- Advertisement -
ಜಾರ್ಖಂಡ್ : ಕಾಂಗ್ರೆಸ್ – JMM ನ ಮೈತ್ರಿ ಸರ್ಕಾರ ಅಲ್ಲಿನ ಜನರಿಗೆ ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಹೌದು ಅಲ್ಲಿನ ಮೈತ್ರಿ ಸರ್ಕಾರ ಎರಡು ವರ್ಷ ಪೂರೈಸಿರುವ ಸಂಭ್ರಮಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 25 ರೂ ಸಬ್ಸಿಡಿ ನೀಡಲು ಮುಂದಾಗಿದೆ. ಈ ಸಬ್ಸಿಡಿಯೂ ದ್ವಿಚಕ್ರ ವಾಹನಗಳಿಗೆ ಮಾತ್ರ, ಅವರು ಬಿಪಿಎಲ್ ಕಾರ್ಡ್ ಹೊಂದಿರಬೇಕಾಗುತ್ತದೆ, ಆಗ ಮಾತ್ರ ಈ ಸಬ್ಸಿಡಿ ಹಣ ದೊರೆಯುತ್ತದೆ. ತ್ರಿಚಕ್ರ, ಕಾರು, ಮತ್ತು ಬೇರೆ ಯಾವ ವಾಹನಗಳಿಗೂ ಸಹ ಈ ಸಬ್ಸಿಡಿ ದೊರೆಯುವುದಿಲ್ಲ. ಈ ನಿಯಮ ಜನವರಿ 26 ರಿಂದ ಜಾರಿಯಲ್ಲಿರುತ್ತದೆ ಎಂದು ಜಾರ್ಖಂಡ್ ಮುಖ್ಯಮಂತ್ರಿಯಾದ ಹೇಮಂತ್ ಸೊರೆನ್ ಹೇಳಿಕೆ ನೀಡಿದ್ದಾರೆ.
- Advertisement -