುರುಷರಿಂದ ದೌರ್ಜನ್ಯಕ್ಕೊಳಗಾದ ಎಷ್ಟೋ ನಟಿಯರಿದ್ದಾರೆ. ಕಲಾವಿದರಿದ್ದಾರೆ.

ಇಂದು ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಯೊಬ್ಬಳು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮಗಾದ ದೌರ್ಜನ್ಯದ ಅನುಭವ ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ವೇಳೆ ನಿರ್ಮಾಪಕರು ಯಾವ ರೀತಿ ಬಿಹೇವ್ ಮಾಡುತ್ತಿದ್ದರೆಂದು ಹೇಳಿದ್ದಾರೆ. ಅಲ್ಲದೇ, ಪೊಸ್ಟ್‌ನಲ್ಲಿ ಅವರನ್ನು ಸಹ ಟ್ಯಾಗ್ ಮಾಡಿದ್ದಾಳೆ.

ಹಿಂದಿಯ ಎ ಹೈ ಮೊಹಬ್ಬತೇ ಎಂಬ ಸಿರಿಯಲ್ ಮೂಲಕ ಫೇಮಸ್ ಆಗಿದ್ದ ನಟಿ ಕೃಷ್ಣಾ ಮುಖರ್ಜಿ ಎಂಬ ನಟಿ ಶುಭ ಶಗುನ್ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆದರೆ ಅವರು ನಟಿಸಿದ್ದಕ್ಕೆ, ನಿರ್ಮಾಪಕರಾದ ಕುಂದನ್ ಸಿಂಗ್ ಸಂಬಳವೇ ನೀಡಿಲ್ಲವೆಂದು ಕೃಷ್ಣಾ ಆರೋಪಿಸಿದ್ದಾರೆ. ಈ ವಿಷಯ ಬರೆಯುವಾಗ ನನ್ನ ಕೈ ನಡುಗುತ್ತಿದ್ದು, ನನಗೆ ದುಃಖವಾಗುತ್ತಿತ್ತು. ಆದರೆ ನಾನು ಈ ವಿಷಯವನ್ನು ನಿಮಗೆ ಹೇಳಲೇಬೇಕು. ಈ ವಿಷಯ ಹೇಳಿದರೆ ಎಲ್ಲಿ ನನಗೆ ತೊಂದರೆಯಾಗುತ್ತದೆಯೋ ಎಂದು ನನ್ನ ಅಪ್ಪ ಅಮ್ಮ ಈ ರೀತಿ ಪೋಸ್ಟ್ ಹಾಕುವುದು ಬೇಡ ಎಂದಿದ್ದರು. ಆದರೆ ನಾನು ಯಾವುದಕ್ಕೂ ಹೆದರದೇ, ಈ ವಿಷಯ ಹೇಳಲೇಬೇಕೆಂದು ನಿರ್ಧರಿಸಿದ್ದೇನೆ ಎಂದು ಕೃಷ್ಣಾ ಬರೆದುಕೊಂಡಿದ್ದಾರೆ.

ನಾನು ಒಂದು ವರ್ಷದಿಂದ ಖಿನ್ನತೆಗೆ ಒಳಗಾಗಿದ್ದೆ, ಒಬ್ಬಳೇ ಕೂತು ತುಂಬ ಹೊತ್ತು ಅಳುತ್ತಿದ್ದೆ. ಶುಭ ಶಗುನ್ ಸಿರಿಯಲ್ ಶೂಟಿಂಗ್ ಸಮಯದಲ್ಲಿ ನಿರ್ಮಾಪಕರು ನನ್ನನ್ನು ಕೂಡಿ ಹಾಕಿ ಹಿಂಸೆ ಕೊಟ್ಟಿದ್ದರು. ಅಲ್ಲದೇ ನಾನು ಬಟ್ಟೆ ಚೇಂಜ್ ಮಾಡುವ ವೇಳೆ, ಬಾಗಿಲು ಮುರಿದು ಹೋಗುವ ಹಾಗೆ ಬಾಗಿಲು ಬಡಿಯುತ್ತಿದ್ದರು. ನನ್ನ ಸಂಬಳ ಕೂಡ ನನಗೆ ಸಿಗಲಿಲ್ಲವೆಂದು ಕೃಷ್ಣ ಮುಖರ್ಜಿ ದುಃಖ ಹೇಳಿಕೊಂಡಿದ್ದಾರೆ.

ಮದುವೆ ಬಳಿಕವೂ ನಟನೆ ಮುಂದುವರಿಸುತ್ತೇನೆ: ನಟಿ ಮಾನ್ವಿತಾ ಕಾಮತ್

ಕೇಂದ್ರ ಸರ್ಕಾರ ಒಲ್ಲದ ಮನಸ್ಸಿನಿಂದ ಕರ್ನಾಟಕಕ್ಕೆ ಬರ ಪರಿಹಾರ ನೀಡಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಂ ಪರ ಮತಯಾಚನೆ: ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ

- Advertisement -

Latest Posts

Don't Miss