ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ ಹಿನ್ನೆಲೆ, ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟ ಜಯ ಮೃತ್ಯುಂಜಯ ಸ್ವಾಮೀಜಿ

Dharwad News: ಧಾರವಾಡ: ಪಂಚಮಸಾಲಿ ಸಮಾಜದ ಪ್ರಮುಖ ಬಸನಗೌಡ ಪಾಟೀಲ ಯತ್ನಾಳ ಅವರ ಅಮಾನತ್ತು ಮಾಡಿರುವ ಹಿನ್ನೆಲೆಯಲ್ಲಿ ಸಮುದಾಯದ ಜನರು ಪ್ರತಿ ಕಡೆಯೂ ಹೋರಾಟ ಮಾಡಿ ಎಂದು ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಕರೆ ನೀಡಿದರು.

ಯತ್ನಾಳ ಅವರನ್ನ ಬಿಜೆಪಿ ಉಚ್ಚಾಟನೆ ಮಾಡಿದ್ದ ಸರಿಯಲ್ಲ. ಉತ್ತರ ಕರ್ನಾಟಕದ ಹುಲಿ ಬಸನಗೌಡ ಪಾಟಿಲ ಯತ್ನಾಳ ಅವರನ್ನ ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಲಿಂಗಾಯತ ಪಂಚಮಸಾಲಿ ಖಂಡಿಸುತ್ತಿದೆ. ಪಾಟೀಲರು ಬಿಜೆಪಿ ಬಗ್ಗೆ ತಪ್ಪು ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ದ ಯಾವತ್ತು ನಡೆದುಕ್ಕೊಂಡಿಲ್ಲ. ಅವರ ರಾಜಕೀಯ ಬೆಳವಣಿಗೆಯನ್ನ ಕುಗ್ಗಿಸಿದೆ. ಕುಟುಂಬ ರಾಜಕಾರಣ ಹೇಳುವ ಪಕ್ಷ, ಅದೆ ಪಕ್ಷದ ಭ್ರಷ್ಟಾಚಾರ ಮಾಡಿದ ವ್ಯಕ್ತಿಯ ಬಗ್ಗೆ ಬಿಜೆಪಿ ಸಾಪ್ಟ ಆಗಿದೆ. ಯತ್ನಾಳ್ ಅವರು ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ.

ಇವತ್ತು ಬಿಜೆಪಿ ಪಕ್ಷದ‌ ದುಷ್ಟ ಶಕ್ತಿಗಳು ಅವರನ್ನ ಉಚ್ಚಾಟನೆ ಮಾಡುವಂತೆ ಮಾಡಿದೆ. ಬಿಜೆಪಿ ಪಕ್ಷ ತನ್ನ ಕಾಲ ಮೇಲೆ ಕಲ್ಲು ಹಾಕಿಕ್ಕೊಂಡಿದೆ. ಅವರು ಪಕ್ಷೇತರ ಶಾಸಕರಾಗಿ ಇರುತ್ತಾರೆ ಮುಂದಿನ 3 ವರ್ಷ. ಮಾಜಿ ಸಿಎಂ ಯಡಿಯೂರಪ್ಪ ಅವರು ಮೀಸಲಾತಿ ಕೊಡಲಿಲ್ಲ. ಅದಕ್ಕೆ ಯತ್ನಾಳ ಹೋರಾಟ ಮಾಡುತ್ತಿದ್ದಾರೆ. ಸದ್ಯ 66 ಸೀಟುಗಳನ್ನ ಬಿಜೆಪಿ ಪಡೆದಿದೆ ಮುಂದಿನ ದಿನಗಳಲ್ಲಿ 33 ಸೀಟುಗಳನ್ನ ಬಿಜೆಪಿ ಪಕ್ಷ ಆಯ್ಕೆ ಆಗಲ್ಲ. ಪ್ರಧಾನಿ ಮೋದಿ, ಅಮಿತ್ ಷಾ ಅವರಿಗೆ ಗೊತ್ತಿಲ್ಲದೆ ಕೆಲ ದುಷ್ಟ ಶಕ್ತಿಗಳು ಈ ರೀತಿ ಮಾಡಿವೆ ಎಂದು ಸ್ವಾಮೀಜಿ ಕಿಡಿಕಾರಿದ್ದಾರೆ.

ಮುಂದಿನ ದಿನಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ. ನಮ್ಮ ಸಮಾಜ ಯತ್ನಾಳ ಪರವಾಗಿ ಇರುತ್ತೆ. ಅವರು ಸತ್ಯಮೇವ ಜಯತೆ ಎಂದು ಹೇಳಿದ್ದಾರೆ. ಪಂಚಮಸಾಲಿ ಸಮುದಾಯ ಯತ್ನಾಳ್ ಪರವಾಗಿ ಇರುತ್ತೆ. ಎಂದು ಕಾಂಗ್ರೆಸ್ ಮತ್ತು ಬಿಜೆಪಿಗೆ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಪಂಚಮಸಾಲಿಗೆ ೨ ಎ ಹೋರಾಟಕ್ಕೆ ಇಳಿದಿದ್ದಕ್ಕೆ ಅವರನ್ನ ಉಚ್ಚಾಟನೆ ಮಾಡಿದ್ದಾರೆ. ಸಮಾಜ ಯತ್ನಾಳ್ ಅವರನ್ನ ಯಾವುದೆ ಕಾರಣಕ್ಕೂ ಕೈ ಬಿಡಲ್ಲ. ಬಸನಗೌಡ ಅವರನ್ನ ಉಚ್ಚಾಟನೆ ಮಾಡಿದ್ದು ಬಿಜೆಪಿಗೆ ಹಿನ್ನಡೆ. ಯತ್ನಾಳ್ ಅವರು ನೇರ ದಿಡ್ಡ ನಿರಂತರ ರಾಜಕಾರಣಿ. ರಾಜ್ಯಾದ್ಯಂತ ಪಂಚಮಸಾಲಿಯವರು ಕರೆ ಮಾಡುತ್ತಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಪರ ರಾಜ್ಯಾದ್ಯಂತ ಪಂಚಮಸಾಲಿ ಸಮುದಾಯ ಸಾಥ್ ಕೊಡುತ್ತೆ ಎಂದು ಸ್ವಾಮೀಜಿ ಹೇಳಿದ್ದಾರೆ.

About The Author