Wednesday, June 18, 2025

Latest Posts

ರಾಜೀನಾಮೆ ವಿಷಯದಲ್ಲಿ “ಉಲ್ಟಾ ಹೊಡೆದ” ಪ್ರದೀಪ್ ಈಶ್ವರ್..!

- Advertisement -

Political News: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಲೋಕಸಭೆ ಚುನಾವಣಾ ಫಲಿತಾಂಶ ಬರುವುದಕ್ಕೂ ಮುನ್ನ, ಚಿಕ್ಕಬಳ್ಳಾಪುರದಲ್ಲಿ ಗೆಲ್ಲೋದು, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಗೆದ್ದೇ ಗೆಲ್ಲುತ್ತಾರೆ. ಡಾ.ಸುಧಾಕರ್ ಸೋಲುತ್ತಾರೆ. ಸುಧಾಕರ್ ಗೆದ್ದರೆ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ನಾನು ಆಗ ಚಾಲೆಂಜ್ ಹಾಕಿದ್ದೆ. ಆದರೆ, ಅವರು ಚಾಲೆಂಜ್ ಸ್ವೀಕರಿಸಿ, ಮುಂದಕ್ಕೆ ಬಂದಿಲ್ಲ. ಬಂದಿದ್ದರೆ, ನಾನು ಈಗ ರಾಜೀನಾಮೆ ನೀಡುತ್ತಿದ್ದೆ ಎಂದು ಉಲ್ಟಾ ಹೊಡೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರದೀಪ್ ಈಶ್ವರ್, ನಾನು ಚುನಾವಣೆಗೆ ಮುಂಚೆ ಬಹಿರಂಗ ಸವಾಲು ಹಾಕಿದ್ದೆ. ತಾವು ಸವಾಲು ಸ್ವೀಕರಿಸಿದ್ರೆ, ನಾನು ಸ್ವೀಕರಿಸ್ತಿನಿ ಅಂತಾ. ಅವರು ಸವಾಲು ಸ್ವೀಕರಿಸಿಲ್ಲಾ. ಅನೇಕ ಮಾಧ್ಯಮಗಳು ಕೇಳಿದ್ರು ಅವರು ಸವಾಲು ಸ್ವೀಕರಿಸಿಲ್ಲಾ. ನಾನು ಇವಾಗ್ಲೂ ಸಿದ್ದನಿದ್ದೇನೆ. ನನ್ನ‌ ಮಾತಿನ ಮೇಲೆ ನಾನು ನಿಲ್ತಿನಿ. ಅವರು ಈಗ ಎಂಪಿಗೆ ರಾಜೀನಾಮೆ ಕೊಡ್ಲಿ. ನಾನು ಎಂಎಲ್ಎ ಗೆ ರಾಜೀನಾಮೆ ಕೊಡ್ತಿನಿ. ಇಬ್ರೂ ಎಲೆಕ್ಷನ್ ಗೆ ಹೋಗ್ತಿವಿ. ನಾನು ನನ್ನ ಮಾತು ತಪ್ಪಲ್ಲ. ನಾನು ಪದೇ ಪದೇ ಸವಾಲು ಹಾಕಿದ್ರೂ ಅವ್ರು ಸ್ವೀಕರಿಸಿಲ್ಲ. ಸವಾಲು ಸ್ವೀಕರಿಸದೇ ಇರೋದು ಅವ್ರ ತಪ್ಪು ಎಂದಿದ್ದಾರೆ.

ನಿನ್ನೆ ಅವ್ರ ಕಾರ್ಯಕರ್ತರು ಸಿಕ್ಕಾಪಟ್ಟೆ ದಾಂಧಲೆ ಮಾಡಿದಾರೆ. ಚಿಕ್ಕಬಳ್ಳಾಪುರ ನನ್ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಎರಡು ಕಲ್ಲು ಮನೆ ಒಳಗೆ ಬಿದ್ದಿವೆ. ದೇಷ ರಾಜಕಾರಣ ಮತ್ತೆ ಸ್ಟಾರ್ಟ್ ಆಗ್ತಾ ಇದೆ ಚಿಕ್ಕಬಳ್ಳಾಪುರದಲ್ಲಿ. ಒಂದು ವರ್ಷದಿಂದ ನೆಮ್ಮದಿಯಾಗಿದ್ವಿ. ರಾಜ್ಯ ಸರ್ಕಾರ ನಮ್ಮದಿದೆ. ಜಾಸ್ತಿ ಬಾಲ ಬಿಚ್ಚಿದ್ರೆ ಹೆಡೆಮರಿ ಕಟ್ಟಬೇಕಾಗುತ್ತೆ ಎಂದು ಪ್ರದೀಪ್ ಈಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ.

