ನಿಮ್ಮ ಜನ್ಮದಿನದಂದು ಸಪ್ತ ಚಿರಂಜೀವಿಗಳ ಶ್ಲೋಕ ಓದಿ..!

ಜನ್ಮದಿನದಂದು ಸಪ್ತ ಚಿರಂಜೀವಿ ಶ್ಲೋಕವನ್ನು ಓದಿ ಎಂದು ವಿದ್ವಾಂಸರು ಹೇಳುತ್ತಾರೆ. ಹುಟ್ಟಿದ ದಿನ ಹಸುವಿನ ಹಾಲು, ಬೆಲ್ಲ ಮತ್ತು ಕಪ್ಪು ಎಳ್ಳಿನ ಮಿಶ್ರಣವನ್ನು ತೆಗೆದುಕೊಂಡು ಕೆಳಗಿನ ಶ್ಲೋಕವನ್ನು ಓದಿ ಮೂರು ಬಾರಿ ಕುಡಿಯಿರಿ.

ಜನ್ಮದಿನದಂದು ಸಪ್ತ ಚಿರಂಜೀವಿ ಶ್ಲೋಕವನ್ನು ಓದಿ ಎಂದು ವಿದ್ವಾಂಸರು ಹೇಳುತ್ತಾರೆ. ಜನ್ಮದಿನದಂದು ಹಸುವಿನ ಹಾಲು, ಬೆಲ್ಲ ಮತ್ತು ಕಪ್ಪು ಎಳ್ಳು ಮಿಶ್ರಣವನ್ನು ನೈವೇದ್ಯವಾಗಿ ಮಾಡಿ ಮತ್ತು ಈ ಕೆಳಗಿನ ಶ್ಲೋಕವನ್ನು ಮೂರೂ ಬಾರಿ ಪಠಿಸಬೇಕು ಮತ್ತು ಮೂರು ಬಾರಿ ತೆಗೆದುಕೊಳ್ಳಬೇಕು, ಇದರಿಂದ ಅಪಮೃತ್ಯು ದೋಷವು ದೂರವಾಗುತ್ತದೆ.

ಸಪ್ತ ಚಿರಂಜೀವಿ ಶ್ಲೋಕ:
ಅಶ್ವತ್ಥಾಮ, ಬಲಿರ್ವರ್ಯಸೋ, ಹನುಮಾನ್ಶ ವಿಭೀಷಣ!
ಕೃಪಾಃ ಪರಶುರಾಮಶ್ಚ ಸಪ್ತೈತೇ ಚಿರಜೀವನಃ !!
ಸಪ್ತೈತಾನ್ ಸಂಸ್ಮರೇನ್ನಿತ್ಯಂ ಮಾರ್ಕಂಡೇಯ ಯಥಾಷ್ಟಮಂ!
ಜೀವೇದ್ವರ್ಷಶತಂ ಪ್ರಾಜ್ಞಃ ಅಪಮೃತ್ಯು ವಿವರ್ಜಿತಃ !!

ಚಿರಂಜೀವಿಗಳು ಎಂದರೆ ದೀರ್ಘಾಯುಷ್ಯ ಎಂದು ಅರ್ಥ ಆದರೆ ಅಂತ್ಯವಿಲ್ಲದವರು ಅಲ್ಲ. ಯಾರು ಶಾಶ್ವತ ಕೀರ್ತಿಯನ್ನು ಹೊಂದಿರುವವರೇ ಚಿರಂಜೀವಿಗಳು. ಅಶ್ವತ್ಥಾಮ, ಬಲಿಚಕ್ರವರ್ತಿ, ವ್ಯಾಸರು , ಹನುಮಂತ, ವಿಭೀಷಣ, ಕೃಪಾಚಾರ್ಯ, ಪರುಶುರಾಮ… ಇವರೇ ಏಳು ಜನ ಅಮರರು. ಹನುಮಾನ್ ಭವಿಷ್ಯದ ಬ್ರಹ್ಮ ಮತ್ತು ಬಲಿ ಚಕ್ರವರ್ತಿ ಭವಿಷ್ಯದ ಇಂದ್ರ. ಅವರನ್ನು ನಿರಂತರವಾಗಿ ಸ್ಮರಿಸುವುದರಿಂದ ನೂರು ವರ್ಷ ಸುಖವಾಗಿ ಬಾಳುತ್ತಾರೆ.

ಲಕ್ಷ್ಮಣನ ಪತ್ನಿ ಊರ್ಮಿಳೆಯ ಮಹಾತ್ಯಾಗ.. !!

ಶ್ರೀರಾಮರಿಂದ ಲಕ್ಷ್ಮಣನ ಪತ್ನಿ ಊರ್ಮಿಳಾದೇವಿ ಬಯಸಿದ ವರ..!

ಮಕರ ಸಂಕ್ರಾಂತಿಯಂದು ಈ 5 ವಸ್ತುಗಳನ್ನು ದಾನ ಮಾಡಿ.. ಶನಿ ಸೇರಿದಂತೆ 6 ಗ್ರಹದೋಷಗಳು ನಿವಾರಣೆಯಾಗುತ್ತವೆ..!

 

About The Author