Saturday, May 11, 2024

Latest Posts

‘ನನ್ ಮದ್ವೆ ಅನ್ನೋರಿಗೆ ಹುಚ್ ಹಿಡಿದೈತಿ’- ಕರ್ನಾಟಕ ಟಿವಿಗೆ ಹನುಮಂತ ಸ್ಪಷ್ಟನೆ

- Advertisement -

ಬೆಂಗಳೂರು: ಸರಿಗಮಪ ಕಾರ್ಯಕ್ರಮದ ಕಳೆದ ಸೀಸನ್ ನ ವಿನ್ನರ್ ಹನುಮಂತ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. ಈತನ ಹಾಡು ಕೇಳಿ ಮನಸೋತವರಿಲ್ಲ. ಈತನ ನೈಜತೆಗೆ ಮಾರುಹೋಗದವರೇ ಇಲ್ಲ. ಆದ್ರೆ ಕೆಲ ದಿನಗಳಿಂದ ಸರಿಗಮಪ ಹನುಮಂತ ಮದ್ವೆ ಆಗ್ತಾನೆ ಅನ್ನೋ ಸುದ್ದಿ ಸಖತ್ ಸದ್ದು ಮಾಡಿತ್ತು. ಅಭಿಮಾನಿಗಳು ಮಾತ್ರ, ಅರೇ… ಹನುಮಂತನಿಗೇನಾಯ್ತು. ಇಷ್ಟು ಸಣ್ಣ ವಯಸ್ಸಿಗೇ ಮದ್ವೆ ಆಗ್ತಿದ್ದಾನಲ್ಲಾ ಅಂತ ಆಶ್ಚರ್ಯಪಟ್ಟುಕೊಂಡಿದ್ರು.ಅಷ್ಟೇ ಅಲ್ಲದೆ ಹನುಮಂತಾ ನೀನು ಈಗಲೇ ಮದುವೆ ಆಗ್ಬೇಡ , ನೀನಿನ್ನೂ ಸಾಧಿಸೋದು ತುಂಬಾ ಇದೆ. ನಿನ್ನಲ್ಲಿ ತುಂಬಾ ಟ್ಯಾಲೆಂಟ್ ಇದೆ ಅಂತ ಸಲಹೆ ನೀಡಿದ್ರೂ ಅಂತಲೂ ಸುದ್ದಿ ಹರಿದಾಡ್ತಿತ್ತು. ಆದ್ರೆ ಅಸಲಿ ವಿಷ್ಯ ಬೇರೇನೇ ಇದೆ.

ಹೌದು,ಹಾವೇರಿಯ ಕುರಿಗಾಹಿಯಾಗಿದ್ದ ಹನುಮಂತು ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ನಾಡಿನಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನ ಸಂಪಾದಿಸಿದ್ದಾನೆ. ಅಷ್ಟೇ ಅಲ್ಲದೆ ಜಡ್ಜಸ್ ಕೂಡ ಈತ ಹಾಡೋ ಶೈಲಿಗೆ ಮರುಳಾಗಿಹೋಗಿದ್ದಾರೆ. ಹನುಮಂತನ ಸೂಪರ್ ಟ್ಯಾಲೆಂಟ್ ನಿಂದಾಗಿಯೇ ಸ್ಯಾಂಡಲ್ ವುಡ್ ನಲ್ಲಿ ಹಾಡೋ ಅವಕಾಶ ಕೂಡ ಸಿಕ್ಕಿದೆ. ಸದ್ಯ ಹಾವೇರಿಯ ಈ ಹುಡುಗ ದರ್ಶನ್ ಅಭಿನಯಿಸ್ತಿರೋ ಬಹುನಿರೀಕ್ಷಿತ ರಾಬರ್ಟ್ ಚಿತ್ರಕ್ಕೂ ಹಾಡುತ್ತಿದ್ದಾರೆ.

ಇನ್ನು ಈ ಸುದ್ದಿ ನಿಜಾನಾ ಅಂತ ತಿಳ್ಕೊಳ್ಳೋದಕ್ಕೆ ನಾವೇ ಹನುಮಂತುವಿಗೆ ಫೋನ್ ಮಾಡಿದ್ವಿ. ಹನುಮಂತಾ ನಿಮ್ ಮದ್ವೆ ಫಿಕ್ಸ್ ಆಯ್ತಂತೆ ಅಂತ ಕೇಳಿದ್ದಕ್ಕೆ ಸ್ವಲ್ಪ ನಾಚಿಕೊಳ್ತಾನೆ ಉತ್ತರಿಸಿದ ಹನುಮಂತ ಇಲ್ಲೇ ಯವ್ವಾ.. ಹುಡುಗೀನೇ ಸಿಕ್ಕಲ್ಲ ಇನ್ ಮದ್ಲೆ ಹೆಂಗ್ ಆಗ್ಲಿ ನಾನು ಅಂತ ಪ್ರಶ್ನಿಸಿದ. ನಾನು ಮದ್ವೆ ಆಗ್ತೀನಿ ಅಂತ್ ಹೇಳ್ತಿರೋರಿಗೆ ಹುಚ್ ಹಿಡಿದೈತಿ ಅಂತ ಪ್ರತಿಕ್ರಿಯಿಸಿದ್ರು.  ಅಲ್ಲದೆ ನನಗ್ ಇನ್ನೂ ಇಬ್ಬರು ಮದುವೆಯಾಗದ ಅಕ್ಕಂದಿರಿದ್ದಾರೆ. ಅವ್ರಿಬ್ರ ಮದ್ವೆ ಮಾಡಿದ್ಮೇಲೆ ನಾನ್ ಮಾಡ್ಕೊಳ್ತೀನಿ ಅಂತ ಹನುಮಂತು ಪ್ರತಿಕ್ರಿಯಿಸಿದ್ದಾರೆ. 2 ದಿನದಿಂದ ಯೂಟ್ಯೂಬ್ ನಲ್ಲಿ ಸುಳ್ಳು ಸುದ್ದಿ ಹಾಕ್ತಿದ್ದಾರೆ. ಹಾಗೆಲ್ಲಾ ಏನಿಲ್ಲ ಅಂತ ಹೇಳಿದ ಹನುಮಂತು ತಮ್ಮ ಮದ್ವೆ ಸುದ್ದಿಯನ್ನ ತಳ್ಳಿಹಾಕಿದ್ದಾರೆ.

ಒಟ್ನಲ್ಲಿ ಹನುಮಂತು ಇಷ್ಟು ಬೇಗ ಮದ್ವೆ ಆಗ್ತಿದ್ದಾನಾ ಅಂತ ಕನ್ಫ್ಯೂಸ್ ಆಗಿರೋ ಮಂದಿಗೆಲ್ಲಾ ಹನುಮಂತು ಕರ್ನಾಟಕ ಟಿವಿ ಮೂಲಕ ಸ್ಪಷ್ಟತೆ ಕೊಟ್ಟಿದ್ದಾರೆ.

ಸರಿಗಮಪ ಹನುಮಂತ ಕರ್ನಾಟಕ ಟಿವಿ ಜೊತೆ ಮಾತನಾಡಿರೋ ಎಕ್ಸ್ ಕ್ಲೂಸಿವ್ ಆಡಿಯೋ ಇಲ್ಲಿದೆ. ಆಡಿಯೋ ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

- Advertisement -

Latest Posts

Don't Miss