ನಿನ್ನೆ 144 ಇತ್ತು, ಸೆಲೆಬ್ರೇಟ್ ಮಾಡ್ಲಿ. ನಾಗಾರ್ಜುನ ಕಾಲೇಜು ಬಳಿ ಎರ್ರಾ ಬಿರ್ರಿ ಡ್ರೈವ್ ಮಾಡಿದಾರೆ. ಅಷ್ಟು ದೂರ ರೋಡ್ ಶೋ ಮಾಡಿದಾರೆ. ನಾನು ಕೊಟ್ಟಿರೋ ಮಾತಿಗೆ ಹಿಂದೆ ಹೋಗುವ ಮನುಷ್ಯ ಅಲ್ಲ. ಸವಾಲು ಸ್ವೀಕರಿಸದೇ ಇರೋದು ನಿಮ್ಮ ತಪ್ಪು. ನೀವು ಎಂಪಿ ಆಗಿದೀರಾ? ನಾ ಎಂಎಲ್ ಎ ಆಗಿದೀನಿ. ಸ್ಟಿಲ್ ಐ ಆ್ಯಮ್ ರೆಡಿ. ನೀವು ರಾಜೀನಾಮೆ ಪತ್ರ ಕೊಡಿ. ನೀವು ಕೊಟ್ಟಿದ 5 ನಿಮಿಷಕ್ಕೆ ನಾನ್ ಕೊಡ್ತಿನಿ. ನೀವು ಎಂಪಿ ಎಂಎಲ್ಎ ಆಗಿ ಸ್ಪರ್ಧಿಸಿ. ನಾನು ಸ್ಪರ್ಧಿಸ್ತಿನಿ. ಪ್ರದೀಪ್ ಈಶ್ವರ ಅಖಾಡದಲ್ಲಿ ಇದ್ದಿದ್ರೆ ಗೇಮ್ ಡಿಫರೆಂಟ್ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ರಕ್ಷಾ ರಾಮಯ್ಯ, ಸೀತಾರಾಮಯ್ಯ ಒಳ್ಳೇ ಕುಟುಂಬ. ಅವ್ರ ಹಿಂದೆ ಇರೋರು ಚೂರಿ ಹಾಕಿದ್ರು. ನಾನು ಹೇಳಿದ್ದೆ ಚಿಕ್ಕಬಳ್ಳಾಪುರದಲ್ಲಿ ಸ್ವಂತ ರಾಜಕಾರಣ ಮಾಡ್ವೇಕು ಅಂತಾ ಲೀಡರ್ ಹಿಂದೆ ಹೋದೋರು ಸರ್ವನಾಶ ಆಗಿರೋದು ಚಿಕ್ಕಬಳ್ಳಾಪುರ ಚರಿತ್ರೆ ಹೇಳುತ್ತೆ. ನಾನು ಚರಿತ್ರೆ ಅರ್ಥ ಮಾಡಿಕೊಂಡಿರೋದಕ್ಕೆ ಸುಧಾಕರ್ ವಿರುದ್ಧ ಗೆದ್ದೆ.

ಕೆಲವರು ಬೆನ್ನಿಗೆ ಚೂರಿ ಹಾಕ್ತಾರೆ. ನಂಬೋಕೆ ಹೋಗ್ಬೇಡಿ ಅಂತಾ ಮಗು ಥರಾ ಹೇಳಿದ್ದೆ. ಆದ್ರೆ ನಂಬಿದ್ದೆ ಸೋಲಿಗೆ ಕಾರಣ. ಲೀಡರ್ ನಂಬಿದ್ದಕ್ಕೆ ಸೋಲಾಯ್ತು. ಲೀಡರ್ ಗಳು ಬೂತ್ ನಲ್ಲೂ ಲೀಡ್ ಕೊಟ್ಟಿಲ್ಲಾ. ಸೀತಾರಾಮಣ್ಣ, ರಕ್ಷಾ ರಾಮಯ್ಯಗೆ ರಾಜಕೀಯ ಗೊತ್ತಿಲ್ಲಾ. ರಾಜಕಾರಣಕ್ಕೆ ಹೊಸಬ ಅಂದ್ರು ನಂಗೆ. ನಂಗೆ ಸುಧಾಕರ್ ನಾ ಇ‌ನ್ನೊಂದು ಸಲಾ ಸೋಲಿಸೋದು ಹೇಗೆ ಗೊತ್ತು ಅಂದೆ. ನನ್ ಸ್ಟ್ರಾಟಜಿ ಅವ್ರು ಕೇಳಿಲ್ಲ ಎಂದಿದ್ದಾರೆ.

ಪ್ರತಾಪ ಸಿಂಹ ಭ್ರಮೆಲಿ ಇದಾರೆ. ಅವ್ರಿಗೆ ಟಿಕೆಟ್ ಯಾಕೆ ಮಿಸ್ ಆಯ್ತು. ಅದ್ಕೆ ಕರೆಕ್ಟ್ ರೀಸನ್ ಹೇಳ್ಲಿ. ನಾನು ರಾಜೀನಾಮೆ ಕೊಡ್ತಿನಿ. ಅಖಾಡಕ್ಕೆ ಇಳಿದ್ರೆ ಎಂಪಿ, ಎಂಎಲ್ಎ ಎರಡೂ ಗೆಲ್ತಿನಿ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು

ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್

ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ

- Advertisement -

Latest Posts

Don't Miss