Tuesday, September 17, 2024

Latest Posts

ಹೊರಗೆ ಸಿದ್ಧರಾಮಯ್ಯ ಪರವಾಗಿ ಮಾತಾಡ್ತಾರೆ ಒಳೊಳಗೆ ಏನ್ ಗೊತ್ತಲಾ..?: ಪ್ರಲ್ಹಾದ್ ಜೋಶಿ ವ್ಯಂಗ್ಯ

- Advertisement -

Hubli News: ಹುಬ್ಬಳ್ಳಿ: ಹೊರಗೆ ಸಿದ್ಧರಾಮಯ್ಯನವರ ಪರವಾಗಿ ಮಾತಡ್ತಾರೆ.. ಒಳೊಳಗೆ ಏನ್ ಗೊತ್ತಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಸಿಎಮ್ ವಿಚಾರವಾಗಿ ಮೊದಲು ದೇಶಪಾಂಡೆ ನಾನ‌ ರೆಡಿ ಅಂದರೂ. ಆಮೇಲೆ ಪರಮೇಶ್ವರ, ಡಿ.ಕೆ ಶಿವಕುಮಾರ್ ಅಂತೂ ಮೊದಲು ಕಾಯ್ತಿದಾರೆ.ಎಮ್ ಬಿ ಪಾಟೀಲ್, ಸತೀಶ್ ಜಾರಕಿಹೊಳಿ. ಇನ್ನಷ್ಟು ದಿನಕ್ಕೆ ಪೋಸ್ಟರ್ ಹಾಕ್ತಾರೆ. ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ ನಂತರ ಅಭಿವೃದ್ಧಿ ಬಗ್ಗೆ ಮಾತಾಡಿ ಅಂತಾ ಕೇಳಿದಾರೆ. ನಾನು ಇವಾಗ ದುಡ್ಡು ಕೊಡ್ರಪ್ಪಾ ಅಂತಾ ಕೇಳಬೇಕು. ಬರ ಪರಿಹಾರದ ದುಡ್ಡು ಕೊಟ್ಟಿಲ್ಲ. ಅನೇಕ ಕಾಂಗ್ರೆಸ್ ಶಾಸಕರು,ಅಧಿಕಾರಿಗಳು ನಮಗೆ ದುಡ್ಡು ಕೊಡಿಸಿ ಅಂತಾ ಕೇಳತೀದಾರೆ. ರಸ್ತೆ ಎಲ್ಲ ಹಾಳಾಗಿವೆ, ದುಡ್ಡು ಕೊಡ್ರಪ್ಪಾ ಎಂದು ವ್ಯಂಗ್ಯವಾಡುವ ಮೂಲಕ, ಜೋಶಿ, ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ದ ಅವರು ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲೂ ರಸ್ತೆ ಸರಿ ಇಲ್ಲ, ಪಾಲಿಕೆಗೆ ದುಡ್ಡು ಕೊಡ್ತಿಲ್ಲ. ರಾಜ್ಯದಲ್ಲಿ ಆರ್ಥಿಕ ಅಸಮತಲೋತನ ಉಂಟಾಗಿದೆ.ಅನ್ ಪ್ಲ್ಯಾನ್ ಯೋಜನೆಯಿಂದ ಅಸಮತೋಲನ. ಹಿಮಾಚಲ ಪ್ರದೇಶದ ತರಹ ಕರ್ನಾಟಕ ಆಗತ್ತೆ .ಇವಾಗ ಅಕ್ಕಿ ಕೊಡ್ತೀನಿ ಅಂದರೂ ತಗೋತಿಲ್ಲ. ಮುನಿಯಪ್ಪ ಅವರು ಬಂದು ಅಕ್ಕಿ ಕೊಡ್ತೀರಾ ಅಂತಾ ಕೇಳಿದ್ರು. ನಾವು ಎಸ್ ಅಂದೀವಿ. ಆದ್ರೆ ಸಿದ್ದರಾಮಯ್ಯ ಅನುಮತಿ ಕೊಟ್ಟಿಲ್ಯಾಕೆ ಕೊಟ್ಟಿಲ್ಲ ಅನ್ನೋದನ್ನ ಮುನಿಯಪ್ಪ ಹೇಳಬೇಕು. ಮುನಿಯಪ್ಪ ನವರು ಹಿರಿಯರು ಅವರ ಬಗ್ಯೆ ಗೌರವ ಇದೆ ಎಂದರು.

