National news: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ, ಉತ್ತರಪ್ರದೇಶದ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ಬಗ್ಗೆ ಮಾತನಾಡಿದ್ದು, ಜನವರಿ 22ರಂದು ಉತ್ತರಪ್ರದೇಶದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು ಅಲ್ಲದೇ, ರಾಜ್ಯಾದ್ಯಂತ ಅಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದಿದ್ದಾರೆ.
ಅಲ್ಲದೇ, ಈ ದಿನ ಸರ್ಕಾರಿ ಕಟ್ಟಡಗಳಿಗೆ ಚಂದವಾಗಿ ಅಲಂಕರಿಸಬೇಕು. ಪಟಾಕಿ ಸಿಡಿಸಿ, ದೀಪಾವಳಿಯಂತೆ ಆ ದಿನವನ್ನು ಸಂಭ್ರಮಿಸಬೇಕು ಎಂದು ಯೋಗಿ ಕರೆ ನೀಡಿದ್ದಾರೆ. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಅಯೋಧ್ಯೆಯನ್ನು ಸ್ವಚ್ಛಗೊಳಿಸಲು, ಕುಂಭ ಮಾದರಿ ಅನುಷ್ಠಾನಕ್ಕೆ ನಿರ್ದೇಶನ ನೀಡಿದ್ದಾರೆ. ಪೂರ್ಣಕುಂಭಾಭಿಷೇಕದ ಸಂದರ್ಭದಲ್ಲಿ ನಗರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಕರೆ ಕೊಟ್ಟಿದ್ದಾರೆ.
ಜನವರಿ 22ರಂದು, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಲಿದ್ದು, ಅಂದು ರಾಮಲಲ್ಲಾನ ಪ್ರಾಣಪ್ರತಿಷ್ಠೆಯಾಗಲಿದೆ. ಈ ದಿನ ಹಿಂದೂಗಳಿಗೆ ವಿಶೇಷ ದಿನವಾಗಿದ್ದು, ಈ ದಿನ ರಾತ್ರಿ ನಿಮ್ಮ ಮನೆಯಲ್ಲಿ ದೀಪಗಳನ್ನು ಹಚ್ಚಿ, ರಾಮಜ್ಯೋತಿ ಬೆಳಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಲ್ಲದೇ, ಅಯೋಧ್ಯೆಯ ರಾಮಮಂದಿರದಿಂದ, ಭಾರತದ ಪ್ರತೀ ಹಿಂದೂವಿನ ಮನೆಗೂ, ರಾಮ ಮಂತ್ರಾಕ್ಷತೆ ಹಂಚುವ ಕಾರ್ಯದಲ್ಲಿ ರಾಮ ಕರಸೇವಕರು ನಿರತರಾಗಿದ್ದಾರೆ. ಒಟ್ಟಾರೆಯಾಗಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಾಂಘವಾಗಿ ನಡೆಯಲಿ ಎಂಬುದೇ, ರಾಮಭಕ್ತರ ಆಶಯ.
ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್
‘ನೀವೇ ದೇವಸ್ಥಾನ ಕಟ್ಟಿ, ನೀವೇ ಪೂಜೆ ಮಾಡಿ. ದೇವರು ದೇವಸ್ಥಾನದಲ್ಲಿ ಮಾತ್ರ ಇದ್ದಾನೆ ಎನ್ನುವುದು ಸರಿಯಲ್ಲ’