ಮಹೇಂದ್ರ ಸಿಂಗ್ ಧೋನಿಯವರನ್ನು ಎಮ್ ಎಸ್ ಧೋನಿ ಎಂದೂ ಕರೆಯಲಾಗುತ್ತದೆ. ಇವರು ಭಾರತದ ಕ್ರಿಕೆಟಿಗ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. ಆರಂಭದಲ್ಲಿ ಅತಿ ಅಬ್ಬರದ ಮತ್ತು ಆಕ್ರಮಣಕಾರಿ ಬ್ಯಾಟ್ಸ್ ಮ್ಯಾನ್ ಎಂದು ಗುರುತಿಸಿಕೊಂಡರು. ಅದಾದ ನಂತರ ಧೋನಿಯವರು ಭಾರತದ ಏಕದಿನ ತಂಡದ ಶಾಂತ ಸ್ವಭಾವದ ನಾಯಕರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಮಹೇಂದ್ರ ಸಿಂಗ್ ಧೋನಿ ಅವರು ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಟೀಮ್ನಲ್ಲಿ ಆಡುತ್ತಿದ್ದಾರೆ. ಸದ್ಯ ಅವರು ತಮಿಳುನಾಡಿನ ಟೀಮ್ನಲ್ಲಿರುವುದರಿಂದ ಅವರಿಗೆ ಅಲ್ಲಿ ಸಖತ್ ಫ್ಯಾನ್ಸ್ ಕೂಡ ಇದ್ದಾರೆ.
ಇದೀಗ ಧೋನಿ ಅವರು ಸಿನಿಮಾ ಮಾಡಲು ಹೊರಟಿರುವುದು ಆಶ್ಚರ್ಯ ತಂದಿದೆ. ಧೋನಿ ತಮಿಳು ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಅಷ್ಟಕ್ಕೂ ಧೋನಿ ನಟಿಸುತ್ತಿಲ್ಲ. ಬದಲಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲಸಗಳನ್ನು ಶುರು ಮಾಡಿದ್ದಾರಂತೆ. ರಜನಿಕಾಂತ್ ಜೊತೆಗೆ ಪಳಗಿದ್ದ ಸಂಜಯ್ ಎಂಬುವವರನ್ನು ತಮ್ಮ ಸಿನಿಮಾ ನಿರ್ಮಾಣ ಕೆಲಸಗಳಿಗೆ ನಿಯೋಜಿಸಿದ್ದಾರಂತೆ. ಇದಷ್ಟೇ ಅಲ್ಲದೆ, ಕಥೆ ಕೇಳುತ್ತ, ಸ್ಕ್ರಿಪ್ಟ್ ಫೈನಲೈಸ್ ಮಾಡುವತ್ತ ಗಮನ ನೀಡಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಧೋನಿ ಯಾರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಯಾಗಿದ್ದು, ಧೋನಿ ನಿರ್ಮಾಣ ಮಾಡಲಿರುವ ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಇನ್ನು, ನಯನತಾರಾ ಮುಖ್ಯಭೂಮಿಕೆಯಲ್ಲಿರುವುದರಿಂದ ಇದು ಮಹಿಳಾ ಪ್ರಧಾನ ಸಿನಿಮಾ ಇರಬಹುದಾ ಎಂಬ ಲೆಕ್ಕಾಚಾರದ ಮಾತುಗಳು ಕೇಳಿಬಂದಿದೆ. ನಯನತಾರಾ ಈಗಾಗಲೇ ಸೌತ್ ಇಂಡಿಯಾದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಹೆಸರು ಮಾಡಿದ್ದಾರೆ. ಇವರ ಜೊತೆಗೆ ಧೋನಿ ಸಿನಿಮಾ ಮಾಡುತ್ತಿರುವುದರಿಂದ ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.
ಧೋನಿ ತಮಿಳುನಾಡಿನ ಅಭಿಮಾನಿಗಳಿಗೆ ಬಾರಿ ಹಚು ಮೆಚ್ಚು. ಈಗಾಗಲೇ ತಮಿಳುನಾಡಿದಲ್ಲಿ ಥಲಾ ಎಂದೇ ಅಭಿಮಾನಿಗಳಲ್ಲಿ ಹೆಸರು ಮಾಡಿರುವ ಧೋನಿ, ಇದೀಗ ತಮಿಳು ಸಿನಿಮಾ ನಿರ್ಮಾಣ ಮಾಡುವ ಮೂಲಕ ತಮಿಳುನಾಡಿನ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