Health Tips: ಹೃದಯಾಘಾತದ ಬಗ್ಗೆ ಡಾ.ಆಂಜೀನಪ್ಪ ವಿವರಿಸಿದ್ದಾರೆ. ಹೊಟ್ಟೆಯ ಆರೋಗ್ಯದ ಬಗ್ಗೆ ನಾವು ಗಮನ ಕೊಡದಿದ್ದರೆ, ನಮಗೆ ಹೃದಯಾಘಾತ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ಹೊಟ್ಟೆಯ ಆರೋಗ್ಯದ ಬಗ್ಗೆ ಸದಾ ಗಮನಹರಿಸಬೇಕು ಅಂತಾರೆ ವೈದ್ಯರು.
ಹೀಗೆ ಹೇಳೋದ್ಯಾಕೆ ಅಂದ್ರೆ, ತುಂಬ ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬಂದ ಬಳಿಕ, ಹಾರ್ಟ್ ಅಟ್ಯಾಕ್ ಆಗುತ್ತದೆ. ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎಂದಿಗೂ ಕಡೆಗಣಿಸಬಾರದು. ತುಂಬಾ ಟೆನ್ಶನ್ ತೆಗೆದುಕೊಳ್ಳುವವರಿಗೆ, ಹೆಚ್ಚು ಮಸಾಲೆ ಪದಾರ್ಥ ಸೇವಿಸುವವರಿಗೆ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.
ಅಲ್ಲದೇ, ಮದ್ಯಪಾನ, ಕಾಫಿ, ಟೀ ಸೇವನೆ, ಕರಿದ ತಿಂಡಿಗಳ ಸೇವನೆ ಯಾರು ಅತೀಯಾಗಿ ಮಾಡುತ್ತಾರೋ, ಅಂಥವರಿಗೆ ಹೆಚ್ಚು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ಇದೇ ಸಮಸ್ಯೆ ಮುಂದೊಂದು ದಿನ ಹಾರ್ಟ್ ಅಟ್ಯಾಕ್ ಆಗಿ ಬದಲಾಗಿ, ನಮ್ಮ ಜೀವಕ್ಕೆ ಕುತ್ತು ತರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.