ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಇಬ್ಬರು ಶಿಕ್ಷಕರ ಕೈ ಮುರಿದಿದೆ.
ಚಿಕೊಪ್ಪ ಗ್ರಾಮದಿಂದ ಬಸ್ಸು ರಾಮದುರ್ಗ ಕಡೆ ಬರುವ ಸಂಧರ್ಭದಲ್ಲಿ ಅಪಘಾತನ ಸಂಭವಿಸಿದೆ. ನೇರವಾಗಿ ಬಂದ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್ಸಿನಲ್ಲಿ 50ರಿಂದ 60 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯಾಣಿಸುತ್ತಿದರು.
ಇಂದು ಬಿಎ ಫೈನಲ್ ವಿದ್ಯಾರ್ಥಿಗಳ ಪರೀಕ್ಷೆ ಕೂಡ ಇದ್ದು, ಈ ಘಟನೆ ಮುಂಜಾನೆ ನಡೆದಿದೆ. ಗಾಯಾಳುಗಳನ್ನು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Cauvery Water : ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿರೋ ಸಂಘಟನೆಗಳು ಯಾವುವು ಗೊತ್ತಾ..?!
Cauvery Water : ಬೆಂಗಳೂರು ಬಂದ್ : ಏನೇನು ಇರುತ್ತೆ ಏನೇನು ಇರಲ್ಲ..?!