Sunday, June 1, 2025

Latest Posts

‘ಕಾಂಗ್ರೆಸ್ ಹೀನಾಯ‌ ಸ್ಥಿತಿಗೆ ಬರಲು ಕಾರಣ ಇಂತಹ ಸುಳ್ಳು ಭರವಸೆಗಳು..’

- Advertisement -

ಕೋಲಾರ: ಅಭಿವೃದ್ಧಿ ಹೆಸರಲ್ಲಿ‌ ಕಾಂಗ್ರೆಸ್ ಚುನಾವಣೆ ಎದುರಿಸುವುದನ್ನ ಬಿಟ್ಟು ಸುಳ್ಳು ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಜನರನ್ನು ಮತ್ತೊಮ್ಮೆ ಯಾಮಾರಿಸಲು ಗ್ಯಾರೆಂಟಿ ಗಿಮಿಕ್ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಂಜುನಾಥಗೌಡ ಕಾಂಗ್ರೆಸ್ ಗ್ಯಾರೆಂಟಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ .

ಮಾಲೂರಿನ ಬೆಳ್ಳಾವಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಮಾಜಿ ಶಾಸಕ ಮಂಜುನಾಥ್ ಗೌಡ ಕಾಂಗ್ರೆಸ್ 4ನೇ ಗ್ಯಾರೆಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದ್ರೆ ಇದರಿಂದ ರಾಜ್ಯದ ಎಕಾನಾಮಿ ಮೇಲೆ ಹೊಡೆತ ಬೀಳಲಿದೆ. ಇದು‌ ಚುನಾವಣೆಗಾಗಿ ಕಾಂಗ್ರೆಸ್ ಮಾಡುತ್ತಿರುವ  ಗಿಮಿಕ್ ಎಂದರು.

ಕಾಂಗ್ರೆಸ್ ಹೀನಾಯ‌ ಸ್ಥಿತಿಗೆ ಬರಲು ಕಾರಣ ಇಂತಹ ಸುಳ್ಳು ಭರವಸೆಗಳು ಯೋಚಿಸದೇ ಘೋಷಣೆ ಮಾಡುತ್ತಿರೋದು. ಇದರಿಂದ ನಾನು ಸಹ ಒಂದು ನಿರ್ಧಾರಕ್ಕೆ ಬಂದಿದ್ದು ಒಬ್ಬೊಬ್ಬರಿಗೆ 10 ಸಾವಿರ, ಕೂತ್ಕೊಂಡೋರಿಗೆ 5 ಸಾವಿರ ಓಡಾಡೋರಿಗೆ 3 ಸಾವಿರ ಅಂತ ಘೋಷಣೆ ಮಾಡಿ ಚುನಾವಣೆಯಲ್ಲಿ ಗೆಲ್ಲಬಹುದಲ್ವಾ ಯಾಕೆಂದ್ರೆ ಜನ್ರಿಗೆ ಕೋಡೋ ಹಾಗಿಲ್ವಲ್ಲಾ ಎಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಬಗ್ಗೆ ವ್ಯಂಗ್ಯವಾಡಿದರು.

ಜನರು ತೆರಿಗೆ ಪಾವತಿಸಿದರೆ ಮಾತ್ರ ದೇಶ ಅಭಿವೃದ್ದಿಯಾಗುತ್ತದೆ. ಆ ತೆರಿಗೆ ಹಣದಿಂದ ಅಭಿವೃದ್ಧಿ ತಂತ್ರಜ್ಞಾನ, ದೇಶದ ರಕ್ಷಣೆಗಾಗಿ ಬಡವರ ಜೊತೆ, ಶೋಷಿತ ವರ್ಗಕ್ಕೆ ಅನುಕೂಲವಾಗುವಂತಹ ಪ್ರಣಾಳಿಕೆ ಮಾಡಬೇಕು. ಇವತ್ತು ಪಕ್ಕದ ಶ್ರೀಲಂಕಾ, ಪಾಕಿಸ್ತಾನದ ಸ್ಥಿತಿ‌ ಹೇಗಾಗಿದೆ ಇದನ್ನೆಲ್ಲಾ‌ ಕಂಡು ಉಚಿತ ಉಚಿತ ಎಂದು ಸುಳ್ಳು ಭರವಸೆಯನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸ್ಥಳೀಯ ಕಾಂಗ್ರೆಸ್ ಶಾಸಕರು ಕಳೆದ 5 ವರ್ಷದಿಂದ ಮಾಡಿರುವ ಅಭಿವೃದ್ಧಿ ಕೆಲಸಗಳ ಮೂಲಕ ಚುನಾವಣೆ ನಡೆಸೋದು ಬಿಟ್ಟು ತನ್ನ ಪಕ್ಷ ನೀಡಿರುವ ಸುಳ್ಳು ಗ್ಯಾರೆಂಟಿಗಳ ಮೂಲಕ‌ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ವಿನಃ ಅಭಿವೃದ್ಧಿ ಹೆಸರಲ್ಲಿ ಚುನಾವಣೆ ನಡೆಸಲು ಮುಂದಾಗಿಲ್ಲ, ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಗೌರವ ಉಳಿಸಿಕೊಂಡಿದ್ದೀರಾ? ಭಷ್ಟಾಚಾರ ರಹಿತ ಶಾಸಕರಾ, ಭ್ರಷ್ಟಾಚಾರದ ಜೊತೆ ಓಡೋಗಿರೋ ಶಾಸಕರಾ ಇಲ್ಲ ಭ್ರಷ್ಟಾಚಾರ ಶಾಸಕರಾ… ಈ ಮೂರು ಕ್ಯಾಟಗಿರಿಯಲ್ಲಿ ಯಾವುದು ಅಂತ ಸೆಲೆಕ್ಟ್ ಮಾಡಿಕೊಂಡು ಅವ್ರು ಜನ್ರ ಮುಂದೆ ಹೋಗಬೇಕು ಎಂದರು.

ಯುವಕರಿಗೆ ಕೆಲಸ ಮಾಡಬೇಕು, ಕೈಗಾರಿಕೆಗಳು ಸೃಷ್ಟಿ ಮಾಡಬೇಕು, ಯುವಕರಿಗೆ ಆರ್ಥಿಕ ವ್ಯವಸ್ಥೆಯ ಸದೃಢ ರೀತಿ ಮಾಡಬೇಕು, ಅದು ಪದವೀದರಿಗೆ ಡಿಪ್ಲೊಮಾ ಮಾಡಿರೋ‌ ಯುವ ಜನತೆಗೆ ಉಚಿವಾಗಿ 3ಸಾವಿರ ಕೊಡ್ತೇನೆ ಅಂತ ಅವರನ್ನ ಶಾಶ್ವತವಾಗಿ ನಿರುದ್ಯೋಗಿಗಳನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದರು.

ಮಾರ್ಚ್ 26 ರಂದು ಮಾಲೂರಿನಲ್ಲಿ‌ ಬಿಜೆಪಿಯಿಂದ ಮಹಿಳಾ ಮೋರ್ಚಾ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ 30 ಸಾವಿರ ಮಹಿಳೆಯರು ಆಗಮಿಸಲಿದ್ದಾರೆ. ಇನ್ನು ಬಿಜೆಪಿಯಿಂದ ಯಾರಿಗೆ ಟಿಕೆಟ್‌ ಕೊಟ್ಟರೂ‌ ಅವ್ರು ಸಹ ಬಿಜೆಪಿನೆ ಅಲ್ವಾ. ನಾನಂತೂ‌‌ ಕ್ಷೇತ್ರದಲ್ಲಿ ಸ್ಪೋಟಿವ್ ಹಾಗಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಯಾರು ‌ಗೆಲ್ತಾರೆ, ಯಾರು ಗೌರವ ಉಳಿಸಿಕೊಂಡಿದ್ದಾರೆ ಎಂಬುದನ್ನು ಗಮನಿಸುತ್ತೆ. ರಾಜಕೀಯವಾಗಿ ಏನಾದ್ರು ಸಾಧನೆ ಮಾಡಿದ್ದಾರಾ ಹಾಗೂ ಜನರ ಪರವಾಗಿ ಕೆಲಸ ಮಾಡಿದ್ದಾರಾ ಅಂತ ನೋಡಿ ಹೈಕಮಾಂಡ್ ಟಿಕೆಟ್ ನೀಡುತ್ತೆ ಎಂದರು.

Ugadi Special : ಯುಗಾದಿ ಹಬ್ಬವನ್ನ ಯಾವಾಗಿನಿಂದ ಆಚರಿಸಲು ಶುರು ಮಾಡಲಾಯಿತು..?

ಮಗಳಿಗೆ ಹೊಡೆದ ಆರೋಪ: ಶಿಕ್ಷಕರ ಮೇಲೆ ಹಲ್ಲೆ ಮಾಡಿದ ತಂದೆ ತಾಯಿ ಅರೆಸ್ಟ್..

ಮದುವೆ ಯಾವಾಗಾ ಅಂತಾ ಕೇಳೋ ಆಂಟಿರಿಗೆ ಈ ಟೀ ಕುಡ್ಸಬೇಕಂತೆ..

- Advertisement -

Latest Posts

Don't Miss