Life Lesson: ನಮ್ಮಲ್ಲಿ ಹಲವರು ನಾಳೆ ಜೀವನ ಹೇಗೋ ಏನೋ..? ನಾಳೆ ನನ್ನ ಕೈ ಕಾಲು ಬಿದ್ದರೆ, ಏಳಲು ಆಗದಿದ್ದಾಗ, ನಾನು ಬದುಕೋದು ಹೇಗೆ? ಈ ರೀತಿ ಹಲವು ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಈ ಯೋಚನೆಯಲ್ಲಿ ಇಂದಿನ ಜೀವನವನ್ನು ಚಿಂತೆಯಿಂದಲೇ ಕಳೆಯುತ್ತಾರೆ.
ನಾಳೆ ಏನಾಗುತ್ತದೆ ಅನ್ನೋದು ನಿಮ್ಮ ಕೈಯಲ್ಲಿಲ್ಲ. ಬದಲಾಗಿ ನಾಳೆ ಹಾಳಾಗದಂತೆ ಇಂದು ಅದಕ್ಕಾಗಿ 1 ವ್ಯವಸ್ಥೆ ಮಾಡೋದು ಮಾತ್ರ ನಮ್ಮ ಕೈಯಲ್ಲಿರುತ್ತದೆ. ಆ ವ್ಯವಸ್ಥೆಗಾಗಿ ಪ್ರಯತ್ನ ಮಾಡುವುದು ಮಾತ್ರ ನಮ್ಮ ಕೆಲಸವಾಗಿರಬೇಕು. ಕೆಲಸ ಮಾಡುವಾಗ, ಆ ಬಗ್ಗೆ ಚಿಂತೆ ಮಾಡಿದರೆ, ಸದ್ಯದ ನೆಮ್ಮದಿ ಹಾಳಾಗುತ್ತದೆ.
ನಿಮ್ಮ ಇಂದಿನ ವಿಚಾರ ಮತ್ತು ಕರ್ಮ ಶುದ್ಧವಿದ್ದರೆ, ನಾಳೆನ ದಿನ ಉತ್ತಮವೇ ಆಗಲಿದೆ. ನಾಳೆಯ ಬಗ್ಗೆ ಚಿಂತೆ ಮಾಡುವ ಬದಲು, ವ್ಯವಸ್ಥೆಗಾಗಿ ಪ್ರಯತ್ನ ಮತ್ತು ಉತ್ತಮ ವಿಚಾರ, ಕೆಲಸ ಮಾಡಿದಾಗ, ನಿಮ್ಮ ನಾಳೆ ಉತ್ತಮವಾಗಿ ಸುಧಾರಿಸುತ್ತದೆ.
ತಲೆ ತುಂಬ ಚಿಂತೆ ತುಂಬುವ ಬದಲು, ದಿನವನ್ನು ಆರೋಗ್ಯಕರವನ್ನಾಗಿರಿಸಿ. ಇದರಿಂದ ವಿಚಾರವೂ ಆರೋಗ್ಯಕರವಾಗಿರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಹೆಚ್ಚಿನ ಜನರಿಗೆ ಅನಾರೋಗ್ಯಕರ ಆಹಾರ ಸೇವನೆಗಿಂತ ಹೆಚ್ಚಾಗಿ, ಯಾವುದಾದರೂ ವಿಷಯದ ಬಗ್ಗೆ ಇರುವ ಚಿಂತೆಯಿಂದಲೇ ಶುಗರ್, ಬಿಪಿ ಬರುತ್ತಿರುವುದು.
ಹಾಗಾಗಿ ಚಿಂತೆ ನಮ್ಮ ನೆಮ್ಮದಿಯನ್ನು ಸುಡುತ್ತ ಹೋಗುತ್ತಿದೆ ಅನ್ನೋ ವಿಚಾರ ನಾವು ತಿಳಿಯಬೇಕು. ನಿಮ್ಮ ಭವಿಷ್ಯ ಈಗಾಗಲೇ ಬರೆದಾಗಿದೆ. ಆ ಭವಿಷ್ಯವನ್ನು ಉತ್ತಮವಾಗಿಸಲು ನಾವು ಕೆಲಸ ಮಾಡಬೇಕೇ ವಿನಃ ಅದಕ್ಕಾಗಿ ಚಿಂತೆ ಮಾಡಿ, ದಿನ ಹಾಳು ಮಾಡಬಾರದು. ಇದೆಲ್ಲದಕ್ಕೂ ಉತ್ತಮ ಪರಿಹಾರ ಅಂದ್ರೆ, ಕನ್ನಡಿ ಮುಂದೆ ಕುಳಿತು 10 ನಿಮಿಷ ನೀವು ನಿಮ್ಮ ಜತೆ ಮಾತನಾಡಿ. ಆ ಮಾತಿನಲ್ಲಿ ಎಲ್ಲಿಯೂ ಋಣಾತ್ಮಕ ವಿಷಯ ಬಾರದಿರಲಿ.