ಮಹದಾಯಿ ವಿಚಾರವಾಗಿ ರೈತರು ಮನವಿ ಕೊಟ್ಟಿದ್ದಾರೆ. ಇದು ಜುಲೈನಲ್ಲಿ ನಡೆದ ಮೀಟಿಂಗ್ ನಮ್ಮ ಗಮನಕ್ಕೆ ಬಂದಿಲ್ಲ. ಮಹದಾಯಿ ವಿಚಾರದಲ್ಲಿ ತಪ್ಪು ತಾರಿಗೆ ಎಳೆಯೋ ಪ್ರಯತ್ನ ಮಾಡಲಾಗ್ತಿದೆ. ಕೇವಲ ಗೋವಾಕ್ಕೆ ಅಲ್ಲ, ದಾಬೋಲ್ ದಿಂದ ಯೋಜನೆ ಇದೆ.. ಇದು ಎಲ್ಲರಿಗೂ ಅನಕೂಲವಾಗೋ ಯೋಜನೆ. ಮಹದಾಯಿ ಏನೇನೂ ಒಳ್ಳೆದ ಆಗಿದೆ ಅದು ನಮ್ಮ ಕಾಲದಲ್ಲಿ ಆಗಿದ್ದು. ಕಾಂಗ್ರೆಸ್ ಮಹದಾಯಿ ವಿಚಾರವಾಗಿ ಏನೂ ಕೆಲಸ ಮಾಡಿಲ್ಲ.

ಮನೆ ಮುಂದಿರೋ ಗಿಡ ಕಡೆಯೋಕೆಬ ಆರು ತಿಂಗಳ ಬೇಕು. ನನಗೆ ಇರೋ ಮಾಹಿತಿ ಪ್ರಕಾರ 2 ಲಕ್ಷ ಗಿಡ ಕಡಿಬೇಕು. ನಾವು ಕರ್ನಾಟಕದ ಹಿತ ಕಾಪಾಡಲು ಕೆಲಸ ಮಾಡ್ತೀವಿ. ಕಾಂಗ್ರೆಸ್ ನವರು ಹನಿ ನೀರು ಕೊಡಲ್ಲ ಅಂದರು. ಇದು ಕೇವಲ ಗೋವಾ ಸಂಬಂದಿ ಯೋಜನೆ ಅಲ್ಲ. ಇನ್ನು ಅಲ್ಲಿ ಟೈಗರ್ ಕಾರಿಡಾರ್ ಇಲ್ಲ ಎಂದರು.

ನನ್ಮ ಹೇಳಿಕೆಯನ್ಮು ನೀವು ಚರ್ಚೆಗೆ ಹಚ್ಚೀದಿರಿ. ಇಷ್ಟ್ಯಾಕೆ ರಿಯಾಕ್ಟ್ ಮಾಡೋಕೆ ಹೋಗಿದಿರಿ. ಅದು ಜರೂರತ್ತು ಏನಿತ್ತು..? ಸಂಪುಟದ ಎಲ್ಲ ಮಂತ್ರಿಗಳು ಮಾತಾಡ್ತೀದಾರೆ. ನಮ್ಮಲ್ಲಿ ಒಂದು ಗಾದೆ ಒದೆ ಇದ್ದಕ್ಕಿದ್ದಂತೆ ಹೇಳಿದ್ರೆ, ಮುಂದೆ ಹೇಳೋದು ಬೇಡಾ. ಇವರು ತಪ್ಪು ಮಾಡಿದಾರೆ, ಹೀಗಾಗಿ ಎಲ್ಲರೂ ರಿಯಾಕ್ಟ್‌ ಮಾಡತೀದಾರೆ. ಅಂತಹ ಅವಶ್ಯಕತೆ ಏನಿತ್ತು ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss