Tuesday, September 23, 2025

Latest Posts

ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ವಿಜಯೇಂದ್ರ ಇರುವ ವಿಚಾರದ ಬಗ್ಗೆ ವಿಜಯೇಂದ್ರ ಹೇಳಿದ್ದಿಷ್ಟು..

- Advertisement -

Hassan News: ಹಾಸನ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರದ ಬಗ್ಗೆ ಹಾಸನದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರನ್ನ ಯಾರನ್ನ ಮಾಡಬೇಕು ಅಂತಾ ಮೊನ್ನೆ ಶಾಸಕರ ಸಭೆಯನ್ನು ಪಕ್ಷದ ಅಧ್ಯಕ್ಷರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅರುಣ್ ಸಿಂಗ್ ಅವರು ಅಭಿಪ್ರಾಯವನ್ನ ತೆಗೆದುಕೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ತೀರ್ಮಾನ‌‌ ಮಾಡಿ ಘೋಷಣೆ‌ ಮಾಡ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಹೇಳಿದರು..

ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ವಿಜಯೇಂದ್ರ ಇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ‌ ಅಧ್ಯಕ್ಷರು ಯಾರಾಗಬೇಕು ಅನ್ನೋ‌ ಪೈಪೋಟಿ ಏನಿಲ್ಲ. ಒಂದು ರಾಷ್ಟ್ರೀಯ ಪಕ್ಷ ಎಲ್ಲಾ ಹಿರಿಯರು ಕೂತು ಏನು ತೀರ್ಮಾನ ಮಾಡ್ತಾರೆ, ಅದರ ಪ್ರಕಾರ ನಾವು ಸಾಗಬೇಕು. ನಾನು ಯಾವುದೇ ಸ್ಥಾನಮಾನವನ್ನ ಕೊಟ್ಟರೂ ಕೂಡಾ ಅದನ್ನ ಯಶಸ್ವಿಯಾಗಿ ನಿರ್ವಹಿಸುವ ಶಕ್ತಿ ನನ್ನನ್ನೂ ಸೇರಿ ನಮ್ಮ ರಾಜ್ಯ ನಾಯಕರಲ್ಲಿದೆ‌ ಎಂದು ವಿಜಯೇಂದ್ರ ಹೇಳಿದ್ದಾರೆ.

ನಮ್ಮ‌ಮುಂದೆ ಇರೋದು ಯಾರು ಅಧ್ಯಕ್ಷರಾಗ್ತಾರೆ, ಯಾರು ವಿರೋಧ ಪಕ್ಷದ ನಾಯಕರಾಗ್ತಾರೆ ಅನ್ನೋದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಕ್ಕೆ ಅವರದ್ದೇ ಆದ ಜವಾಬ್ದಾರಿ ಇದೆ. ಒಬ್ಬ ಉತ್ತಮ ವಿರೋಧ ಪಕ್ಷದ ನಾಯಕನ್ನ ಆಯ್ಕೆ‌‌‌‌ ಮಾಡಬೇಕಾಗುತ್ತದೆ. ಅದನ್ನ ಹಿರಿಯರು ತೀರ್ಮಾನ ಮಾಡ್ತಾರೆ, ಅಭಿಪ್ರಾಯ ತೆಗೆದುಕೊಂಡಿದ್ದಾರೆ. ಅದೇ ರೀತಿ ಅಧ್ಯಕ್ಷರ ವಿಚಾರದಲ್ಲಿಯೂ ಕೂಡಾ ಪಕ್ಷ ಬಹಳ ಬಹಳ‌ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಸದ್ಯದಲ್ಲಿಯೇ ಅದನ್ನ ತೀರ್ಮಾನ ಮಾಡ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಗಾಳಿಸುದ್ದಿ ಎಂದ ಹೆಚ್.ಡಿ.ಕುಮಾರಸ್ವಾಮಿ

‘ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಉಳಿದ ಗ್ಯಾರಂಟಿ ಜಾರಿ ಮಾಡಲಿದ್ದೇವೆ’

‘ಬಿಬಿಎಂಪಿಯ 675 ಕೋಟಿ ರೂ.ಗಳ ಎಲ್ ಒಸಿ ಬಿಡುಗಡೆ ಮಾಡಿಲ್ಲ, ಏಕೆ?’

- Advertisement -

Latest Posts

Don't Miss