Saturday, July 27, 2024

Latest Posts

ಮೆಟ್ರೋ ಕಾಮಗಾರಿಯಿಂದ ಮತ್ತೊಂದು ದುರಂತ…!ಎಚ್ಚೆತ್ತುಕೊಳ್ಳದ ರಾಜಕೀಯ ನಾಯಕರು..?!

- Advertisement -

State News:

ಮೊನ್ನೆಯಷ್ಟೇ ನಮ್ಮ ಮೆಟ್ರೋ  ಕಾಮಾಗಾರಿಗೆ ಎರಡು ಜೀವಗಳನ್ನು ಬಲಿ ಪಡೆದಿತ್ತು. ಇದೀಗ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನಿಗೆ ಗಾಯವಾಗಿರುವಂತಹ ಘಟನೆ ನಗರದ ಬ್ರಿಗೇಡ್​​ ರಸ್ತೆಯಲ್ಲಿ ನಡೆದಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಬ್ರಿಗೇಡ್ ಟವರ್ ಬಳಿಯ ಜಾನ್ಸನ್​ ಮಾರ್ಕೆಟ್​​​ ರಸ್ತೆಯ ಮಧ್ಯೆ ಭಾಗದಲ್ಲಿ ಏಕಾಏಕಿ ಗುಂಡಿ ಬಿದ್ದು ಅವಘಡ ಉಂಟಾಗಿತ್ತು. ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಅಶೋಕನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ರಸ್ತೆ ಗುಂಡಿ ಸುತ್ತಲೂ ಬ್ಯಾರಿಕೇಡ್​ ಮತ್ತು ಪರದೆ ಹಾಕಲಾಗಿದೆ. ಬ್ರಿಗೇಡ್ ಟವರ್ ಬಳಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

“ಹುಬ್ಬಳ್ಳಿಯಲ್ಲಿ ನಡೆಸುತ್ತಿರುವುದು ಯುವಜನೋತ್ಸವ ಅಲ್ಲ ಯುವ ವಿನಾಶೋತ್ಸವ”..!: ಸಿದ್ದರಾಮಯ್ಯ

ಹುಬ್ಬಳ್ಳಿಯಲ್ಲಿ ಮೋದಿ ಆಗಮನಕ್ಕೆ ಕ್ಷಣಗಣನೆ..!

“ಚಿಕ್ಕ ಬಳ್ಳಾಪುರ ಉತ್ಸವಕ್ಕೆ ನನ್ನ ವಿರೋಧವಿದೆ”: ವಿನೋಧ ಶ್ಯಾಮ್

- Advertisement -

Latest Posts

Don't Miss