Thursday, June 19, 2025

Latest Posts

ಸರ್ಕಾರಿ ಕಚೇರಿಗೆ ಭೇಟಿ ನೀಡಿ, ಅಟೆಂಡೆನ್ಸ್ ಹಾಕದ ನೌಕರರ ಕ್ಲಾಸ್ ತೆಗೆದುಕೊಂಡ ಸಚಿವರು

- Advertisement -

Political News: ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿದ್ದು, ಸರ್ಕಾರಿ ನೌಕರರಿಗೆಲ್ಲ ಕ್ಲಾಸ್ ತೆಗೆದುಕ“ಂಡಿದ್ದಾರೆ.

ಫೈಲ್‌ಗಳನ್ನು ಸರಿಯಾಗಿ ಮೂವ್ ಮಾಡದ ಕಾರಣ, ಕೃಷ್ಣ ಬೈರೇಗೌಡರು ನೌಕರರಿಗೆ ಕ್ಲಾಸ್ ತೆಗೆದುಕ“ಂಡಿದ್ದು, ಬೇರೆ ಕಡೆಗಳಲ್ಲಿ 10ಕ್ಕೂ ಹೆಚ್ಚು ಫೈಲ್‌ಗಳು ಮೂವ್ ಆಗುತ್ತಿದೆ. ನಿಮ್ಮಲ್ಲಿ 6ಕ್ಕೂ ಕಡಿಮೆ ಇದೆಯಲ್ಲ ಯಾಕೆ..? ಕಾರಣ ನೀಡಿ, ಪಾಳೇಗಾರ ಸಾಹೇಬ್ರು ನಿಮಗೆ ಬಂದು ಸಲಾಮ್ ಮಾಡಿ, ಪಾದ ಪೂಜೆ ಮಾಡಬೇಕಾ..? ಎಂದು ಸಚಿವರು ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಅಲ್ಲದೇ ಲಂಚ ಸ್ವೀಕರಿಸುವ ಬಗ್ಗೆ ಓಪನ್ ಆಗೇ ಮಾತನಾಡಿರುವ ಸಚಿವರು, ರನ್ನಿಂಗ್ ರೇಟ್ ಎಷ್ಟಿದೆ ಅಂತಾ ಬರೆದು ಹಾಕಿಬಿಡಿ. ಇದರ ಬಗ್ಗೆ ನಾನಲ್ಲ ಜನ ಮಾತನಾಡುತ್ತಿದ್ದಾರೆ. ನಿಮ್ಮನ್ನು ಕಂಡರೆ ಭಯ ಅವರಿಗೆ, ಯಾಕಂದ್ರೆ ಅವರ ಫೈಲ್ ನಿಮ್ಮ ಕೈಯಲ್ಲಿದೆ. ಆ ಕಾರಣಕ್ಕೆ ನೀವೇನಾದರೂ ಮಾಡಿಬಿಟ್ಟರೆ ಅಂತಾ ಭಯ ಅವರಿಗೆ. ಹಾಗಾಗಿ ರನ್ನಿಂಗ್ ರೇಟ್ ಎಷ್ಟು ಅಂತಾ ಹೇಳಿಬಿಡಿ ಎಂದು ಸಚಿವರು ವ್ಯಂಗ್ಯವಾಡಿಯೇ ಮಾತನಾಡಿದ್ದಾರೆ.

ಅಲ್ಲದೇ ಕಚೇರಿಗೆ ಬಂದು ಅಟೆಂಡೆನ್ಸ್ ಹಾಕದೇ ಇರುವವರಿಗೂ ಸಚಿವರು ಕ್ಲಾಸ್ ತೆಗೆದುಕ“ಂಡಿದ್ದಾರೆ. ಸಿಎಲ್ ಹಾಕಿದ್ರೆ, ಅದಕ್ಕಾಗಿ ಕಾರಣ ನೀಡಿ, ಲೆಟರ್ ಕ“ಡಬೇಕಲ್ವಾ..? ಅದೆಲ್ಲಿದೆ..? ನಾನು ಬಂದಿದ್ದಕ್ಕೆ, ಈಗ ಟಕ್ ಟಕ್ ಅಂತಾ ಅಟೆಂಡೆನ್ಸ್ ಬಿದ್ದಿದೆ ಎಂದು ನೌಕರರ ದಿನಚರಿ ಬಗ್ಗೆ ಕಂಡು ಹಿಡಿದಿರುವ ಸಚಿವರು, ಅಟೆಂಡೆನ್ಸ್ ಹಾಕಿ, ಆಫೀಸಿನಿಂದ ಆಚೆ ಹೋಗುವವರನ್ನು ವಿಚಾರಿಸಿ, ಕ್ರಮ ಕೈಗ“ಳ್ಳಲು ಮುಂದಾಗಿದ್ದಾರೆ.

ಸಚಿವ ಕೃಷ್ಣಭೈರೇಗೌಡರು ಈ ರೀತಿ ಸರ್ಕಾರಿ ಕಚೇರಿಗಳಿಗೆ ಧಿಢೀರ್ ಎಂದು ಭೇಟಿ ನೀಡಿ, ನೌಕರರಿಗೆ ಕ್ಲಾಸ್ ತೆಗೆದುಕ“ಳ್ಳುತ್ತಿರುವುದು ಇದೇ ಮ“ದಲೇನಲ್ಲ. ಇದಕ್ಕೂ ಮುನ್ನ ಹಲವು ಬಾರಿ, ಹಲವು ಕಚೇರಿಗಳಿಗೆ ಅಚಾನಕ್ ಆಗಿ ವಿಸಿಟ್ ಮಾಡಿ, ಕ್ರಮ ಕೈಗ“ಂಡಿರುವ ಉದಾಹರಣೆಗಳಿದೆ. ಸಚಿವರ ಈ ರೀತಿಯ ಕೆಲಸಗಳಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss