Sunday, September 8, 2024

Latest Posts

ಮೋದಿಯ ಭದ್ರತೆಯ ಲೋಪದ ಕುರಿತು ಕಳವಳ ವ್ಯಕ್ತಪಡಿಸಿದ:ರಾಷ್ಟ್ರಪತಿ

- Advertisement -

ನೆನ್ನೆ ನರೇಂದ್ರ ಮೋದಿಯವರು ಪಂಜಾಬಿನ ಫಿರೋಜ್‌ಪುರ್‌ಗೆ ಹಲವಾರು ಕಾಮಗಾರಿಗಳ ಶಂಕುಸ್ಥಾಪನೆಗೆ ಹೋಗಿದ್ದರು. ಅಲ್ಲಿಂದ ತೆರಳುವ ವೇಳೆ ಅವರಿಗೆ ಭದ್ರತೆಯಲ್ಲಿ ಲೋಪ ಉಂಟಾಗಿತ್ತು, ಈ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳವ್ಯಕ್ತಪಡಿಸಿದ್ದಾರೆ.
ಜೊತೆಗೆ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರನ್ನು ಬೇಟಿಯಾದರು. ಮತ್ತು ನೆನ್ನೆ ಉಲ್ಲಂಘನೆಯಾದ ಮೊದಲ
ಪತ್ರವನ್ನು ಸ್ವೀಕರಿಸಿದರು. ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಜೊತೆಗೆ ನೆನ್ನೆ ಆದಂತಹ ಘಟನೆ ಗಂಬೀರವಾದದ್ದು ಇದರಿಂದ ಅಧ್ಯಕ್ಷರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಮೋದಿ ಕೂಡ ಟ್ವೀಟ್ ಮಾಡಿದ್ದು ರಾಷ್ಟ್ರಪತಿ ಅವರನ್ನು ಕರೆದಿದ್ದೇನೆ. ಅವರ ಕಾಳಜಿಗೆ ಧನ್ಯವಾದಗಳು. ಸದಾ ಶಕ್ತಿಯ ಮೂಲವಾಗಿರುವ ಅವರ ಶುಭ ಹಾರೈಕೆಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಧನ್ಯವಾದ ಅರ್ಪಿಸಿದ್ದಾರೆ.

- Advertisement -

Latest Posts

Don't Miss