ಮೊದಲ ಕದನಕ್ಕೆ ಸಜ್ಜಾದ ಟೀಮ್ ಇಂಡಿಯಾ

ಹರಾರೆ:ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಹರಾರೆಯಲ್ಲಿ ನಡೆಯಲಿದೆ.

ಆರು ವರ್ಷಗಳ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ  ಪ್ರವಾಸ ಕೈಗೊಂಡಿದೆ. ಏಷ್ಯಾಕಪ್ ಸರಣಿಗೂ ಮುನ್ನ ಭಾರತ ತಂಡಕ್ಕಿದು ಅಭ್ಯಾಸ ಪಂದ್ಯವಾಗಿದೆ. ಯುವ ಆಟಗಾರರಿಗಿದು ಸಾಮರ್ಥ್ಯ ತೋರಿಸಲು ಮತ್ತೊಂದು ಅವಕಾಶ ವಾಗಿದೆ.

ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಗೆ ಮತ್ತೊಂದು ಅವಕಾಶವಾಗಿದೆ. ನಾಯಕನಾಗಿ ಆಡಲಿರುವ ಕೆ.ಎಲ್ ರಾಹುಲ್ ಚೆನ್ನಾಗಿ ಆಡಿ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ.

ಇನ್ನು ಉಪನಾಯಕ ಶಿಖರ್ ಧವನ್ ಏಷ್ಯಾಕಪ್ ಗೆ ಒತ್ತಡ ಕಡಿಮೆ ಇರಲಿದ್ದು ಬ್ಯಾಟಿಂಗ್ ನಲ್ಲಿ ಮಿಂಚ ಬೇಕಿದೆ. ಆಫ್ ಸ್ಪಿನ್ನರ್ ಸುಂದರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಬದಲು ಕುಲದೀಪ್ ಯಾದವ್ ಅಥವಾ ದೀಪಕ್ ಹೂಡಾ ಆಡಲಿದ್ದಾರೆ.

About The Author