ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯತ್ತೋ, ಆ ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲೆಸಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ತುಳಸಿ ಅಂದ್ರೆ ಲಕ್ಷ್ಮೀ ದೇವಿಯ ಪ್ರತಿರೂಪ. ಹಾಗಾಗಿ ಇಂದು ನಾವು ಈ ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕು ಅಂದ್ರೆ, ಯಾವ ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ. ಹಾಗಾದ್ರೆ ತುಳಸಿ ಗಿಡದ ಬಗ್ಗೆ ನಾವು ಹೇಗೆ ಕಾಳಜಿ ವಹಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಗಿಡವನ್ನ ಬೆಳೆಸುವಾಗ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ, ಅದಕ್ಕೆ ಹೆಚ್ಚು ನೀರು ಹಾಕುವುದು. ಹೌದು ಇದು ನಾವು ಮಾಡುವ ಮೊದಲ ತಪ್ಪು. ಗಿಡ ಬೇಗ ಬೆಳೆಯಲಿ ಎಂದು ಅತೀಯಾಗಿ ನೀರು ಹಾಕಿದ ಪರಿಣಾಮವಾಗಿಯೇ, ತುಳಸಿ ಗಿಡ ಬಾಡಿ ಹೋಗುತ್ತದೆ. ಹಾಗಾಗಿ ನಾವು ತುಳಸಿ ಗಿಡಕ್ಕೆ ಹೆಚ್ಚು ನೀರು ಹಾಕಬಾರದು. ಪ್ರತಿದಿನ ಒಂದು ಗ್ಲಾಸ್ ನೀರು ಹಾಕಿದ್ರು ಸಾಕು. ಹಿಂದೂ ಧರ್ಮದಲ್ಲಿ ಪ್ರತಿದಿನ ಹೆಣ್ಣು ಮಕ್ಕಳು, ತಾಮ್ರದ ಲೋಟೆಯಲ್ಲಿ ನೀರು ಹಾಕಬೇಕು, ಅಂತಾ ನಿಯಮವಿದೆ. ಈ ನಿಯಮವನ್ನ ಪಾಲಿಸಿದ್ರೆ ಸಾಕು. ಅದಕ್ಕಿಂತತ ಹೆಚ್ಚು ನೀರು ಹಾಕೋದು ಬೇಡಾ.
ಎರಡನೇಯದು, ತುಳಸಿಯ ತುದಿಯ ಎಲೆಯನ್ನ ನಾವು ಆಗಾಗ ಕೀಳುತ್ತಿರಬೇಕು. ತುಳಸಿಯ ತುದಿಗೆ ಬರುವ ಮೂರು ಎಸಳು ಎಲೆಯನ್ನ ಕಿತ್ತುಬಿಡಿ. ಇದನ್ನ ದೇವರಿಗೆ ಹಾಕಿ. ಯಾಕಂದ್ರೆ ಹೀಗೆ ತುದಿಯ ಎಲೆಯನ್ನ ಕಿತ್ತುವುದರಿಂದ, ತುಳಸಿ ಚೆನ್ನಾಗಿ ಬೆಲೆಯಲು ಸಹಾಯವಾಗುತ್ತದೆ. ಇನ್ನು ತುಳಸಿಯ ಬೀಜಗಳು ತುಂಬಾ ಬೆಳೆದಿದ್ದಲ್ಲಿ, ಅದನ್ನ ತೆಗೆದು ಹಾಕಿ. ಇಲ್ಲದಿದ್ದಲ್ಲಿ ಗಿಡ ಬಾಡಿಹೋಗುತ್ತದೆ.
ಇನ್ನು ಬೇಸಿಗೆಯಲ್ಲಿ, ಮಳೆಗಾಲದಲ್ಲಿ ತುಳಸಿ ಗಿಡ ಸುಂದರವಾಗಿ ಬೆಳೆಯುತ್ತದೆ. ಆದ್ರೆ ಚಳಿಗಾಲ ಬಂದ್ರೆ, ತುಳಸಿ ಬಾಡಲು ಶುರುವಾಗುತ್ತದೆ. ಇಲ್ಲವಾದಲ್ಲಿ ಅದಕ್ಕೆ ಹುಳ ಅಂಟಿಕೊಳ್ಳುತ್ತದೆ. ಇದಕ್ಕಾಗಿ ನಾವು ನೀಮ್ ಸ್ಪ್ರೇ ಬಳಸಬೇಕು. ಇದು ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಬಳಸುವ ರೀತಿಯನ್ನು ತಿಳಿದುಕೊಂಡು, ತುಳಸಿ ಗಿಡಕ್ಕೆ ಇದನ್ನ ಸ್ಪ್ರೇ ಮಾಡಿ.