Sunday, May 19, 2024

Latest Posts

IPL: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಹಿಂದೆ ಸರಿದ ಧೋನಿ, ಋತುರಾಜ್ ಹೊಸ ನಾಯಕ

- Advertisement -

Sports News: ಐಪಿಎಲ್ ಪಂದ್ಯದ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಇಷ್ಟು ವರ್ಷದಿಂದ ಕ್ಯಾಪ್ಟನ್ ಆಗಿದ್ದ ಕ್ಯಾಪ್ಟನ್ ಕೂಲ್ ಧೋನಿ, ಈ ಬಾರಿ ನಾಯಕತ್ವದಿಂದ ದೂರ ಸರಿದಿದ್ದಾರೆ. ನೂತನ ನಾಯಕನಾಗಿ ಋತುರಾಜ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದೇ ಧೋನಿ. ಯಾಕಂದ್ರೆ ಆ ತಂಡವನ್ನು ಧೋನಿಯೇ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಐಪಿಎಲ್ ಶುರುವಾಗುವ ಮುನ್ನವೇ, ಧೋನಿ ಸಿಎಸ್‌ಕೆ ತಂಡದ ನಾಯಕತ್ವದಿಂದ ಹಿಂದೆ ಸರಿದು, ಋತುರಾಜ್ ಗಾಯಕ್ವಾಡ್‌ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ.

2022ರಲ್ಲಿ ಧೋನಿ ಸಿಎಸ್‌ಕೆ ನಾಯಕತ್ವದಿಂದ ಹಿಂದೆ ಸರಿದಾಗ, ರವೀಂದ್ರ ಜಡೇಜಾ ಆ ಸ್ಥಾನವನ್ನು ತುಂಬಿದ್ದರು. ಆದರೆ ಅದಾದ ಬಳಿಕ, ಸಿಎಸ್‌ಕೆ ಸತತವಾಗಿ ಸೋಲು ಕಂಡಿದ್ದು, ಮರಳಿ ಗೂಡಿಗೆ ಎಂಬಂತೆ, ಜಡೇಜಾ ತಮಗೆ ಸಿಕ್ಕಿದ್ದ ನಾಯಕತ್ವವನ್ನು ಧೋನಿಗೆ ವಾಪಸ್ ನೀಡಿ, ತಮ್ಮ ಸ್ಥಾನಕ್ಕೆ ತಾವು ಹೋಗಿ ನಿಂತುಕೊಂಡರು. ಬಳಿಕ 2023ರಲ್ಲಿ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಟ್ರೋಫಿ ತಮ್ಮ ಪಾಾಲಾಗಿಸಿಕೊಂಡಿತ್ತು.

ಇದೀಗ ಮತ್ತೆ ನಾಯಕತ್ವ ಸ್ಥಾನವನ್ನು ಧೋನಿ, ಋತತುರಾಜ್ ಗಾಯಕ್ವಾಡ್‌ಗೆ ಬಿಟ್ಟುಕೊಟ್ಟಿದ್ದು, ಈ ಬಾರಿ ಋತುರಾಜ್ ಚೆನ್ನಾಗಿ ನಾಯಕತ್ವ ನಿಭಾಯಿಸಿ, ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಾರಾ ಅಥವಾ ಧೋನಿಗೇ ಮರಳಿ ಜವಾಬ್ದಾರಿ ಹಿಂದಿರುಗಿಸುತ್ತಾರಾ ಅಂತಾ ಕಾದು ನೋಡಬೇಕಿದೆ.

ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.

ತಾಳಿ ಕಟ್ಟುವ ವೇಳೆ ಸಿನಿಮೀಯ ರೀತಿಯಲ್ಲಿ ಮುರಿದು ಬಿದ್ದ ಮದುವೆ..

ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..

- Advertisement -

Latest Posts

Don't Miss