Udupi News: ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಕ್ರಮ ಕಟ್ಟಡಗಳು ತಲೆ ಎತ್ತಿದ್ದು, ವಾರದೊಳಗೆ ಅವುಗಳನ್ನೆಲ್ಲ ತೆರವುಗೊಳಿಸಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಉಡುಪಿ ಸಿಟಿ ಬಸ್ಸ್ಟ್ಯಾಂಡ್ ಬಳಿ ಅಂಜುಮಾನ್ ರಸ್ತೆಯ ಝಾರಾ ಹೊಟೇಲ್ 2 ವರ್ಷದ ಹಿಂದೆ ತೆರವುಗೊಳಿಸಿದ್ದ ಮತ್ತೆ ಅದೇ ಹೊಟೇಲ್ ಅಕ್ರಮವಾಗಿ ತಲೆ ಎತ್ತಿ ನಿಂತಿದೆ. ರಸ್ತೆ ಸಂಚಾರಕ್ಕೆ ತೊಡಕಾಗುವಂತೆ ಈ ಹೊಟೇಲ್ ಇದ್ದು, ಹಲವರು ಈ ಬಗ್ಗೆ ದೂರು ನೀಡಿದರೂ, ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದೇ, ಅಕ್ರಮ ಕಟ್ಟಡಗಳಿಗೆ ಸಹಕಾರ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಒಂದು ವಾರದೊಳಗೆ ಕಟ್ಟಡವನ್ನು ತೆರವುಗೊಳಿಸದಿದ್ದಲ್ಲಿ, ಪ್ರತಿಭಟಿಸಿ, ಕಟ್ಟಡ ತೆರವಿಗೆ ಮುಂದಾದರೆ, ಅದಕ್ಕೆ ನಗರಸಭೆ ಪೌರಾಯುಕ್ತರೇ ಹೊಣೆಯಾಗಲಿದ್ದಾರೆ ಎಂದು ಈ ಪ್ರಕಟಣೆಯಲ್ಲಿ ತಿಳಿಸಿದೆ.
ಟೆರರಿಸ್ಟ್, ಕಲ್ಲು ತೂರಾಟ ಮಾಡುವವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗವಿಲ್ಲ: ಅಮಿತ್ ಶಾ
Israel war: ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಮಕ್ಕಳು ಸೇರಿ 35 ಮಂದಿ ಸಾವು