ಹಾಸನ:
ಅರಸೀಕೆರೆ :ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ದೊಡ್ಡದು ಅಂತ ಹೇಳ್ತಿಯಲಪ್ಪ ನಾಚಿಕೆ ಮಾನ ಮರ್ಯಾದೆ ಇದ್ದಿದ್ರೆ ಅವತ್ತು ಹೇಳಿ ಪಕ್ಷ ಬಿಡಬೇಕಾಗಿತ್ತು ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ವಿರುದ್ಧ ಮಾತಿನ ಗದ ಪ್ರಹಾರ ಮಾಡಿದರು.
82ನೇ ದಿನದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್ ಡಿ ರೇವಣ್ಣ ಜೆಡಿಎಸ್ ಪಕ್ಷದ ಬಂಡವಾಳವನ್ನು, ಬಿಚ್ಚಿಡುತ್ತೇನೆ ಅಂತ ಹೇಳ್ತಿಯಲ್ಲಪ್ಪ, ನಿನ್ನ ಬಂಡವಾಳವನ್ನು ನಾವು ಬಿಚ್ಚಿಡ್ತೀವಿ, ಕಾಂಗ್ರೆಸ್ ಪಕ್ಷವನ್ನ ಹೊಗಳುವ ನೀನು, ನಾಚಿಕೆ ಮಾನ ಮರ್ಯಾದೆ ಇದ್ದಿದ್ರೆ ಅವತ್ತೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕಿತ್ತು. ನಿನ್ನಂತಹ ನಯ ವಂಚಕ ಶಾಸಕನನ್ನ ಈ ಬಾರಿ ಮನೆಗೆ ಕಳಿಸುತ್ತಾರೆ ದೇವರು ಅನ್ನೋನ್ ಒಬ್ಬನಿದ್ರೆ ಅವನೇ ನೋಡ್ಕೋತಾನೆ ಎಲ್ಲವನ್ನು ಎಂದು ಬಹಿರಂಗ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡನನ್ನ ಮಾತಿನ ಖಡಕ್ ದಾಟಿಯಲ್ಲಿ ಜಾಡಿಸಿದರು.
ನನ್ನ ಹೆಂಡತಿ ಹಳೆಯಕಾರಲ್ಲಿ ಜಮೀನಿಗೆ ಹೋಗ್ತಾಳೆ ಅವಳು ದುಡಿದು ನನ್ನನ್ನು ಸಾಗ್ತಿದ್ದಾಳೆ ಅಂತ ಹೇಳುವ ನೀವು ನಿನ್ನ ಹೆಂಡತಿ ಹೆಸರಲ್ಲಿ ಏನೇನು ಅಕ್ರಮ ಮಾಡಿದ್ದೀರಿ ಎಂಬುದು ಎಲ್ಲವನ್ನ ಸಮಯ ಬಂದಾಗ ಬಿಚ್ಚಿಡುತ್ತೇನೆ. ಇವತ್ತು ಅರಸೀಕೆರೆಯಲ್ಲಿ 15 ವರ್ಷ ನಿಮ್ಮನ್ನ ಮತ ಕೊಟ್ಟು ಬೆಳೆಸಿದ್ರಲ್ಲ ಅವರನ್ನು ಧಿಕ್ಕರಿಸಿ ಹೋಗುವ ನಿಮಗೆ ಎಲ್ಲೂ ನೆಲೆ ಸಿಗಲ್ಲ. ಅವತ್ತು ತೆಂಗಿನ ಮರಕ್ಕೆ ನುಸಿಪೀಡೆ ಬಂದಿದೆ ಪರಿಹಾರ ಬೇಕು ಅಂತ ನಾಟಕವಾಡ ಮೂಲಕ ಪ್ರತಿಭಟನೆ ಮಾಡಿದ್ರಲ್ಲ ಅವತ್ತು ದುಡ್ಡು ಕೊಟ್ಟಿದ್ದು ಯಾರು? ಬಿಜೆಪಿ ಪಕ್ಷ ನಿಮ್ಮನ್ನ ರಾಗಿ ಕಳ್ಳ ಅಂತ ಹೇಳಿದಾಗ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ್ರಲ್ಲ ಜೆಡಿಎಸ್ ಪಕ್ಷದಿಂದ ಯಾವುದೇ ಕೆಲಸ ಮಾಡಿಸಿಕೊಂಡಿಲ್ಲ ಅಂತ ನಿಮ್ಮ ತಾಕತ್ತಿದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿ. ಎಲ್ಲಾ ಸಮಾಜಕ್ಕೂ ನೀವು ಇವತ್ತು ಮೋಸ ಮಾಡ್ತಿದ್ದೀರಿ. ದೇವರು ಅನ್ನೋನು ಒಬ್ಬ ಇದ್ರೆ ಅವನೇ ನಿಮ್ಮನ್ನ ನೋಡಿಕೊಳ್ಳುತ್ತಾನೆ. ಈ ಬಾರಿ ನಿಮ್ಮನ್ನ ಮನೆಗೆ ಜನರೇ ಕಳಿಸುತ್ತಾರೆ. ನೋಡ್ತಾ ಇರಿ ಅಂತ ಶಾಸಕರ ಹೆಸರನ್ನ ಪ್ರಸ್ತಾಪಿಸದೆ ಬಹಿರಂಗ ಸಭೆಯಲ್ಲಿಯೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಇದೆ ವೇಳೆ ಕುಮಾರಸ್ವಾಮಿ ಮಾತನಾಡಿ, ನಿಮ್ಮ ಹಿಂದೆ ಜನರು ಬರಬೇಕು ಅಂತ ಅವರಿಗೆ ದುಡ್ಡು ಕೊಟ್ರಿ ಅವರು ನಿಮ್ಮನ್ನೇ ಬಿಡುತ್ತೇವೆ ಹೊರತು ಪಕ್ಷವನ್ನ ಬಿಡಲ್ಲ ಅಂದ್ರು ಅದಕ್ಕೆ ನೀವು ನನ್ ಕೊಟ್ಟಿರೋ ದುಡ್ಡು ತಗೊಂಬ ಅಂತ ಕೇಳ್ತಿರಲ್ಲ ಜನರನ್ನ ದುಡ್ಡಿನಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅವತ್ತು ನಿಮ್ಮ ಪ್ರತಿಭಟನೆಗೆ ಬಿಜೆಪಿ ನಾಯಕರು ಆಗಲಿ ಅಥವಾ ಕಾಂಗ್ರೆಸ್ ನಾಯಕರು ಆಗಲಿ ಬಂದು ಸಹಾಯ ಮಾಡಲಿಲ್ಲ ಅವತ್ತು ನಿಮ್ಮ ಹೋರಾಟಕ್ಕೆ ಸ್ಪಂದಿಸಿದ್ದು ಇದೇ ಕುಮಾರಸ್ವಾಮಿ. ಅರಸೀಕೆರೆಗೆ ಕಾಂಕ್ರೆಟ್ ರಸ್ತೆ, ವಿದ್ಯುತ್ ಸ್ಟೇಷನ್, ಹಾಲಿನ ಶಿತಲೀಕರಣ ಕೇಂದ್ರ, ನೀವು ಹೋರಾಟ ಮಾಡಿದಾಗ ತಂಗಿನ ಮರಕ್ಕೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ದು ಇದೆ ಕುಮಾರಸ್ವಾಮಿ ಜೆಡಿಎಸ್ ಕೊಡುಗೆ ಸಾಕಷ್ಟಿದೆ ಅದನ್ನ ಮರೆತು ನೀವು ನಮ್ಮ ಬಂಡವಾಳ ಬಿಚ್ಚುತ್ತೀನಿ ಅಂತೀರಲ್ಲ ಯಾರ ಬಂಡವಾಳ ಚುನಾವಣೆ ಎಲ್ಲಿ ಬಿಚ್ಚಿ ಹೋಗುತ್ತೆ ಕಾದು ನೋಡಿ ಅಂತ ಸವಾಲ್ ಹಾಕಿದ್ರು.